ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರಾವಣ ಸಂಭ್ರಮದ ಅರ್ಥವೆ ಪರಸ್ಪರರ ಸುಖ, ದುಃಖಗಳನ್ನು ಆಲಿಸುವುದು, ಭರಿಸುವುದು ಎಂದು ಮನ್ವಂತರ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಅಭಿಪ್ರಾಯಪಟ್ಟರು.
ಮನ್ವಂತರ ಮಹಿಳಾ ಮಂಡಳ, ಕೋಟೆ ಯೋಗ ಕೇಂದ್ರದ ಮಹಿಳಾ ಘಟಕ, ಬಸವನಗಂಗೂರು ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ” ಶ್ರಾವಣ ಸಂಭ್ರಮ ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಸೋಮವಾರ ಶಿವನ ಆರಾಧನೆ, ಮಂಗಳವಾರ ಶ್ರಾವಣ ಗೌರಿ, ಶುಕ್ರವಾರ ಶುಕ್ರಗೌರಿ, ಗುರುವಾರ ಗುರುರಾಯರ ಆರಾಧನೆ, ಸಂಭ್ರಮಿಸಿ ನಲಿವ ಶ್ರೀಕೃಷ್ಣನ ಹುಟ್ಟುಹಬ್ಬ, ಶನಿವಾರ ರಂಗನಾಥ, ವಿಷ್ಣುವಿನ ಆರಾಧನೆ, ಮೂವತ್ತು ದಿನವೂ ಒಂದಿಲ್ಲೊಂದು ಹಬ್ಬದ ಸಂಭ್ರಮ. ನಮ್ಮ ಮನೆಯ ಕುಟುಂಬದ ಸದಸ್ಯರು ನೆರೆಯ ಬಂಧು ಬಾಂಧವರು, ಸಮಾಜ ಬಂಧುಗಳು ಸದಾ ಸಂತುಲಿತವಾಗಿರಲಿ
ಸಂಭ್ರಮದ ಜೊತೆ ಮನೆ ಮನ ನಗುತ್ತಿದ್ದರೆ ಕುಟುಂಬ ಆ ಮೂಲಕ ಸಮಾಜವೂ ನಲಿಯುತಿರಲಿ ಎಂಬ ಸಂದೇಶ ಶ್ರಾವಣ ಮಾಸದ ಹಬ್ಬಗಳು ನೀಡುತ್ತಾ ಸಾಗುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕೋಟೆ ಕೇಂದ್ರದ ಪುಷ್ಪ ರವಿಯವರು ಮತ್ತವರ ತಂಡದವರು, ಬಸವನಗಂಗೂರಿನ ರೋಜಾ ಮತ್ತವರ ತಂಡದವರು ಅತಿಥಿಗಳಾಗಿ ಆಗಮಿಸಿದ್ದರು. ಕುಮುದ್ವತಿ ತಂಡದ ಸುಜಾತ ವೆಂಕಟೇಶ್, ಸದಸ್ಯರಾದ ಸವಿತಾ ವೆಂಕಟೇಶ್, ಜ್ಯೋತಿ ಸುರೇಶ್, ಜ್ಯೋತಿ ವಾಸುದೇವ್, ಲತಾ ಸೋಮಶೇಖರ್ ,ಕುಸುಮಾ, ಗೀತ, ಹಾಗೂ ಮನ್ವಂತರದ ಜಯಾ ಸುರೇಶ್, ಸುಲೋಚನಾ ಮೂರ್ತಿ, ಮುಂತಾದವರು ಉಪಸ್ಥಿತರಿದ್ದರು.











Discussion about this post