ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಾಖಲೆ ಪ್ರಮಾಣದ ಜನಸ್ತೋಮದ ನಡುವೆ ಯಶಸ್ವಿ ಮೆರವಣಿಗೆಯೊಂದಿಗೆ ಶಾಂತಿಯುತ ಗಣಪತಿ ವಿಸರ್ಜನೆಯಾಗಿರುವುದು ಸಂತಸದ ಸಂಗತಿ. ಇನ್ನು ಮುಂದೆಯೂ ಕೂಡ ಶಿವಮೊಗ್ಗದಲ್ಲಿ ಎಲ್ಲಾ ಸಮಾರಂಭಗಳು ಶಾಂತಿಯುತವಾಗಿ ನಡೆಯಲಿವೆ ಎಂದು ಆಶಯ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕಿಡಿಗೇರಿ ದುಷ್ಕೃತ್ಯದಿಂದ ನಗರದಲ್ಲಿ ಅಹಿತ ಘಟನೆ ನಡೆಯಿತು. ಅವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಲಾಗಿದೆ. ಹಾಗೂ ಹಿರಿಯರಿಂದ ತಿಳಿ ಹೇಳಿ ಜವಾಬ್ಧಾರಿಯುತವಾಗಿ ವರ್ತಿಸುವಂತೆ ಸೂಚನೆ ನೀಡಲಾಗಿದ್ದು, ಅವರೂ ಸಹ ಬುದ್ಧಿ ಕಲಿತಿದ್ದಾರೆಂದು ಭಾವಿಸುತ್ತೇನೆ ಎಂದರು.
ಯುವಕರು ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ತಾವು ಹುಟ್ಟಿ ಬೆಳೆದಿದ್ದು ಶಿವಮೊಗ್ಗದಲ್ಲಿಯೇ ಆದರೂ ಗಣಪತಿ ವಿಸರ್ಜನೆ ವೇಳೆ ಇಂತಹ ವೈಭವ, ಸಂಭ್ರಮ ನೋಡಿರಲಿಲ್ಲ. ಶಿವಮೊಗ್ಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲಕ್ಷಾಂತರ ಜನ ಭಾಗವಹಿಸಿ ಯಾವುದೇ ಆತಂಕವಿಲ್ಲದೆ ಹಿಂದೂ ಮಹಾ ಸಭಾ ಗಣಪತಿ ಮೆರವಣಿಗೆ ಯಶಸ್ವಿಯಾಗಿದೆ ಎಂದರು.
ಸಿದ್ಧರಾಮಯ್ಯ ಅವರು ಸಮಾವೇಶ ಮಾಡಿದ ಕೂಡಲೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅಂತಹ ನೂರಾರು ಸಮಾವೇಶಗಳನ್ನು ಬಿಜೆಪಿ ಮಾಡಿದೆ. ಇನ್ನು ಮುಂದೆ ಕೂಡ ಸಮಾವೇಶ ಮಾಡಲಿದ್ದೇವೆ. ಪ್ರಧಾನಿಯವರ ಮಂಗಳೂರು ಸಮಾವೇಶ ಭಾರಿ ಯಶಸ್ವಿಯಾಗಿದೆ ಎಂದರು.
ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಬಗ್ಗೆ ಜನತೆಗೆ ತಿಳಿಸಲು ಜನಸ್ಪಂದನಾ ಸಮಾವೇಶ ನಡೆಸಲಾಗಿದೆ. ಕಾಲು ನೋವಿನಿಂದಾಗಿ ನಾನು ಇಂದಿನ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಸ್ಪಂದನಾ ಸಮಾವೇಶ ರಾಜಕೀಯ ಪ್ರೇರಿತ ಅಲ್ಲ. ದಾವಣಗೆರೆಯಲ್ಲಿ 75 ಕೋಟಿ ರೂ. ಖರ್ಚು ಮಾಡಿ ಸಿದ್ಧರಾಮೋತ್ಸವ ಮಾಡಿದ್ದು ರಾಜಕೀಯ ಪ್ರೇರಿತ. ಮೊದಲು ಅದರ ಲೆಕ್ಕ ಕೊಡಲಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post