ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಚೇನಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಡಿ.ಜಿ. ಬೆನಕಪ್ಪ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎ.ಎಲ್.ಚಂದ್ರಶೇಖರ್, ಕಾರ್ಯದರ್ಶಿಯಾಗಿ ಎಸ್.ಎಸ್.ಟಿ. ರಾಜೇಶ್, ಖಜಾಂಚಿಯಾಗಿ ಹೆಚ್.ಎಲ್.ದಿನೇಶ್ ಆಯ್ಕೆಯಾಗಿದ್ದು, ನಿರ್ದೇಶಕರುಗಳಾಗಿ ಎನ್. ಸುರೇಂದ್ರ, ನಂದನಮೂರ್ತಿ, ಸಂಜಯಪಾಟೀಲ್ ಎಂ.ಜಿ., ಆಯನೂರು ಸಂತೋಷ್, ಸೌರಭ್ ಡಿ.ಕೆ. ಇವರುಗಳು ಆಯ್ಕೆಯಾಗಿದ್ದಾರೆ.
Also read: ಅತಿವೃಷ್ಟಿಯಿಂದಾದ ಹಾನಿಗೆ 297 ಕೋಟಿ ರೂ. ಪರಿಹಾರ: ಕೃಷ್ಣ ಭೈರೇಗೌಡ
ನೂತನ ಪದಾಧಿಕಾರಿಗಳನ್ನು ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಶಾಸಕ ಎಸ್. ರುದ್ರೇಗೌಡ, ಮಾಜಿ ಅಧ್ಯಕ್ಷರುಗಳಾದ ಮಹೇಂದ್ರಪ್ಪ, ರಾಜು ಎಂ, ವೈ.ವಿ. ಮಧುಕರ ಜೋಯ್ಸ್, ರಮೇಶ್ ಹೆಗ್ಡೆ ಹಾಗೂ ಮಾಜಿ ಕಾರ್ಯದರ್ಶಿ G.V. ಕಿರಣ್ ಅಭಿನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















