No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Tuesday, May 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಮಹಿಳೆ ಸಮಾಜವನ್ನು ಬೆಳಗುವ ನಂದಾದೀಪ: ಶ್ರೀರಂಜಿನಿ ದತ್ತಾತ್ರಿ ಅಭಿಮತ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 14, 2021
in ಶಿವಮೊಗ್ಗ
0
ಮಹಿಳೆ ಸಮಾಜವನ್ನು ಬೆಳಗುವ ನಂದಾದೀಪ: ಶ್ರೀರಂಜಿನಿ ದತ್ತಾತ್ರಿ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಶಿವಮೊಗ್ಗ: ಹಲವು ಸಾಮಾಜಿಕ ಏರುಪೇರುಗಳ ನಡುವೆಯೂ ಮಹಿಳೆ ದೃಢತೆಯಿಂದ ಮುನ್ನಡೆದಿದ್ದು, ಸಮಚಿತ್ತದಿ ಎಲ್ಲರನ್ನೂ ಮುನ್ನಡೆಸುವ ಸ್ವಯಂಪ್ರಕಾಶ ಪ್ರಭೆಯೂ ಹೌದು. ಸಮಾಜವನ್ನು ಬೆಳಗುವ ನಂದಾ ದೀಪವೂ ಹೌದು ಎಂದು ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಹೇಳಿದರು.

2021-22ನೇ ಸಾಲಿನ ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗದ ನೂತನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತವರ ತಂಡದವರಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಮಹಿಳೆಯ ಸ್ಪಂದನೆ, ಸ್ಪೂರ್ತಿ ಇಲ್ಲದಿದ್ದರೆ ಈ ಜಗತ್ತು ಜಡತ್ವದತ್ತ ಸಾಗುತ್ತಿತ್ತು. ಮಹಿಳೆ ಧೈರ್ಯ, ಸಾಹಸ, ಸಾಧನೆ, ಕಲ್ಪನೆ, ಕೌಶಲ್ಯ ಸಂವರ್ಧನೆ, ಆತ್ಮಸ್ಥೈರ್ಯ, ಅಮಿತ ಉತ್ಸಾಹ, ಅವಿರತ ದುಡಿಮೆಯ ಯೋಗಿನಿ ಮಾತ್ರವಲ್ಲ. ದೃಢ ಚಿತ್ತದಿ, ಸಮಚಿತ್ತದಿ ಎಲ್ಲರನ್ನೂ ಮುನ್ನಡೆಸುವ ಸ್ವಯಂಪ್ರಕಾಶ ಪ್ರಭೆಯೂ ಹೌದು. ಸಮಾಜವನ್ನು ಬೆಳಗುವ ನಂದಾ ದೀಪವೂ ಹೌದು ಎಂದರು.

ಇಂದು ಪ್ರಪಂಚದಾದ್ಯಂತ ಹಲವಾರು ಮಹಿಳಾ ಸಂಘಟನೆಗಳು ಅದರದ್ದೇ ಆದ ಧ್ಯೇಯ ಮತ್ತು ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಇನ್ನರ್ ವ್ಹೀಲ್ ಸಂಸ್ಥೆ ಸ್ನೇಹ ಮತ್ತು ಸೇವೆಯೊಂದಿಗೆ 104 ದೇಶಗಳು, ಒಂದು ಲಕ್ಷಕ್ಕೂ ಹೆಚ್ಚು ಸದಸ್ಯಿನಿಯರು, 3,895 ಕ್ಕೂ ಹೆಚ್ಚು ಕ್ಲಬ್’ಗಳನ್ನು ಹೊಂದಿ 96 ವರ್ಷಗಳ ನಿರಂತರ ಪ್ರಭೆಯಾಗಿ ಹೊಮ್ಮುತ್ತಿರುವುದು ಈ ಸಂಸ್ಥೆಯ ಮಹಿಳೆಯರ ಅಂತಸತ್ವಕ್ಕೆ, ಕಾರ್ಯಕ್ಷಮತೆಗೆ ಸಾಕ್ಷಿ ಎಂದರು.

