ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿಗಂದೂರು ದೇವಿಯ ಆಶೀರ್ವಾದದಿಂದ ಸಿಗಂದೂರು ಚೌಡೇಶ್ವರಿ ಸೇತುವೆ #Sigandooru Chowdeshwari Bridge ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ #Harathalu Halappa ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 7 ವರ್ಷಗಳ ಹಿಂದೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ #Nitin Gadkari ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ #B S Yadiyurappa ಹಾಗೂ ಕಾಗೋಡು ತಿಮ್ಮಪ್ಪನವರು ಈ ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಅವರದೇ ಉಪಸ್ಥಿತಿಯಲ್ಲಿ ಈ ಸೇತುವೆಯ ಐತಿಹಾಸಿಕ ಉದ್ಘಾಟನೆ ನಡೆದು 7 ದಶಕಗಳ ಈ ಭಾಗದ ಜನರ ಕನಸು ನನಸಾಗಿದೆ ಎಂದರು.

ಇವರನ್ನು ಯಾರು ಕರೆಯಬೇಕು. ಈ ಕಾರ್ಯಕ್ರಮ ರಾಜ್ಯ ಸರ್ಕಾರವೇ ಸಂಘಟಿಸಿ ಮಾಡಬೇಕಾಗಿತ್ತು. ಯಾಕೆ ಮಾಡಲಿಲ್ಲ? ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ, ಸೋಲು –ಗೆಲುವು ಇದ್ದೇ ಇರುತ್ತದೆ. ಹಸಿರುಮಕ್ಕಿ ಸೇತುವೆ 2022 ಫೆಬ್ರವರಿ 1ರಂದು ನಾನು ಶಾಸಕನಾಗಿದ್ದಾಗ ಯಡಿಯೂರಪ್ಪನವರು 50 ಕೋಟಿ ರೂ. ನೀಡಿದ್ದರು. ಆದರೆ, ತಾಂತ್ರಿಕ ತೊಂದರೆಯಿಂದ ಸೂಚಿಸಿದ ನೀರಿನ ಮಟ್ಟಕ್ಕಿಂತ ಜಾಸ್ತಿ ಇದೆ ಎಂದು ಗುತ್ತಿಗೆದಾರ ಹಿಂದೇಟು ಹಾಕಿದ್ದರಿಂದ ಮತ್ತೆ ಅದು ಕೇಂದ್ರಕ್ಕೆ ಅಪ್ರೂವಲ್ ಗೆ ಹೋಗಿ ಹೆಚ್ಚುವರಿಯಾಗಿ ಅದಕ್ಕೆ ಅನುದಾನವನ್ನು ಯಡಿಯೂರಪ್ಪ ಘೋಷಣೆ ಮಾಡಿದ್ದರು. ಒಟ್ಟು 125 ಕೋಟಿ ರೂ. ವೆಚ್ಚದ ಆ ಸೇತುವೆಗೆ ಅಪ್ರೂವಲ್ ಸಿಕ್ಕಿತ್ತು. ಆ ನಂತರ ಕೊರೋನಾ ಬಂದಿದ್ದರಿಂದ ಅದು ತಡವಾಯ್ತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಡಿ.ಎಸ್. ಅರುಣ್, ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post