ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮೆಸ್ಕಾಂ ಕೆಲಸಗಳ ಪರಿವೀಕ್ಷಣೆ ಮಾಡಬೇಕಾದವರು ಯಾರು? ನಾನಾ? ನೀವುಗಳೇ ತಾನೇ? ಇಂತಹ ಕಳಪೆ ವಸ್ತುಗಳನ್ನು ಬಳಸುವಾಗ ಏನು ಮಾಡುತ್ತಿದ್ದಿರಿ?
ಇದು ಮೆಸ್ಕಾಂ ಅಧಿಕಾರಿಗಳಿಗೆ ನಿರಂತರ ಜ್ಯೋತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತರಾಟೆಗೆ ತೆಗದುಕೊಂಡ ಪರಿ.
ಮೆಸ್ಕಾಂ ಕೆಲಸಗಳಲ್ಲಿ ಕಳಪೆ ವಸ್ತುಗಳನ್ನು ಬಳಸಿರುವುದರ ಕುರಿತಾಗಿ ಫುಲಂ ಗರಂ ಆದ ಸಚಿವರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಮೆಸ್ಕಾಂ ಕಾಮಗಾರಿಗಳಲ್ಲಿ ಕಳಪೆ ವಸ್ತುಗಳನ್ನು ಬಳಸಲಾಗಿದೆ ಎಂಬುದಕ್ಕೆ ಕಳಪೆ ವಸ್ತುಗಳನ್ನು ಸಭೆಯಲ್ಲಿ ಅಧಿಕಾರಿಗಳಿಗೆ ತೋರಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು ಇವನ್ನೆಲ್ಲಾ ಗಮನಿಸಬೇಕಾದ ಜವಾಬ್ದಾರಿ ಯಾರದ್ದು? ನನ್ನದಾ? ನಿಮ್ಮದೇ ಅಲ್ಲವೇ? ಟೆಂಡರ್’ನಲ್ಲಿ ಉಲ್ಲೇಖಿಸಲಾಗಿರುವ ಸಾಮಗ್ರಿಗಳನ್ನು ಯಾಕೆ ಬಳಸಿಲ್ಲ? ಈ ಕುರಿತು ಕಂಟ್ರಾಕ್ಟರ್’ನ್ನು ಕೇಳಬೇಕಾದ್ದು ನಿಮ್ಮ ಕರ್ತವ್ಯ ಅಲ್ಲವೇ? ಹೇಗೆ ಬಿಲ್ ಮಾಡಿದಿರಿ ಎಂದು ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು.
ನಿರಂತರ ಜ್ಯೋತಿಯಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆದಿದೆ. ಈ ಎಲ್ಲದರ ಕುರಿತಾಗಿ ಪರಿಶೀಲನೆ ನಡೆಸಿ, ಸಮಗ್ರ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post