ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನುಷ್ಯರು ಕಾಲಿಡಲಾರದಷ್ಟು ಕೆಸರು. ಮಣ್ಣಿನ ಗುಡ್ಡೆಗಳು, ಅಗೆದ ರಸ್ತೆ, ಚರಂಡಿಯ ಗಬ್ಬು ವಾಸನೆ, ಸೊಳ್ಳೆಗಳ ಕಾಟ, ಹಂದಿಗಳ ಓಡಾಟ, ಕುಡಿಯುವ ನೀರಿನ ಕೊಳೆವೆಗೂ ಕೆಸರಿನ ಕಾಟ ಇವೆಲ್ಲಾ ನರಕದ ದೃಶ್ಯ ಶಿವಮೊಗ್ಗ ನಗರದ ೩೦ನೇ ವಾರ್ಡಿನಲ್ಲಿ ಕಂಡು ಬರುತ್ತದೆ.
ಮಳೆಯ ಜೊತೆಗೆ ಇಲ್ಲಿನ ವಾರ್ಡಿನಲ್ಲಿ ಜನರು ವಾಸಮಾಡುವುದೇ ನರಕಸದೃಶ್ಯವಾಗಿದೆ. ಮಹಿಳೆಯರು, ಮಕ್ಕಳು, ವಯಸ್ಸಾದವರು ಓಡಾಡುವುದೇ ಇಲ್ಲಿ ಕಷ್ಟವಾಗಿದೆ. ಕೊಳಚೆಯಿಂದ ಸಾಂಕ್ರಾಮಿಕ ರೋಗಕ್ಕೂ ಕಾರಣವಾಗಿದೆ. ರಸ್ತೆ ಅಗೆದು ಅದೆಷ್ಟೋ ತಿಂಗಳಾದರೂ ಮುಚ್ಚುವ ಸಾಹಸಕ್ಕೆ ಯಾರೂ ಕೈಹಾಕಿಲ್ಲ. ಇಲ್ಲಿನ ದೃಶ್ಯಗಳನ್ನು ನೋಡಿದರೆ ಯಾರಾದರೂ ಒಂದು ಕ್ಷಣ ಸಂಬಂಧಪಟ್ಟ ಇಲಾಖೆಗೆ ಉಗಿಯದೇ ಹೋಗುವುದಿಲ್ಲ. ರಸ್ತೆಯ ಒಳಚರಂಡಿಯ ವ್ಯವಸ್ಥೆಯಂತೂ ಗಬ್ಬೆದ್ದು ಹೋಗಿದೆ. ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಬಂದಿದೆ. ಶಾಲೆಗೆ ಹೋಗುವ ಮಕ್ಕಳು ಆಸ್ಪತ್ರೆಗೆ ಹೋಗುವ ರೋಗಿಗಳು, ಅಂಗಡಿ ಮುಂತಾದ ಸಣ್ಣ-ಪುಟ್ಟ ಕೆಲಸಗಳಿಗೆ ಮನೆಯಿಂದ ಹೊರ ಹೋಗುವವರು ತುಂಬಾ ಆತಂಕದಲ್ಲಿದ್ದಾರೆ. ಹಲವು ಹಿರಿಯರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ವಾಹನಗಳ ಸಂಚಾರವಿರಲಿ, ಮನುಷ್ಯರು ಓಡಾಡುವುದೇ ಕಷ್ಟವಾಗಿದೆ.
ಎಲ್ಲಿ ನೋಡಿದರಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಅಗೆದ ಮಣ್ಣನ್ನು ರಸ್ತೆಯಲ್ಲೇ ಬಿಟ್ಟಿರುವುದರಿಂದ ಮನೆಯಿಂದ ಹೊರಬರಲು ಜನರು ಪರದಾಡಬೇಕಾಗಿದೆ. ಮನೆಯ ಮುಂದೆ ವಾಹನಗಳನ್ನು ನಿಲ್ಲಿಸಲು ಕೂಡ ಜಾಗವಿಲ್ಲವಾಗಿದೆ. ಇಷ್ಟೇಲ್ಲಾ ಸಮಸ್ಯೆಗಳ ಆಗರಗಳಿದ್ದರೂ ಮಹಾನಗರ ಪಾಲಿಕೆಯಾಗಲಿ, ಸಂಬAಧಪಟ್ಟ ಅಧಿಕಾರಿಗಳಾಗಲಿ ಇತ್ತಕಡೆ ಗಮನವೇಹರಿಸಿಲ್ಲ. ಈ ಬಗ್ಗೆ ಹಲವು ಬಾರಿ ಪಾಲಿಕೆಯ ಗಮನಕ್ಕೆ ತಂದಿದ್ದರೂ ಕೂಡ ಪ್ರಯೋಜನವಿಲ್ಲವಾಗಿದೆ. ಮಹಾನಗರ ಪಾಲಿಕೆಯ ನಿರ್ಲಕ್ಷö್ಯ ಆಡಳಿತಕ್ಕೂ ಇದು ಜೀವಂತ ಸಾಕ್ಷಿಯಾಗಿದೆ.
