ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿರಾಳಕೊಪ್ಪದ ಪಿಎಸ್ ಐ ರಮೇಶ್ ಅವರನ್ನು ಅಮಾನತ್ತುಗೊಳಿಸಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ #SP Mithun Kumar ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಶಿರಾಳಕೊಪ್ಪದ ಪಿಎಸ್ ಐ ರಮೇಶ್ ಅವರನ್ನ ನಿನ್ನೆ ಅಮಾನತ್ತುಗೊಳಿಸಿರುವ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಸುದ್ಧಿವಾಹಿಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಯಾವ ಆರೋಪದ ಅಡಿ ಅಮಾನತ್ತು ಎಂಬುದರ ಬಗ್ಗೆ ತಿಳಿದು ಬರಬೇಕಿದೆ.
ಶಿರಾಳಕೊಪ್ಪದಲ್ಲಿ ಬಕ್ರೀದ್ ಹಬ್ಬದ ವೇಳೆ ಗೋಹತ್ಯೆಗಳು ನಡೆದರೂ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿ ಇವರನ್ನ ಅಮಾನತ್ತುಗೊಳಿಸುವಂತೆ ಹಿಂದೂ ಜಾಗರಣ ವೇದಿಕೆ ಮನವಿ ನೀಡಿತ್ತು.
ಆದರೆ ಅವರ ಅಮಾನತ್ತಿನ ಹಿಂದೆ ಭಷ್ಠಾಚಾರದ ಆರೋಪವೂ ಕೇಳಿಬಂದಿದೆ. ಹಣದ ಬೇಡಿಕೆ ಇಟ್ಟ ವಾಯ್ಸ್ ರೆಕಾರ್ಡಿಂಗ್ ನ್ನ ಐಜಿಗೆ ಕಳುಹಿಸಲಾಗಿದ್ದು, ಈ ಹಿನ್ನಲೆಯಲ್ಲಿ ಶಿಕಾರಿಪುರ ಪಿಎಸ್ಐ ಅಮಾನತ್ತಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post