ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ನಾಲ್ಕನೆಯ ಓಪನ್ ರಾಷ್ಟçಮಟ್ಟದ ಕರಾಟೆ ಚಾಂಪಿಯನ್’ಶಿಪ್’ನಲ್ಲಿ ಶಿವಮೊಗ್ಗ ಜಿಲ್ಲಾ ಲಿಬರ್ಟಿ ಕ್ವೀನ್ಸ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಮಕ್ಕಳ ಹಲವು ಬಹುಮಾನಗಳನ್ನು ಪಡೆಯವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬೇಲೂರಿನಲ್ಲಿ ವಜ್ರಕಾಯ ಕರಾಟೆ ಹಾಗೂ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಚರಣ್ ಸರ್ಕಾರಿ ಶಾಲೆ ಹೈಹೊಳೆ ಕಟ ಹಾಗೂ ಕುಮಿಟೆ ವಿಭಾಗದಲ್ಲಿ ದ್ವೀತಿಯ ಸ್ಥಾನ, ಶೃತಿ ಮೇರಿ ಮೆಕ್ಯೂಲ ಶಾಲೆ ವಿದ್ಯಾರ್ಥಿನಿ ಕಟ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯಾ ಸ್ಥಾನ, ದೀಪಕ್ ಕಿರಣ ಕೇಂದ್ರ ವಿದ್ಯಾಲಯ ಕಟ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯಾ ಸ್ಥಾನ, ಮಧು ಇನ್ಫಾö್ಯಂಟ್ ಜೀಸಸ್ ಸ್ಕೂಲ್ ಕಟ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯಾ ಸ್ಥಾನ ಪಡೆದಿದ್ದಾರೆ.
Also read: ಸ್ಮಾರ್ಟ್ ಕ್ಲಾಸ್ ಅನುದಾನ ದುರ್ಬಳಕೆ | ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ: ಡಿ.ಎಸ್. ಅರುಣ್ ಒತ್ತಾಯ
ಇದರೊಟ್ಟಿಗೆ, ನೀಕ್ಷ ಇನ್ಫ್ಯಾಂಟ್ ಜೀಸಸ್ ಸ್ಕೂಲ್ ಕಟ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಜಗದೀಶ್ ಇನ್ಫ್ಯಾಂಟ್ ಜೀಸಸ್ ಸ್ಕೂಲ್ ಕಟ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯಾ, ಭಾನು ಪ್ರಕಾಶ್ ಇನ್ಫ್ಯಾಂಟ್ ಜೀಸಸ್ ಸ್ಕೂಲ್ ಕಟ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅಕಾಡೆಮಿ ಹಾಗೂ ಜಿಲ್ಲೆಗೆ ಕೀರ್ತಿ ತಂದ ಈ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಜಿಲ್ಲಾ ಲಿಬರ್ಟಿ ಕ್ವೀನ್ಸ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಅಧ್ಯಕ್ಷರು, ಜಿಲ್ಲಾ ಕರಾಟೆ ಅಸೋಸಿಯೇಶನ್ ಖಜಾಂಚಿ ಮೀನಾಕ್ಷಿ, ಇಂಚನ, ಶಾಲಾ ಮುಖೋಪಾಧ್ಯಾಯರು ಹಾಗೂ ಪೋಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post