ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ವಾಣಿಜ್ಯ ಸಂಕೀರ್ಣದೊಂದಿಗೆ ಬಹುಮಹಡಿ ಕಾರು ನಿಲುಗಡೆ ಕಟ್ಟಡವನ್ನು ನಿರ್ಮಿಸುವ ಕಾಮಗಾರಿಯ ಸ್ಥಳದಲ್ಲಿ ಏರು ಕೊಳವೆ ಮಾರ್ಗಗಳನ್ನು ಸ್ಮಾರ್ಟ್ ಸಿಟಿ ವತಿಯಿಂದ ಸ್ಥಳಾಂತರಗೊಳಿಸುತ್ತಿದ್ದು, ಫೆ.10ರಂದು ಆರ್ 2 (150ಹೆಚ್.ಪಿ) ಪಂಪನ್ನು ನಿಲುಗಡೆ ಮಾಡುವುದರಿಂದ, ಸದರಿ ಪಂಪಿನಿಂದ ನೀರು ಸರಬರಾಜಾಗುವ ಟ್ಯಾಂಕ್ಗಳಾದ ಕಾರ್ಪೋರೇಷನ್ ಟ್ಯಾಂಕ್, ಅಪ್ಪಾಜಿರಾವ್ ಕಾಂಪೌಂಡ್, ಮಲ್ಲೇಶ್ವರ ನಗರ ಮತ್ತು ಸರ್ಕಾರಿ ಪ್ರೌಢಶಾಲೆ ಪ್ರದೇಶಗಳಿಗೆ ಫೆ.10 ಮತ್ತು 11ರಂದು ನಗರದ ದೈನಂದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಮಹಾನಗರಪಾಲಿಕೆ ಹಾಗೂ ಮಂಡಳಿಯೊಂದಿಗೆ ಸಹಕರಿಸಲು ಕೋರಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















