Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅಕ್ಷರ ಕ್ರಾಂತಿಗೆ ಸುದೀಪ್ ಸ್ಪರ್ಶ: ಸಾಗರದ ನಾಲ್ಕು ಸರ್ಕಾರಿ ಶಾಲೆ ದತ್ತು ಸ್ವೀಕಾರ

ಖಾಸಗಿ ಶಾಲೆಗಳಂತೆ ಅಭಿವೃದ್ಧಿ, ಸ್ವಂತ ವೆಚ್ಚದಲ್ಲಿ ಅತಿಥಿ ಶಿಕ್ಷಕರ ನಿಯೋಜನೆ: ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಅಧ್ಯಕ್ಷರು ಏನೆಂದರು?

August 11, 2020
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ನಟ ಸುದೀಪ್, ಇವನ್ನು ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡುವ ಮೂಲಕ ಎಲ್ಲ ಸೆಲೆಬ್ರೆಟಿಗಳಿಗೆ ಮಾದರಿಯಾಗಿದ್ದಾರೆ.

ಹೌದು… ಸಾಗರ ತಾಲೂಕಿನ ಆವಿಗೆ, ಹಾಳಸಸಿ(ಹಾಲಸಸಿ) ಎಸ್.ಎನ್. ಬಡಾವಣೆ ಹಾಗೂ ಎಂಎಲ್ ಹಳ್ಳಿಯ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಕಾನೂನಾತ್ಮಕವಾಗಿ ದತ್ತು ಪಡೆದುಕೊಂಡಿದ್ದು, ಅತಿ ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳನ್ನು ಆರಂಭ ಮಾಡಲಿದೆ.

ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಅಧ್ಯಕ್ಷರಾದ ರಮೇಶ್ ಕಿಟ್ಟಿ, ಸುದೀಪ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಯೋಜನೆಯ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಖಾಸಗಿ ಶಾಲೆಗಳಂತೆ ಅಭಿವೃದ್ಧಿ
ಶಿಕ್ಷಣ ಇಲಾಖೆಯ ನಿಯಮಾವಳಿಯಂತೆ ಈ ನಾಲ್ಕು ಶಾಲೆಯ ಶಿಕ್ಷಕರ ವೇತನ ಹೊರತುಪಡಿಸಿ ಉಳಿದ ಸಂಫೂರ್ಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.

ಶಾಲಾ ಕಟ್ಟಡ ನವೀಕರಣ, ಶಿಕ್ಷಣದ ಡಿಜಿಟಲೀಕರಣ, ಉತ್ತಮ ಗುಣಮಟ್ಟದ ಪೀಠೋಪಕರಣ, ಪಾಠೋಪಕರಣ, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು, ಕ್ರೀಡಾ ಉಪಕರಣ, ದಾಖಲೆಗಳನ್ನು ಇರಿಸಲು ಲಾಕರ್ ವ್ಯವಸ್ಥೆ, ಸಮವಸ್ತ್ರ, ಮ್ಯಾಪ್, ಸುಸಜ್ಜಿತವಾದ ಅಡುಗೆ ಕೋಣೆ, ಸಿಸಿ ಕ್ಯಾಮೆರಾ, ರಂಗಮಂದಿರ ಸೇರಿದಂತೆ ಸಂಫೂರ್ಣ ಅಭಿವೃದ್ದಿ ಮಾಡಲಾಗುತ್ತದೆ.

