ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾದ ಘಟನೆ ಸಾಗರ ರಸ್ತೆಯ ಆಯನೂರು ಗೇಟಿನ ಬಳಿಯ ಸ್ಮಶಾನದ ಬಳಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ರಾಜುನಾಯ್ಕ್(30) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ವಿಕ್ರಂ ಎಂದು ಗುರುತಿಸಲಾಗಿದೆ. ವಾಸ್ತವವಾಗಿ ರಾಜುನಾಯ್ಕ್ ಹಾಗೂ ವಿಕ್ರಂ ಇಬ್ಬರೂ ಸ್ನೇಹಿತರಾಗಿದ್ದು, ನಿಯಮಿತವಾಗಿ ಒಟ್ಟಿಗೆ ಕುಡಿಯಲು ಇದೇ ಪ್ರದೇಶಕ್ಕೆ ಬರುತ್ತಿದ್ದರು ಎಂದು ಹೇಳಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ವಿಕ್ರಂಗೆ ರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿAದ ಬೇಸರಗೊಂಡಿದ್ದನು. ಇದೇ ವೇಳೆ ಮಾಮೂಲಿಯಂತೆ ವಿಕ್ರಂ ರಾಜೂನನ್ನು ಕುಡಿಯಲು ಕರೆದಿದ್ದಾನೆ.
Also read: ಪಂಚಭೂತಗಳಲ್ಲಿ ಲೀನರಾದ ಭಾನುಪ್ರಕಾಶ್ | ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಮುಖಂಡ
ಕುಡಿಯುವ ವೇಳೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿ, ಭಾರೀ ಜಗಳಕ್ಕೆ ತಿರುಗಿದೆ. ಇದು ವಿಕೋಪಕ್ಕೆ ತಿರುಗಿ ವಿಕ್ರಂ ರಾಜೂಗೆ ಮಾರಕಾಸ್ತçಗಳಿಂದ ಹಲ್ಲೆ ಮಾಡಿ, ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post