ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಪಂಚತಾರಾ ಐಸ್ಕೀಮ್ಸ್ನ 38ನೇ ವಾರ್ಷಿಕೋತ್ಸವದ ಅಂಗವಾಗಿ, ಕೋಟದ ಶ್ರೀಕ್ಷೇತ್ರ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ವೀರ ಅಭಿಮನ್ಯು ಉಚಿತ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
ಮಾರ್ಚ್ 7ರ ನಾಳೆ ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಪೋರ್ಸ್ನ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಯಕ್ಷ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಯಕ್ಷಗಾನ ತಾಳ ಮದ್ದಲೆ ಅರ್ಥಧಾರಿಗಳಾದ ಶಾಂತಾರಾಮ ಪ್ರಭು, ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಪಾಲ್ಗೊಳ್ಳಲಿದ್ದಾರೆ.
ಯಕ್ಷಗಾನದ ಭಾಗವತಿಕೆಯಲ್ಲಿ ಹೆರಂಜಾಲು ಗೋಪಾಲ ಗಾಣಿಗ, ಉಮೇಶ್ ಮರಾಠ ಪಾಲ್ಗೊಳ್ಳಲಿದ್ದು, ಮೋಹನ್ ಕುಮಾರ್ ಅವರ ಸಂಗೀತ, ರಾಘವೇಂದ್ರ ಪಿ. ಹೆಗಡೆರಿಂದ ಮದ್ದಳೆ, ಪ್ರದೀಪ ನಾಯಕ್ರವರ ಮದ್ದಳೆ, ಜನಾರ್ಧನ ಆಚಾರ್ಯ ಹಳ್ಳಾಡಿ, ಪ್ರಭಾಕರ ಕುಮಾರ ಹೇರೂರು ಚಂಡೆ ಸಹಕಾರವಿದೆ.
ಸ್ತ್ರೀ ಪಾತ್ರಧಾರಿಗಳಾಗಿ ಮಾಧವ ನಾಗೂರು, ಕೃಷ್ಣ ಮೊಗವೀರ, ವಿಶ್ವನಾಥ ಕಿರಾಡಿ, ಶ್ರೀಕಾಂತ ಪೂಜಾರಿ, ಸಚಿನ್ ಪೂಜಾರಿ ಹಾಗೂ ಹಾಸ್ಯ ಪಾತ್ರದಲ್ಲಿ ಚಂದ್ರ ಕುಲಾಲ್ ಹಾಲಾಡಿ, ದ್ವಿತೇಶ್ ಕಾಮತ್ ಅಭಿನಯಿಸಲಿದ್ದಾರೆ.
ಉಳಿದಂತೆ ಕೋಟಾ ಸುರೇಶ್ ಬಂಗೇರಾ, ಉಲ್ಲಾಸ್ ಈಶ್ವರ ನಾಯ್ಕ, ಬಾಲಕೃಷ್ಣ ಶೆಟ್ಟಿ ಮಂದಾರ್ತಿ, ಮನೋಜ್ ಕುಮಾರ್, ಜಗದೀಶ ಹೆಗಡೆ, ಸೀತಾರಾಮ ಹೆಗಡೆ, ಹಟ್ಟಿಯಂಗಡಿ ಬಸವ, ಸುಬ್ರಹ್ಮಣ್ಯ ದೇವಾಡಿಗ, ಪ್ರಶಾಂತ್ ಗಾಣಿಗ, ರಾಘವೇಂದ್ರ ಮರಕಾಲ, ಮಂಜುನಾಥ ಪೂಜಾರಿಯವರ ಅಭಿನಯವಿದೆ.
ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post