ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಟರಿ ಕ್ಲಬ್ ಶಿವಮೊಗ್ಗ ಮಿಡ್ಟೌನ್ ವತಿಯಿಂದ ಏ.05ರಂದು ಬೆಳಿಗ್ಗೆ 11ಕ್ಕೆ ರೋಟರಿ ಬ್ಲಡ್ ಬ್ಯಾಂಕ್ನಲ್ಲಿ ಮಕ್ಕಳಿಗಾಗಿ ಕಲಿಕಾ ನ್ಯೂನತೆ ಮತ್ತು ವರ್ತನಾ ಸಮಸ್ಯೆಗಳ ಕುರಿತು ವಿಶೇಷ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಆಯೋಜಕರಾದ ಯೋಜನಾ ನಿರ್ದೇಶಕಿ ವೀಣಾ ಸುರೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳಲ್ಲಿ ಹಲವು ಸಮಸ್ಯೆಗಳು ಇರುತ್ತದೆ. ಯಾವುದೇ ವಿಷಯದ ಬಗ್ಗೆ ಗಮನ ಕೊಡದಿರುವುದು, ಸೂಚನೆಗಳನ್ನು ಪಾಲಿಸದೇ ಇರುವುದು, ಹೆಸರಿಗೆ ಪ್ರತಿಕ್ರಿಯೆ ನೀಡುತ್ತಿಲ್ಲವೇ ಕಣ್ಣಿಗೆ ಕಣ್ಣಿನ ಸಂಪರ್ಕ ಇಲ್ಲದೇ ಇದೆಯೇ, ಒಂದುಸ್ಥಳದಲ್ಲಿ ಕೂರಲು ಕಷ್ಟವಾಗುತ್ತದೆಯೇ ಹೊಸ ಸಂಗತಿಗಳನ್ನು ಕಲಿಯಲು ಹೆಚ್ಚು ಸಮಯಬೇಕೇ? ಮುಂತಾದ ಈ ಎಲ್ಲಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಜ್ಞರು ಮಾತನಾಡಲಿದ್ದಾರೆ ಎಂದರು.
Also read: ಏ.13 | ಬ್ರಾಹ್ಮಣ ಮಹಾಸಭಾ ಚುನಾವಣೆ | ಡಾ.ಶರ್ಮ, ತಿಮ್ಮಪ್ಪರನ್ನು ಬೆಂಬಲಿಸಿ | ನಟರಾಜ್ ಭಾಗವತ್ ಮನವಿ
ಪುನರ್ವಸತಿ ಮಾನಸಿಕ ತಜ್ಞೆ ಡಾ. ಪೂಜಾ ಝಾ.ನಾಯರ್, ಮಕ್ಕಳ ಮಾನಸಿಕ ತಜ್ಞೆ, ಸುಮಾ ಸಿಂಗ್ ಅವರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಮಾಹಿತಿ ನೀಡುವರು.
ಪೋಷಕರು, ಶಿಕ್ಷಕರು, ಸಮಾಲೋಚಕರು ಇದರಲ್ಲಿ ಭಾಗವಹಿಸಬಹುದಾಗಿದ್ದು, ಹೆಚ್ಚಿನ ವಿವರಕ್ಕೆ ಮೊ.ಸಂ.7829738412ನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಸುರೇಶ್ಕುಮಾರ್, ಪ್ರಮುಖರಾದ ಜಿ.ವಿಜಯ್ಕುಮಾರ್, ಗಿರಿಜಾರವೀಂದ್ರ, ಫಹೀಂ ಹುಸೇನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post