ಮನುಷ್ಯ ಮಾತ್ರದವರು ಇದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲವಾಗಿದೆ. ಇದರ ಜೊತೆಗೆ ನಾಯಿ, ಹಂದಿಗಳ ಕಾಟ, ಸೊಳ್ಳೆಗಳಂತೂ ಹೇಳತೀರದಾಗಿದೆ. ಸುತ್ತಮುತ್ತಲ ಜನರು ಜ್ವರ, ಕೆಮ್ಮು ಮುಂತಾದ ಕಾಯಿಲೆಗಳಿಗೆ ಒಳಗಾಗಿದ್ದಾರೆ. ಈ ರಸ್ತೆಯಲ್ಲಿ ಆಸ್ಪತ್ರೆಗೆ ಹೋಗುವುದು ಕೂಡ ಅತ್ಯಂತ ಕಷ್ಟವಾಗಿದೆ.
ಈ ಹಿಂದೆ ಇಲ್ಲಿ ಶಂಕರ್ಗನ್ನಿ ಎಂಬುವವರು ಈ ವಾರ್ಡಿನ ಸದಸ್ಯರಾಗಿದ್ದರು. ಅವರ ಕಾಲದಲ್ಲಿಯೇ ಇಷ್ಟೇಲ್ಲಾ ಸಮಸ್ಯೆಗಳು ಉದ್ಭವವಾಗಿದ್ದವು. ಅದೆಷ್ಟೋಬಾರಿ ಜನರು ಅವರ ವಿರುದ್ಧ ರೊಚ್ಚಿಗೆದ್ದಿದ್ದರೂ ಕೂಡ ಅವರು ತಿರುಗಿಯೂ ನೋಡಿರಲಿಲ್ಲ. ನಂತರ ಅವರು ಈಶ್ವರಪ್ಪನವರ ರಾಷ್ಟçಭಕ್ತ ಬಳಗಕ್ಕೆ ಸೇರಿಕೊಂಡರು. ಇದೀಗ ಮತ್ತೆ ಪಾಲಿಕೆ ಸದಸ್ಯರಾಗಲು ಬಯಸಿ ಬಿಜೆಪಿಗೆ ಬಂದಿದ್ದಾರೆ.
ಜನರಿಗಂತೂ ಸಿಟ್ಟು ಇದ್ದೇಇದೆ. ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಕೂಡ ಅವರು ಈ ಕಡೆ ತಲೆಹಾಕಿಲ್ಲ. ವಾರ್ಡಿನ ಸದಸ್ಯರಾಗಬಯಸುವವರು ಕನಿಷ್ಠ ವಾರ್ಡಿನ ಸಮಸ್ಯೆಗಳನ್ನು ಗಮನಕ್ಕೆ ತರಬಹುದಿತ್ತು. ಆದರೂ ಕೂಡ ಸುಮ್ಮನಿದ್ದಾರೆ ಎಂದರೆ ಇದರ ಅರ್ಥ ಏನು ಎಂಬುದು ಗೊತ್ತಾಗುತ್ತದೆ. ಒಟ್ಟಾರೆ ಅವರ ವಿರುದ್ಧ ಇಲ್ಲಿನ ಜನರಿಗೆ ಆಕ್ರೋಶವಂತೂ ಇದ್ದೇ ಇದೆ.
ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಮಹಾನಗರ ಪಾಲಿಕೆ ಆಯುಕ್ತರು ಇತ್ತಕಡೆ ಗಮನಹರಿಸಿಲ್ಲ. ಶಾಸಕರಾದ ಚನ್ನಬಸಪ್ಪನವರು ಮತ್ತು ಈಗ ಹೊಸದಾಗಿ ಬಂದಿರುವ ಆಯುಕ್ತ ಮಾಯಣ್ಣಗೌಡ ಅವರು ಈ ಕೂಡಲೇ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಜನರಿಗೆ ಸಂಕಷ್ಟದಿಂದ, ಕಿರಿಕಿರಿಯಿಂದ ಮುಕ್ತಗೊಳಿಸಬೇಕಾಗಿದೆ. ಆರೋಗ್ಯ ಇಲಾಖೆಯು ಕೂಡ ಇತ್ತಕಡೆ ಗಮನಹರಿಸಬೇಕಾಗಿದೆ. ಇಲ್ಲಿದಿದ್ದರೆ ಈ ವಾರ್ಡಿನ ಜನರು ಹೋರಾಟ ಮಾಡುವುದು ಅನಿವರ್ಯವಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post