ದೇಶಕ್ಕೊಬ್ಬ ವಿಶ್ವೇಶ್ವರಯ್ಯ, ಒಬ್ಬ ಅಬ್ದುಲ್ ಕಲಾಂರಂತಹ ಸಾಧಕರು ದೊರೆತು ಎಷ್ಟೋ ದಶಕಗಳಾಯಿತು. ನಮ್ಮ ದೇಶಕ್ಕೆ ಸಾಧಕರು ಬೇಕಾಗಿದೆ. ಇಂತಹ ಸಂದರ್ಭದಲ್ಲಿ ದೇಶಕ್ಕಾಗಿಯೇ ಕೊಡುಗೆ ನೀಡುವ ಮಕ್ಕಳನ್ನು ನಾವು ಗುರುತಿಸಿ ಅವರಿಗೆ ಸಂಪೂರ್ಣ ಸಹಕಾರ ನೀಡುವ ಅಗತ್ಯವಿದೆ ಎನ್ನುವುದು ಸುದೀಪ್ ಸರ್ ಮನದಾಳದ ಅಭಿಪ್ರಾಯ. ಹೀಗಾಗಿ, ಈ ನಾಲ್ಕು ಶಾಲೆಗಳನ್ನು ದತ್ತು ಪಡೆದಿದ್ದೇವೆ. ಈ ನಾಲ್ಕು ಶಾಲೆಗಳಿಂದ ನಾಲ್ವರು ಮಕ್ಕಳು ದೇಶಕ್ಕೆ ಕೊಡುಗೆಯಾಗಿ ದೊರೆತರೆ ನಮ್ಮ ಉದ್ದೇಶ ಸಾರ್ಥಕವಾಗುತ್ತದೆ. ಅಕ್ಷರ ಕ್ರಾಂತಿಯೊಂದಿಗೆ ನಾವು ನಮ್ಮ ದೇಶಕ್ಕೆ ನಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುವುದು ಸುದೀಪ್ ಸರ್ ಹಾಗೂ ನಮ್ಮ ಸೊಸೈಟಿಯ ಉದ್ದೇಶ.
-ರಮೇಶ್ ಕಿಟ್ಟಿ
ಅಧ್ಯಕ್ಷರು, ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್‌ 

Click below link to watch video:

https://www.facebook.com/KalpaNews/videos/1034028727032363/?t=1

ಶಾಲೆ ಮಾತ್ರವಲ್ಲ ಪೂರಕ ಸೌಕರ್ಯ ಅಭಿವೃದ್ಧಿ
ಅತ್ಯಂತ ಪ್ರಮುಖವಾಗಿ, ಆವಿಗೆಯಂತಹ ಗ್ರಾಮದ ಶಾಲೆಗೆ ಪ್ರತಿದಿನ 8 ಕಿಲೋ ಮೀಟರ್ ದೂರದ ದುರ್ಗಮ ಹಾದಿಯಲ್ಲಿ ನಡೆದುಕೊಂಡೇ ಬರುವ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ, ಇವರ ಕಷ್ಟವನ್ನು ಅರಿತ ಸೊಸೈಟಿ ಸರ್ಕಾರದೊಂದಿಗೆ ಕೈಜೋಡಿಸಿ ಈ ರಸ್ತೆಯ ಅಭಿವೃದ್ಧಿ ಮಾಡುವುದು ಹಾಗೂ ದೂರದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಮಾಡುವ ಯೋಜನೆಯನ್ನೂ ಸಹ ಹೊಂದಿರುವುದು ನಿಜಕ್ಕೂ ಪ್ರಶಂಸನೀಯ.

ವಿಶೇಷ ಅನುಮತಿಯೊಂದಿಗೆ ಅತಿಥಿ ಶಿಕ್ಷಕರ ನೇಮಕ
ಬಹಳಷ್ಟು ಹಿಂದುಳಿದಿರುವ ಸಾಗರ ತಾಲೂಕಿನ ಆವಿಗೆ ಗ್ರಾಮದಲ್ಲಿ ಶಿಕ್ಷಕರ ಕೊರತೆಯಿದ್ದು ಇದು ಸದಾ ಕಾಲ ಇಲ್ಲಿನ ಸಮಸ್ಯೆಯಾಗಿದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗಿದೆ. ಸರ್ಕಾರದಿಂದ ವಿಶೇಷ ಅನುಮತಿ ಪಡೆದುಕೊಂಡು ಸೊಸೈಟಿ ವೆಚ್ಚದಲ್ಲಿ ಅತಿಥಿ ಉಪನ್ಯಾಸಕರನ್ನು ಆ ಶಾಲೆಗೆ ಕಳುಹಿಸಿ, ಅವರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿಕೊಂಡುವಂತಹ ಯೋಜನೆ ಹಾಕಿಕೊಳ್ಳಲಾಗಿದೆ.

