ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರದ್ರೋಹಿ ಚಟುವಟಿಕೆಗಳನ್ನು ನಡೆಸಿ, ಹಿಂದೂ ರಾಷ್ಟ್ರಭಕ್ತರನ್ನು ಕಗ್ಗೊಲೆ ಮಾಡುತ್ತಿರುವ ದೇಶದ್ರೋಹಿ ಕೊಲೆಗಡುಕ ಮುಸಲ್ಮಾನರನ್ನು ನೇಣಿಗೇರಿಸಬೇಕು. ಇಲ್ಲವೇ ಗುಂಡಿಟ್ಟು ಹತ್ಯೆ ಮಾಡುವ ಕಾನೂನನ್ನು ಜಾರಿಗೆ ತರಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ, MLA Eshwarappa ಪ್ರಧಾನಿ ನರೇಂದ್ರ ಮೋದಿಯವರಿಗೆ PM Narendra Modi ಮನವಿ ಮಾಡಿದರು.
ರಾಜಸ್ಥಾನದ ಉದಯಪುರದಲ್ಲಿ ಹಾಡಹಗಲೇ ಕನ್ಹಯ್ಯಾಲಾಲ್ ತೇಲಿ Kanaiah lal theli ಎಂಬುವರನ್ನು ಹತ್ಯೆ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ಇಂದು ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ನಡೆಸಲಾದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ಸ್ವತಂತ್ರ ಭಾರತದಲ್ಲಿ ಇಂತಹ ಸಭೆ ನಡೆಯಬೇಕಾ? ಎನ್ನುವ ಪ್ರಶ್ನೆ ರಾಷ್ಟ್ರಭಕ್ತರನ್ನು ಕಾಡುತ್ತಿದೆ. ಇದು ಬಹಳ ಶೋಚನೀಯ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಕೊಲೆಗಡುಕರನ್ನು ಕೋರ್ಟಿಗೆ ಕರೆಸಿ, ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ಬದಲು ಇಂತಹ ರಾಷ್ಟ್ರದ್ರೋಹಿಗಳಿಗೆ ಪ್ರಜಾಪ್ರಭುತ್ವದ ರೀತಿಯಲ್ಲೇ ಶಿಕ್ಷೆ ನೀಡಬೇಕು. ಸಂವಿಧಾನವನ್ನು ತಿದ್ದುಪಡಿ ಮಾಡಿ, ಕನ್ಹಯ್ಯ ಹತ್ಯೆ ಮಾಡಿರುವ ರಾಷ್ಟ್ರದ್ರೋಹಿಗಳನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತರಬೇಕೆಂದು ಪ್ರಧಾನ ಮಂತ್ರಿಯವರನ್ನು ಪ್ರಾರ್ಥಿಸುತ್ತೇನೆ ಎಂದರು.
Also read: ಜೆಎನ್ಎನ್ಇ ಕಾಲೇಜಿನಲ್ಲಿ ಮಲೆನಾಡಿನ ವೈಭವದ ಪರಂಪರೆ ಅನಾವರಣ…
ಇಡೀ ಪ್ರಪಂಚದ ಮುಸಲ್ಮಾನ ಮುಖಂಡರು, ಪೈಗಂಬರ್ ಬಗ್ಗೆ ಅವಮಾನಕಾರಿಯಾಗಿ ಮಾತನಾಡಲಾಗಿದೆ ಎಂದು ನೂಪುರ್ ಶರ್ಮಾ ಹೇಳಿಕೆ ವಿರುದ್ಧ ಹೋರಾಟ ನಡೆಸಿದರು. ಕಳೆದ ೫೦೦ ವರ್ಷಗಳಿಂದ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿನ ಲಿಂಗದ ಬಳಿ ಇರುವ ನೀರಿನಲ್ಲಿ ಕಾಲು ತೊಳೆದು ನಮಾಜಿಗೆ ತೆರಳುತ್ತಾರೆ. ಇದು ಪ್ರತಿಯೊಬ್ಬ ಹಿಂದೂಗಳ ಭಾವನೆಗೆ ಧಕ್ಕೆ ತರುವ ವಿಚಾರವಾಗಿದ್ದು ಇದರ ಬಗ್ಗೆ ಯಾವ ಮುಸ್ಲಿಂ ರಾಷ್ಟ್ರದ ಅಧ್ಯಕ್ಷರು, ಮುಖಂಡರು ಧ್ವನಿ ಎತ್ತಲಿಲ್ಲವೇಕೆ ಎಂದು ಪ್ರಶ್ನಿಸಿದರು.
ಯಾವುದೋ ದೇಶದಿಂದ ಬಂದ ಒಬ್ಬ ಮುಸಲ್ಮಾನ ವ್ಯಕ್ತಿ ಹಿಂದೂಗಳ ಆರಾಧ್ಯ ದೈವ ರಾಮನ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿ ನಿರ್ಮಿಸಿದಾಗ ರಾಮನಿಗೆ ಅವಮಾನವಾಯಿತು. ಹಾಗೂ ದೇಶದ ಅಸಂಖ್ಯಾತ ಹಿಂದೂಗಳಿಗೆ ನೋವಾಯಿತು. ಆಗ ಮುಸಲ್ಮಾನರು ಏನು ಮಾಡುತ್ತಿದ್ದರು. ಹಿಂದೂಗಳು ಶಾಂತಿ ಪ್ರಿಯರು ಹೌದು. ಆದರೆ ಅದಕ್ಕೂ ಒಂದು ಇತಿಮಿತಿ ಎಂದು ಮಾರ್ಮಿಕವಾಗಿ ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post