ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳಸವಳ್ಳಿ-ಸಿಗಂದೂರು ಸೇತುವೆ ಮುಗಿಯುವ ಹಂತಕ್ಕೆ ತಲುಪಿದೆ. ಎಪ್ರ್ರಿಲ್ನಲ್ಲಿ ಪ್ರಧಾನಿ ಮೋದಿಯಿಂದ #PM Narendra Modi ಉದ್ಘಾಟನೆಗೊಳ್ಳಲು ಸೇತುವೆ ಸಿದ್ಧ್ದವಾಗಿದೆ ಎಂದು ಸಂಸದ ರಾಘವೇಂದ್ರ #MP Raghavendra ಹೇಳಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 2019ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ #Nitin Gadkari ಅವರೇ ಬಂದು ಕೇಬಲ್ ಹ್ಯಾಂಗಿಂಗ್ ಬ್ರಿಡ್ಜ್ ಗೆ ಚಾಲನೆ ನೀಡಿದ್ದಾರೆ. 6 ವರ್ಷಗಳ ಬಳಿಕ ಬ್ರಿಡ್ಜ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದರ ನಿರ್ಮಾಣದಿಂದ ಕೊಲ್ಲೂರು, ಉಡುಪಿ, ಧರ್ಮಸ್ಥಳ ಮೊದಲಾದ ಪುಣ್ಯ ಕ್ಷೇತ್ರಗಳು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ ಎಂದರು.
Also read: ಶೀಘ್ರದಲ್ಲಿಯೇ ಶಿವಮೊಗ್ಗದಲ್ಲಿ ಕಾರ್ಗೋ ವಿಮಾನ ಹಾರಾಟ | ಸಂಸದ ರಾಘವೇಂದ್ರ ಮಾಹಿತಿ
ಡ್ರೋಣ್ ಮೂಲಕ ಸೇತುವೆ ಚಿತ್ರ ತೆಗೆಯಲಾಗಿದ್ದು ಅದ್ಭ್ಬುತವಾಗಿ ಕಂಡುಬಂದಿದೆ. 2.25ಕಿಮೀ ಉದ್ದದ ಸೇತುವೆಯನ್ನು 450 ಕೋಟಿ ವೆಚ್ಚದಲ್ಲಿ 11 ಪಿಲ್ಲರ್ಗಳ ಸಹಾಯದಿಂದ ಸೇತುವೆ ನಿರ್ಮಿಸಲಾಗಿದೆ. ಗ್ರಾಮಪಂಚಾಯಿತಿಯ ಮಟ್ಟದಲ್ಲಿದ್ದ ಸಾಗರ-ಕಳಸವಳ್ಳಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಸೇತುವೆ ನಿರ್ಮಿಸಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post