ವ್ಯಕ್ತಿಯಿಂದ ಸಮಾಜ, ಸಮಾಜದಿಂದ ವ್ಯಕ್ತಿ, ವ್ಯಕ್ತಿಯ ವಿರಾಟ್ ರೂಪವೇ ಸಮಾಜ. ಸಮಾಜದ ಹ್ರಸ್ವ ಸ್ವರೂಪವೇ ವ್ಯಕ್ತಿ. ವ್ಯಕ್ತಿಗಳಿಲ್ಲದೆ ಸಮಾಜವಿಲ್ಲ. ಹಾಗೆ ಸಮಾಜ ವ್ಯಕ್ತಿ ಕೇಂದ್ರಿತವೂ ಅಲ್ಲ. ಸಂಘಟನೆಗಳಿಗೆ ವ್ಯಕ್ತಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಸಂಘಟನೆ ಮುನ್ನಡೆಯುತ್ತದೆ. ಆದರೆ ನಮ್ಮ ಅವಧಿಯಲ್ಲಿ ನಡೆಸಿದ ಸಾರ್ಥಕ ಸೇವೆಯನ್ನು ಗುರುತಿಸಿ ಸಂಘಟನೆ ಸದಾ ನಮ್ಮನ್ನು ಸ್ಮರಿಸುವ ಕೆಲಸವನ್ನು ಅಧಿಕಾರ ವಹಿಸಿಕೊಂಡವರು ಮಾಡಬೇಕಾದುದು ಅತೀ ಅವಶ್ಯಕ ಎಂದು ಹೇಳಿದರು.
ಜವಾಬ್ದಾರಿ ಎನ್ನುವುದು ಹುದ್ದೆ, ಯಶಸ್ಸು, ಖ್ಯಾತಿ ಮಾತ್ರವಲ್ಲ ಸಂಸ್ಥೆಯ ಒಳಗಿರುವವರನ್ನು, ಸಮಾಜದ ಬಂಧುಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕಲೆಯನ್ನು ತಿಳಿಸುವ ವ್ಯವಸ್ಥೆ. ಇದನ್ನು ನಿರ್ವಹಿಸುವ ಜವಾಬ್ದಾರಿ ಆ ಸಾಲಿನ ಅಧ್ಯಕ್ಷರು ಕಾರ್ಯದರ್ಶಿಯ ಮೇಲಿರುತ್ತದೆ. ನಾಯಕತ್ವ, ಸಾಮಾಜಿಕ ಕೌಶಲ್ಯ, ಸಮಾಜದಲ್ಲಿ ಸೇವೆ ನೀಡುವ ಅವಕಾಶ, ಸ್ನೇಹ ಸಂಪಾದಿಸುವ ಸದಾವಕಾಶ, ಸೇವೆ ನೀಡಿದಾಗ ಸಿಗುವ ಅದಮ್ಯ ಆನಂದ, ನಿಮ್ಮ ಸೇವೆ ಗುರುತಿಸಿ ಶ್ಲಾಘಿಸುವ ಸಮಾಜ, ನಿಮ್ಮ ಕ್ರಿಯಾಶೀಲತೆಗೆ ವೇದಿಕೆ ಇವೆಲ್ಲವೂ ಈ ಒಂದು ಅವಧಿಯಲ್ಲಿ ಸಿಗುತ್ತದೆ. ಇದೆಲ್ಲವನ್ನು ಮನದಲ್ಲಿರಿಸಿಕೊಂಡು, ಸದಸ್ಯರೊಂದಿಗೆ ಹಿತಮಿತ ಮಾತು, ಸಮಯ, ನಂಬಿಕೆ, ಸಂಬಂಧ ಇವುಗಳನ್ನು ಉಳಿಸಿಕೊಂಡು ನಿಮ್ಮ ಅವಧಿಯಲ್ಲಿ ವಿಶೇಷ ಕೆಲಸಗಳನ್ನು ಮಾಡಿ ಸಾರ್ಥಕತೆ ಅನುಭವಿಸಿರಿ ಎಂದು ಸಲಹೆ ನೀಡಿದರು.

2021-22ನೆಯ ಸಾಲಿನ ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗದ ನೂತನ ಅಧ್ಯಕ್ಷೆಯಾಗಿ ಛಾಯಾ ವೀರಣ್ಣ, ಕಾರ್ಯದರ್ಶಿಯಾಗಿ ದೀಪಾ ಚಂದನ್, ಉಪಾಧ್ಯಕ್ಷರಾಗಿ ಎನ್.ಜಿ. ಉಷಾ, ಸಹಕಾರ್ಯದರ್ಶಿಯಾಗಿ ಗಾಯತ್ರಿ ಸುಮತೀಂದ್ರ, ಖಜಾಂಚಿಯಾಗಿ ಶ್ರೀರಂಜಿನಿ ದತ್ತಾತ್ರಿ, ಐ.ಎಸ್.ಓ. ಆಗಿ ಸುಪ್ರಿಯಾ ಶಾಸ್ತ್ರೀ, ನೇಹಾ ಪತ್ರಿಕೆ ಸಂಪಾದಕರಾಗಿ ಯಶೋದಾ ಶೇಖರ್, ಸಿಸಿಸಿಸಿಯಾಗಿ ಲೋಕೇಶ್ವರಿ ಚೋಳ್ಕೆ, ಐಪಿಪಿಯಾಗಿ ಗಾಯಿತ್ರಿ ಪಾಟೀಲ್ ಅಧಿಕಾರ ವಹಿಸಿಕೊಂಡರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಹೇಮಾ ಮೋಹನ್, ಸಹ ಪ್ರಾಧ್ಯಾಪಕರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಸಿಮ್ಸ್ ಶಿವಮೊಗ್ಗ ಇವರು ಮಹಿಳೆ ಸಮಾಜ ಮುಖಿಯಾಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಬಗ್ಗೆ ತಿಳಿಸಿ, ಸ್ತ್ರೀ ಸಹಜ ಬಾದೆಗಳು, ಸ್ವಯಂ ದೇಹ ತಪಾಸಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ರೋಟರಿ ಅಧ್ಯಕ್ಷರು ರೋ. ಕಿಶೋರ್ ಶೀರ್ನಾಳಿಯವರು ಕ್ಲಬ್ಬಿನ ಪತ್ರಿಕೆ ನೇಹಾ ಬಿಡುಗಡೆಗೊಳಿಸಿದರು. ಮಾಜಿ ಜಿಲ್ಲಾ ಛೇರ್‌ಮನ್ ಭಾರತೀ ಚಂದ್ರಶೇಖರ್, ಡಿಸ್ಟ್ರಿಕ್ಟ್ ಎಡಿಟರ್ ಶಬರೀ ಕಡಿದಾಳ್, ಸಮಸ್ಥೆಯ ಮಾಜಿ ಅಧ್ಯಕ್ಷರು, ಸದಸ್ಯರುತಗಳು ಉಪಸ್ಥಿತರಿದ್ದರು. ಸುಪ್ರಿಯಾ ಶಾಸ್ತ್ರೀ ನಿರೂಪಿಸಿ, ಪ್ರತಿಮಾ ನಾಯಕ್ ಪ್ರಾರ್ಥಿಸಿ, ಗಾಯಿತ್ರಿ ಪಾಟೀಲ್ ಸ್ವಾಗತಿಸಿ, ಯಶೋಧಾ ಶೇಖರ್ ಮತ್ತು ಶೈಲಾ ವೀರಭದ್ರಪ್ಪ ಅತಿಥಿಗಳನ್ನು ಪರಿಚಯಿಸಿ, ಗಾಯಿತ್ರಿ ಸುಮತೀಂದ್ರ ವಂದಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Inner wheelKannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamoggaShivamogga Newsಇನ್ನರ್‌ವ್ಹೀಲ್ಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share196Tweet123Send
Previous Post

