ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬಾಕ್ಸ್ ಡ್ರೈನ್, ರಸ್ತೆ ಡಾಂಬರೀಕರಣ, ವಿದ್ಯುತ್ ಹಾಗೂ ಒಳಚರಂಡಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು 8ನೆಯ ವಾರ್ಡ್ನ 41ನೆಯ ಬೂತ್ ಸಂಖ್ಯೆಯ ನಾಗರಿಕರು ಪಾಲಿಕೆ ಸದಸ್ಯ ಚನ್ನಬಸಪ್ಪ ಅವರಿಗೆ ಮನವಿ ಮಾಡಿದರು.
ಈ ಕುರಿತಂತೆ ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಅರ್ಪಿಸಿದ ಅವರು, ಸವಿ ಬೇಕರಿ ಹಿಂಭಾಗದ ಬಸವ ಮಂಟಪದ ಸುತ್ತಲಿರುವ ಕ್ರಾಸ್ ರಸ್ತೆಗಳು ಹಲವಾರು ದಶಕಗಳಿಂದಲೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು ಶೀಘ್ರ ಬಾಕ್ಸ್ ಡ್ರೈನ್, ರಸ್ತೆ ಡಾಂಬರೀಕರಣ, ವಿದ್ಯುತ್, ಒಳಚರಂಡಿ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ನಗರಪಾಲಿಕೆಯ ದಾಖಲೆಯಲ್ಲಿ ರಸ್ತೆಯು 7.5 ಹಾಗೂ 8 ಮೀಟರ್ ಎಂದಿದೆ. ಆದರೆ ವಾಸ್ತವದಲ್ಲಿ ಬಹಳ ಒತ್ತುವರಿಯಾಗಿ ರಸ್ತೆ ಕಿರಿದಾಗಿದ್ದು ಇದನ್ನು ಸಹ ಸರಿಪಡಿಸಲು ನಾಗರಿಕರು ಒತ್ತಾಯಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಚೆನ್ನಿಯವರು ಸ್ಥಳದಲ್ಲಿ ಹಾಜರಿದ್ದ ಪಾಲಿಕೆಯ ಅಭಿಯಂತರರಿಗೆ ಸ್ಥಳದಲ್ಲೇ ಸರಿ ಪಡಿಸುವಂತೆ ಹಾಗೂ ಪಾಲಿಕೆಯ ವಿಶೇಷ ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡುವಂತೆ ಸೂಚಿಸಿರು.
ಈ ಸಂದರ್ಭದಲ್ಲಿ 1 ನೇ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಪರಮೇಶ್ ನಾಯಕ್, ನಗರ ಕಮಿಟಿಯ ಸದಸ್ಯರಾದ ದಿನೇಶ್, ಮಲ್ಲಿಕಾರ್ಜುನ ಸ್ವಾಮಿ, ವಾರ್ಡ್ ಅಧ್ಯಕ್ಷರಾದ ಲಕ್ಷ್ಮೀ ಕಾಂತ್ ಭಟ್, ಕಾರ್ಯದರ್ಶಿ ವೆಂಕಟೇಶ ಗೌಡರು, ಬೂತ್ ಅಧ್ಯಕ್ಷರಾದ ನಾಗರಾಜ್ ರಾವ್, ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಹಾಗೂ ಇತರ ಪ್ರಮುಖರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post