ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಗ್ರಾಮಾಂತರ ಬ್ಲಾಕ್ ಯುವ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಾಯಿತು.
ಪೆಟ್ರೋಲ್ ದರ 100 ರೂ.ಗೆ ಏರಿಕೆಯಾಗಿರುವುದು ಖಂಡಿಸಿ ಇಂದು ಪೆಟ್ರೋಲ್ ಬಂಕ್ ಮುಂಭಾಗ ಅಚ್ಛೇ ದಿನ್ ಆಯೇಗಾ, ಶತಕ ಬಾರಿಸಿ, ನಾಟೌಟ್ ಆಗದ ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರ ಸರ್ಕಾರವನ್ನು ಅಣಕಿಸುವ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಉಪಾಧ್ಯಕ್ಷ ವೆಂಕಟೇಶ್ ಕಲ್ಲೂರು, ಹಾಗೂ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ನ ಎಸ್. ಕುಮರೇಶ್, ನ್ಯೂ ಮಂಡ್ಲಿ ಯುವ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಶುಭಾಷ್, ಪದಾಧಿಕಾರಿಗಳಾದ ಸಾಗರ್, ನಿತಿನ್, ನಾಗೇಶ್, ಮಂಜುನಾಥ್, ರೋಹನ್, ರಾಕೇಶ್, ಅಭಿಷೇಕ್, ಹರೀಶ್, ಅಣ್ಣಪ್ಪ ಇತರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post