ಎಮ್‌ಎಸ್‌ಐಎಲ್ ಕಟ್ಟಡ ನಿರ್ಮಾಣ: ಶಾಸಕ ಹಾಲಪ್ಪ, ಸಚಿವ ಜಗದೀಶ್ ಶೆಟ್ಟರ್ ಅವರಿಂದ ಸ್ಥಳ ಪರಿಶೀಲನೆ

Next Post

ಜಲಜೀವನ್ ಮಿಷನ್: ನೀರಿನ ಗುಣಮಟ್ಟವನ್ನೂ ಖಾತರಿ ಪಡಿಸುವಂತೆ ಕೇಂದ್ರ ಸಚಿವರ ಸಲಹೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜಲಜೀವನ್ ಮಿಷನ್: ನೀರಿನ ಗುಣಮಟ್ಟವನ್ನೂ ಖಾತರಿ ಪಡಿಸುವಂತೆ ಕೇಂದ್ರ ಸಚಿವರ ಸಲಹೆ

ಜಲಜೀವನ್ ಮಿಷನ್: ನೀರಿನ ಗುಣಮಟ್ಟವನ್ನೂ ಖಾತರಿ ಪಡಿಸುವಂತೆ ಕೇಂದ್ರ ಸಚಿವರ ಸಲಹೆ

Leave a Reply Cancel reply

Your email address will not be published. Required fields are marked *

  • Trending
  • Latest
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಭದ್ರಾವತಿ | ಆರು ಪೌರ ಕಾರ್ಮಿಕರಿಗೆ ಮಧು ಲ್ಯಾಬ್ ವತಿಯಿಂದ ಸನ್ಮಾನ

ಭದ್ರಾವತಿ | ಆರು ಪೌರ ಕಾರ್ಮಿಕರಿಗೆ ಮಧು ಲ್ಯಾಬ್ ವತಿಯಿಂದ ಸನ್ಮಾನ

May 5, 2026
Impressive concert by Smt. Surabhi Sheshadri

Impressive concert by Smt. Surabhi Sheshadri

May 5, 2026
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ | ಮಮತಾ ಬ್ಯಾನರ್ಜಿ ಹೊಸ ವರಸೆ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ | ಮಮತಾ ಬ್ಯಾನರ್ಜಿ ಹೊಸ ವರಸೆ

May 5, 2026
ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ನಿಲ್ಲಿಸುವಂತೆ ಡಿಸಿಗೆ ಮನವಿ

ಬೇಸೂರಿನಲ್ಲಿ ಪರಮಾಣು ವಿದ್ಯುತ್ ಸ್ಥಾವರ | ಸಾರ್ವಜನಿಕರಲ್ಲಿ ಆತಂಕ ಬೇಡ: ಜಿಲ್ಲಾಧಿಕಾರಿ ಸ್ಪಷ್ಟನೆ

May 5, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಗಮನಿಸಿ! ಈ ದಿನ ಬೆಂಗಳೂರಿನಿಂದ ಹೊರಡುವ ಈ ರೈಲುಗಳ ಸಂಚಾರದಲ್ಲಿ ಬದಲಾವಣೆ

May 5, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL