ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂ.22 ರಂದು ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟ ಮೈಸೂರು ಈ ಸಂಸ್ಥೆಯಿಂದ ರಾಜ್ಯಮಟ್ಟದ ಯೋಗ ಸಮ್ಮೇಳನ-2025 ರಲ್ಲಿ ಶಿವಗಂಗಾ ಯೋಗ ಕೇಂದ್ರದ ಗುರುಗಳಾದ ಯೋಗಾಚಾರ್ಯ ಸಿ.ವಿ. ರುದ್ರಾರಾಧ್ಯರವರಿಗೆ ಪ್ರತಿಷ್ಠಿತ ಯೋಗರತ್ನಾಕರ ಪ್ರಶಸ್ತಿ ಪ್ರದಾನವಾಗಲಿದೆ ಎಂದು ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.
ಯೋಗವನ್ನೇ ತಮ್ಮ ಉಸಿರನ್ನಾಗಿಸಿ ನಿಸ್ವಾರ್ಥ ಸೇವೆಯಿಂದ ನಗರದಲ್ಲಿ 37 ಯೋಗ ಕೇಂದ್ರಗಳಲ್ಲಿ ಪ್ರಸ್ತುತ ಉಚಿತವಾಗಿ ಯೋಗ ಪ್ರಾಣಾಯಾಮ, ಧ್ಯಾನ ತರಗತಿ ನಡೆಯಲು ಮುಖ್ಯ ಕಾರಣಕರ್ತರಾದಂತವರು ಹಾಗೂ ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶಿವಗಂಗಾ ಯೋಗ ಕೇಂದ್ರದ ಗುರುಗಳಾದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯರವರಿಗೆ ಪ್ರತಿಷ್ಠಿತ ಯೋಗರತ್ನಾಕರ ಪ್ರಶಸ್ತಿ ಪ್ರಶಸ್ತಿ ಪ್ರಧಾನ ಆಗುತ್ತಿರುವುದು ಸಂತಸದ ಸಂಗತಿ ಎಂದರು.
ನಗರದ ನಮ್ಮ ಟಿವಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಶಿವಗಂಗಾ ಯೋಗ ಕೇಂದ್ರದ ಗುರುಗಳಾದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯರು, ನನಗೆ ಇದುವರೆಗೂ ಸಹ ಬಂದಿರುವ ಎಲ್ಲಾ ಪ್ರಶಸ್ತಿಗಳು ನಮ್ಮ ಯೋಗ ಬಂಧುಗಳಿಗೆ ಹಾಗೂ ನಮ್ಮ ಕೇಂದ್ರದ ಟ್ರಸ್ಟಿಗಳಿಗೆ ಸಮರ್ಪಣೆ ಅವರ ಮಾರ್ಗದರ್ಶನ ಸಲಹೆ ಸಹಕಾರದಿಂದ ಇಂದು ರಾಜ್ಯಮಟ್ಟದಲ್ಲಿ ಒಂದು ಪ್ರತಿಷ್ಠಿತ ಯೋಗ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಭಾವನಾತ್ಮಕವಾಗಿ ನುಡಿದರು.
ಯೋಗ ಎಂದರೆ ಒಂದು ವ್ಯಾಯಾಮವಲ್ಲ ಅದು ಒಂದು ಸುಂದರವಾದ ಜೀವನ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಗ ಮಾಡುವುದರ ಮುಖಾಂತರ ನಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳೋಣ.
ಹೆಚ್.ಕೆ.ಹರೀಶ್, ಯೋಗ ಶಿಕ್ಷಕರು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಯೋಗ ಶಿಕ್ಷಣ ನೀಡಿದ ಡಾ. ಹೆಚ್.ವಿ. ನಾಗೇಂದ್ರ ಅವರೊಂದಿಗೆ ನನಗೆ ಸನ್ಮಾನವಾಗುತ್ತಿರುವುದು ತುಂಬಾ ಹೆಮ್ಮೆಯಾಗಿದೆ. ನಿರಂತರವಾದ ಯೋಗಭ್ಯಾಸದಿಂದ ಆರೋಗ್ಯ, ಆಹಾರ, ವಿಹಾರ, ಆಚಾರ, ವಿಚಾರಗಳಲ್ಲಿ ಅಂದರೆ ಜೀವನ ಶೈಲಿಯಲ್ಲಿ ಅನೇಕ ಬದಲಾವಣೆಯನ್ನು ತರಬಹುದಾಗಿದೆ. ಇಂದಿನ ದಿನಗಳಲ್ಲಿ ಮನಸ್ಸಿನಿಂದ ಶರೀರಕ್ಕೆ ಬರುತ್ತಿರುವ ಕಾಯಿಲೆಗಳಾದ ಮಧುಮೇಹ, ರಕ್ತದೊತ್ತಡ, ಅಸ್ತಮಾ, ಮೈಗ್ರೇನ್ ತಲೆನೋವು, ಹಾಗೆಯೇ ಮಾನಸಿಕ ಒತ್ತಡ ಉದ್ವೇಗ ಖಿನ್ನತೆ ಮೊದಲಾದ ಮನೋ ದೈಹಿಕ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಹೆಚ್.ಕೆ.ಹರೀಶ್ ಮಾತನಾಡಿ, ಯೋಗವು ಅರಿಶಡ್ ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ನಮ್ಮ ಹತೋಟಿಯಲ್ಲಿಡಲು ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಇದರ ಜೊತೆಗೆ ನಮ್ಮ ಜೀವನ ಶೈಲಿ ಆಹಾರ ಪದ್ಧತಿಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಗ ಎಂದರೆ ಒಂದು ವ್ಯಾಯಾಮವಲ್ಲ ಅದು ಒಂದು ಸುಂದರವಾದ ಜೀವನ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಗ ಮಾಡುವುದರ ಮುಖಾಂತರ ನಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳೋಣ ಎಂದು ಕರೆ ನೀಡಿದರು.
ವಿಜಯ ಕೃಷ್ಣ ಅವರು ಮಾತನಾಡಿ, ಯೋಗ ಮಾಡುವುದರ ಜೊತೆಗೆ ನಾವು ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಯೋಗದಿಂದ ನಮ್ಮ ಬದುಕು ಹಸನವಾಗುವುದರ ಜೊತೆಗೆ ಉತ್ತಮ ಜೀವನದೊಂದಿಗೆ ಬದುಕುತ್ತೇವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ವಿ.ಜಗದೀಶ್ ಅವರ ನೇತೃತ್ವದಲ್ಲಿ ನಿರೂಪಕರಾದ ಜಿ.ವಿಜಯಕುಮಾರ್ ಅವರು ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯರಿಗೆ ಹಾಗೂ ಯೋಗ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಚಿದಾನಂದ್ ಶ್ರೀಕಾಂತ್ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post