ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟದ ಸಮಿತಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಸ್. ಬಿ. ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಮಾರ್ಗದರ್ಶಕರಾದ ಗಾ.ರ. ಶ್ರೀನಿವಾಸ್ , ಕಾನೂನು ಸಲಹೆಗಾರ ಅನಿಲ್ ಕುಮಾರ್ , ಮಾಧ್ಯಮ ಸಲಹೆಗಾರ ಎಸ್. ಅನಿಲ್ ಕುಮಾರ್ ನಾಯ್ಕ್ , ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸಿಗ್ಬತ್ ಉಲ್ಲಾ ಹಾಗೂ ಹೊಸನಗರ ತಾಲ್ಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಗೋವಿಂದ ಮತ್ತು ಒಕ್ಕೂಟದ ಸಂಸ್ಥಾಪಕರಾದ ಹೆಚ್. ಎಸ್. ಕಿರಣ್ ಕುಮಾರ್ ಹಾಗೂ ಜಿಲ್ಲೆಯ ಆಟೋ ಚಾಲಕರು ಪದಾಧಿಕಾರಿಗಳು ಭಾಗವಹಿಸಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