ಸಂಪೂರ್ಣ ಕಾನೂನಾತ್ಮಕವಾಗಿ ದತ್ತು
ಇನ್ನು, ಈ ನಾಲ್ಕು ಶಾಲೆಗಳ ಕುರಿತಾಗಿ ವಿಚಾರ ತಿಳಿದುಕೊಂಡ ನಂತರ ಬಿಇಒ ಹಾಗೂ ಡಿಡಿಪಿಐ ಅವರ ಮೂಲಕ ಸರ್ಕಾರಕ್ಕೆ ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್‌ ಸಂಪರ್ಕಿಸಿ, ಶಾಲೆಗಳನ್ನು ದತ್ತು ನೀಡುವಂತೆ ಮನವಿ ಸಲ್ಲಿಸುತ್ತದೆ. ಇದಕ್ಕೆ ಅಗತ್ಯವಾಗಿರುವ ಎಲ್ಲ ರೀತಿಯ ದಾಖಲಾತಿಗಳನ್ನು ಸಲ್ಲಿಸಿ, ಅನುಮತಿ ಪಡೆದುಕೊಂಡಿದೆ.

ವೆಚ್ಚ ಎಷ್ಟು?
ನಾಲ್ಕು ಶಾಲೆಗಳ ಅಭಿವೃದ್ಧಿಗೆ ಮೊದಲ ಹಂತದಲ್ಲಿ 30 ಲಕ್ಷ ರೂ.ಗಳ ಯೋಜನೆಯನ್ನು ರೂಪಿಸಿಕೊಂಡಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ. ಆನಂತರ ಹಂತ ಹಂತವಾಗಿ ಈ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ.

ಸೊಸೈಟಿ ಆಯ್ದುಕೊಂಡಿರುವ ಶಾಲೆಗಳ ಪ್ರದೇಶ ಹೇಗಿದೆ ಗೊತ್ತಾ? ಸ್ಥಳ ಭೇಟಿ ಮಾಡಿದ ತಂಡದ ಮಾತಲ್ಲೇ ಕೇಳಿ:
ಅವಿಗೆ ಹಳ್ಳಿ ಸಾಗರದಿಂದ 49 ಕಿಲೋ ಮೀಟರ್ ದೂರದಲ್ಲಿದೆ. ವಿಶೇಷ ಹಾಗೂ ವಿಚಿತ್ರ ಅಂದರೆ ಈ ಶಾಲೆ ಇರುವುದು ದಟ್ಟ ಕಾಡಿನ ಮಧ್ಯೆ. ಕಾಡಿನಲ್ಲಿ ವಾಸವಿರೋ ಗುಡ್ಡಗಾಡಿನ ಕುಣಬಿ ಜನಾಂಗದವರ ಮಕ್ಕಳಿಗಾಗಿ ಸರ್ಕಾರ ಶಾಲೆ ಕಟ್ಟಿಸಿದೆ ಅದಕ್ಕೆ ಮುಖ್ಯೋಪಾಧ್ಯರನ್ನು ನೇಮಿಸಿದೆ. ಆದರೆ ಮಕ್ಕಳಿಗೆ ಪಾಠ ಮಾಡುವವರೇ ಇಲ್ಲ.

