ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕರಾಗೆ ರೇಖಾ ರಂಗನಾಥ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಪಾಲಿಕೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಖಾ ರಂಗನಾಥ್ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿ, ಹಿರಿಯರ ಹಾಗೂ ಜನರ ಆರ್ಶೀವಾದದಿಂದ ಇಂದು ಈ ಸ್ಥಾನಕ್ಕೆ ಬೆಳೆದಿದ್ದೇನೆ. ನನಗೆ ದೊರೆತಿರುವ ಈ ಅವಕಾಶವನ್ನು ಜನರ ಸೇವೆಗಾಗಿ ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಪಾಲಿಕೆ ಸದಸ್ಯರಾಗಿ ರೇಖಾ ರಂಗನಾಥ್ ಅವರು ಜನಾನುರಾಗಿಯಾಗಿದ್ದು, ತಮ್ಮ ವಾರ್ಡ್ನ ಕಟ್ಟ ಕಡೆಯ ವ್ಯಕ್ತಿಗೂ ಸಹ ಸ್ಪಂದಿಸುವ ಸರಳ ವ್ಯಕ್ತಿತ್ವದ ಇವರು, ಯಾವುದೇ ರೀತಿಯ ಸಮಸ್ಯೆಗಳು ಜನರಿಗೆ ಎದುರಾದರೂ ಕ್ಷಣಮಾತ್ರದಲ್ಲಿ ಸ್ಥಳಕ್ಕೆ ತೆರಳಿ, ಪರಿಹಾರ ಕಲ್ಪಿಸುವ ನಾಯಕಿಯಾಗಿದ್ದಾರೆ.
Also read: ಇಂದಿರಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರಮಾದಾನ ಕಾರ್ಯಕ್ರಮ
ಶಾಸಕ ಕೆ.ಎಸ್. ಈಶ್ವರಪ್ಪ ಅಭಿನಂದನೆ
ಇನ್ನು, ಪಾಲಿಕೆಯ ನೂತನ ಪ್ರತಿಪಕ್ಷ ನಾಯಕಿಯಾಗಿ ಅಧಿಕಾರ ಸ್ವೀಕರಿಸಿದ ರೇಖಾ ರಂಗನಾಥ್ ಅವರನ್ನು ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಅಭಿನಂದಿಸಿದ್ದಾರೆ.
ಪಾಲಿಕೆಯ ಪ್ರತಿಪಕ್ಷ ನಾಯಕರ ಕಚೇರಿಗೆ ತೆರಳಿದ ಈಶ್ವರಪ್ಪ ಅವರು, ರೇಖಾ ರಂಗನಾಥ್ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















