ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ. ಎಸ್. ಅರುಣ್ ದಮನ್ (ದಿಯು ದಮನ್ ಕೇಂದ್ರಾಡಳಿತ ಪ್ರದೇಶ) #Diu Daman ಅರ್ಜಿ ಸಮಿತಿ ಮತ್ತು ವಸತಿ ಸಮಿತಿಯ ಸದಸ್ಯರೊಂದಿಗೆ ಪ್ರವಾಸದಲ್ಲಿ ದೀಯು ಧಮನ್ ಮತ್ತು ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರನ್ನು ಭೇಟಿ ಮಾಡಿದರು.
ಪ್ರಫುಲ್ ಪಟೇಲ್ ಅವರು ಈ ಹಿಂದೆ ಗುಜರಾತಿನ ಗೃಹ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು. ದೀಯು ಧಮನ್ ಮತ್ತು ಲಕ್ಷದ್ವೀಪಕ್ಕೆ ಕಳೆದ 9 ವರ್ಷಗಳಿಂದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಕೆಲಸ ಮಾಡಿರುವ ಪ್ರಫುಲ್ ಪಟೇಲ್ ಅವರ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ ಮೋದಿ ಅವರ ಜೊತೆ ನೇರವಾಗಿ ನಿರಂತರ ಸಂಪರ್ಕದಲ್ಲಿದ್ದು ಯಾವ ರೀತಿ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಆರ್ಥಿಕ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಬಹುದು ಎಂದು ವಿಶ್ಲೇಷಿಸಲಾಯಿತು. ಹಾಗೂ ಪ್ರಫುಲ್ ಪಟೇಲ್ ಅವರಿಗೆ ಒಬ್ಬ ಉತ್ತಮ ಆಡಳಿತಾಧಿಕಾರಿಯನ್ನುವ ಹೆಸರು ಕೂಡ ಇದೆ.
ನಮ್ಮ ರಾಜ್ಯದ ಮೈಸೂರಿನ IAS ಅಧಿಕಾರಿ ಅರುಣ್ ಅವರು ಅಲ್ಲಿಯ ಅಧಿಕಾರಿಯಾಗಿ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿನ ಅಭಿವೃದ್ಧಿ ಮತ್ತು ಶಾಲೆ, ಆಸ್ಪತ್ರೆಗಳಿಗೆ ಬೇಟಿ ಮಾಡಿ ಅತ್ಯಂತ ಅದ್ಭುತವಾದ ಅಭಿವೃದ್ಧಿಯನ್ನು ಕಳೆದ ಆರೇಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಜೊತೆ ಸಮಿತಿಯ ಅಧ್ಯಕ್ಷರಾದ ನಮ್ಮ ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ ಕೆ ಪ್ರಾಣೇಶ್, ವಿಧಾನ ಪರಿಷತ್ ಶಾಸಕ ಸುಜಾ ಕುಶಾಲಪ್ಪ, ಸಂಕನೂರ, ಬಿ. ಜಿ. ಪಾಟೀಲ್, ಮಧು ಮಾದೇಗೌಡ ಸೇರಿದಂತೆ ಎಲ್ಲರೂ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post