ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಅಪಾರವಾಗಿ ಬೆಳೆದು ಸಾರ್ವಜನಿಕರಿಗೆ ತೊಂದರೆ ಮಾತ್ರವಲ್ಲ ಅಪಾಯಕಾರಿಯಾಗಿದ್ದ ಗಿಡಗಂಟೆಗಳನ್ನು ನಗರಸಭೆ ಹಾಗೂ ಗೃಹ ರಕ್ಷಕದಗಳ ಸಿಬ್ಬಂದಿಗಳೊಂದಿಗೆ ಅಗ್ನಿಶಾಮಕ ಸಿಬ್ಬಂದಿಗಳು ಸ್ವಚ್ಛಗೊಳಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.
ಹೊಸ ಬುಳ್ಳಾಪುರದಲ್ಲಿರುವ ಅಗ್ನಿಶಾಮಕ ಕಚೇರಿಯ ಹಿಂಭಾಗದ ರಸ್ತೆ ಹಾಗೂ ಕಾಂಪೌಂಡ್ ಸುತ್ತಲು ಭಾರೀ ಪ್ರಮಾಣದಲ್ಲಿ ಗಿಡಗಂಟೆಗಳು ಬೆಳೆದಿತ್ತು. ಇದು ಸ್ಥಳೀಯರ ಸಂಚಾರಕ್ಕೆ ತೊಂದರೆಯಾಗುತ್ತಿದ್ದುದು ಮಾತ್ರವಲ್ಲದೇ ಹಾವು, ಹುಳ ಹೊಪ್ಪಟೆಗಳು ಸೇರಿಕೊಂಡು ಅಪಾಯಕಾರಿಯಾಗಿಯೂ ಸಹ ಪರಿಣಮಿಸಿತ್ತು.
ಇದನ್ನು ಗಮನಿಸಿದ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್ ಅವರು, ಇಡಿಯ ಪ್ರದೇಶವನ್ನು ಸ್ವಚ್ಛಗೊಳಿಸಲು ತೀರ್ಮಾನಿಸಿದರು.
ನಗರಸಭೆ ಹಾಗೂ ಗೃಹ ರಕ್ಷಕದಳದ ಸಹಕಾರ ಪಡೆದು ಇಂದು ಮುಂಜಾನೆ ಜೆಸಿಬಿ ಮೂಲಕ ಕಚೇರಿ ಹಿಂಭಾಗದ ರಸ್ತೆ ಸೇರಿದಂತೆ ಇಡಿಯ ಪ್ರದೇಶದಲ್ಲಿ ಬೆಳೆದಿದ್ದ ಅಪಾರ ಗಿಡಗಂಟೆಗಳನ್ನು ಬುಡ ಸಹಿತ ಕಿತ್ತು, ಸಂಪೂರ್ಣ ಸ್ವಚ್ಛಗೊಳಿಸಲಾಯಿತು.
ಈ ಕಾರ್ಯಕ್ಕೆ ಸಹಕಾರ ನೀಡಿದ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ವಸಂತಕುಮಾರ್ ಅವರು ಧನ್ಯವಾದ ಹೇಳಿದ್ದಾರೆ. ಅಲ್ಲದೇ, ಅಗ್ನಿಶಾಮಕ ದಳದ ಈ ಕಾರ್ಯಕ್ಕೆ ಸ್ಥಳೀಯರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post