ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್19 ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಇರುವ ಪರಿಣಾಮವಾಗಿ ಶನಿವಾರ ಹಾಗೂ ಭಾನುವಾರ ಬೆಳಗ್ಗೆ 10 ನಂತರ ಹಾಲು, ಮೊಸರು ಸೇರಿದಂತೆ ಈ ಸಂಬಂಧಿತ ಪದಾರ್ಥಗಳೂ ಸಹ ದೊರೆಯುವುದಿಲ್ಲ.
ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೂ ಮಾತ್ರ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಂತೆ ಶಿಮುಲ್ ವ್ಯಾಪ್ತಿಯಡಿಯಲ್ಲಿರುವ ನಂದಿನಿ ಹಾಲಿನ ಮಳಿಗೆಗಳು 10 ಗಂಟೆಗೆ ಬಂದ್ ಆಗಲಿದ್ದು, ಭಾನುವಾರ ಮುಂಜಾನೆ 6 ಗಂಟೆಯವೆರಗೂ ತೆರೆಯುವುದಿಲ್ಲ. ಭಾನುವಾರ ಬೆಳಗ್ಗೆ 10 ಗಂಟೆಗೆ ಬಂದ್ ಆದರೆ ಸೋಮವಾರ ಮುಂಜಾನೆ 6 ಗಂಟೆಗೆ ತೆರೆಯುತ್ತವೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು 10 ಗಂಟೆಯ ಒಳಗಾಗಿ ಹಾಲು, ಮೊಸರು ಸೇರಿದಂತೆ ಈ ಸಂಬಂಧಿತ ಪದಾರ್ಥಗಳನ್ನು ಕೊಳ್ಳುವುದು ಉತ್ತಮ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post