ಇಡೀ ಊರಿನಲ್ಲಿ ಹುಡುಕಿದರೆ ನಿಮಗೆ ಸಿಗೋದು ಮೂವರು ವಿದ್ಯಾವಂತರು ಅಷ್ಟೇ. ಒಬ್ಬರು ಡಿಗ್ರಿ, ಇನ್ನಿಬ್ಬರು ಪಿಯುಸಿ. ಈ ಮೂವರಲ್ಲಿ ಒಬ್ಬರು ಮಕ್ಕಳ ಪಾಲಿಗೆ ಟೀಚರ್. ಇನ್ನು ಆಶ್ಚರ್ಯ ತರಿಸೋ ಸಂಗತಿ ಅಂದರೆ ಇಲ್ಲಿ ಮಕ್ಕಳು ಪ್ರತಿ ನಿತ್ಯ 8 ಕಿಲೋ ಮೀಟರ್ ಕಾಲ್ನಡಿಯಲ್ಲಿ ಪ್ರಯಾಣ ಮಾಡಿ ಶಾಲೆಗೆ ಕಲಿಯಲು ಹೋಗುತ್ತಾರೆ. ಈ ಎಲ್ಲಾ ವಿಚಾರ ತಿಳಿದು ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿಯಿಂದ ಸ್ಥಳಕ್ಕೆ ಭೇಟಿ ಕೊಟ್ಟೆವು.

ಸಾಗರದಿಂದ ಸುಮಾರು 38 ಕಿಲೋ ನಮ್ಮ ಕಾರಿನಲ್ಲಿ ನಂತರ 8 ಕಿಲೋ ಅಲ್ಲಿಯ ಸ್ಥಳೀಯ ವಾಹನದಲ್ಲಿ ನಂತರ 3 ಕಿಲೋ ಕಾಲ್ನಡಿಗೆಯಲ್ಲಿ ಆವಿಗೆ ಸ್ಥಳಕ್ಕೆ ತಲುಪಿದೆವು. ನೋಡಿದ ನಮಗೆ ಅನ್ನಿಸಿದ್ದು ಮಕ್ಕ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕೆಂದು. ಹಾಗಾಗಿ ಸದ್ಯ ಶಾಲೆಯನ್ನ ದತ್ತು ಪಡೆದಿದ್ದು ಈಗ ಶಾಲೆಯ ಅಭಿವೃದ್ದಿ ಜೊತೆಗೆ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ವ್ಯವಸ್ಥೆ ಮಾಡುವ ಆಲೋಚನೆಯಲ್ಲಿದ್ದೇವೆ. ಇಷ್ಟು ದಿನಗಳಲ್ಲಿ ದತ್ತು ಪಡೆದ ಶಾಲೆಗಳ ಪೈಕಿ ಈ ಶಾಲೆ ವಿಚಿತ್ರ ಹಾಗೂ ವಿಶೇಷ ಎನ್ನಿಸಿದೆ.
-ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಸದಸ್ಯರು

Get In Touch With Us info@kalpa.news Whatsapp: 9481252093

Tags: Kannada News WebsiteKiccha SudeepKicchasudeepKICHCHA SUDEEPA CHARITABLE SOCIETYKSCSLatest News KannadaMalnad NewssandalwoodShimogaShivamogga Newsಕಿಚ್ಚ ಸುದೀಪ್ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿಶಿವಮೊಗ್ಗಸಾಗರಸ್ಯಾಂಡಲ್’ವುಡ್
Previous Post

ಜಿಲ್ಲೆಯಲ್ಲಿಂದು 210 ಪಾಸಿಟಿವ್: ಶಿವಮೊಗ್ಗದಲ್ಲೇ 138, ಮೂರು ಸಾವಿರ ದಾಟಿದ ಸೋಂಕಿತರ ಸಂಖ್ಯೆ

Next Post

ವಿಐಎಸ್’ಎಲ್ ನಿವೃತ್ತ ನೌಕರರ ಮನೆ ಬಾಡಿಗೆ ಇಳಿಸಲು ಸಂಸದ ರಾಘವೇಂದ್ರ ಪ್ರಯತ್ನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿಐಎಸ್’ಎಲ್ ನಿವೃತ್ತ ನೌಕರರ ಮನೆ ಬಾಡಿಗೆ ಇಳಿಸಲು ಸಂಸದ ರಾಘವೇಂದ್ರ ಪ್ರಯತ್ನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!