ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸುವಲ್ಲಿ ಆರೋಗ್ಯಕರ ಮನಸ್ಸು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪಿಇಎಸ್ ಟ್ರಸ್ಟ್ ಮುಖ್ಯ ಸಂಯೋಜಕರಾದ ಡಾ.ಆರ್. ನಾಗರಾಜ್ ಅಭಿಪ್ರಾಯಪಟ್ಟರು.
ಶೈಕ್ಷಣಿಕ ಸಮುದಾಯದಲ್ಲಿ ಮಾನಸಿಕ ಸ್ವಾಸ್ಥö್ಯವನ್ನು ಉತ್ತೇಜಿಸುವ ಸಲುವಾಗಿ ಪಿಇಎಸ್ ಕಾಲೇಜು ಹಾಗೂ ಪಾಸಿಟಿವ್ ಮೈಂಡ್ ಆಸ್ಪತ್ರೆಯ ನಡುವೆ ಒಪ್ಪಂದ ಏರ್ಪಟ್ಟ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸುವಲ್ಲಿ ಆರೋಗ್ಯಕರ ಮನಸ್ಸು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಸಾಕಾರಗೊಳಿಸುವಲ್ಲಿ ನಮ್ಮ ಸಂಸ್ಥೆ ಸಂಫೂರ್ಣವಾಗಿ ಬದ್ದವಾಗಿದೆ ಎಂದರು.
ಮಾನಸಿಕ ಯೋಗ ಕ್ಷೇಮ ಮತ್ತು ಶೈಕ್ಷಣಿಕ ಯಶಸ್ಸಿನ ನಡುವಿನ ಕೊಂಡಿಯನ್ನು ಬಲಪಡಿಸುವುದು, ವಿಶೇಷವಾಗಿ ಅಧ್ಯಾಪಕರ ತರಬೇತಿ ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದ್ದು, ಒಟ್ಟಾರೆ ಶೈಕ್ಷಣಿಕ ಸಮುದಾಯದಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಸ್.ಟಿ. ಅರವಿಂದ್, ಪಿಇಎಸ್ ಟ್ರಸ್ಟ್ ಇಂತಹ ಹಲವಾರು ಸದುz್ದÉÃಶದ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.
ಪ್ರಮುಖವಾಗಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ, ಪಿಇಎಸ್ ಆಡಳಿತ ವರ್ಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಪ್ರಯತ್ನಗಳು, ಉತ್ತಮ ಸಮಾಜವನ್ನು ಬೆಳೆಸಲು ಗಣನೀಯ ಕೊಡುಗೆ ನೀಡುತ್ತವೆ ಎಂದು ವೈದ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಿಇಎಸ್ ಟ್ರಸ್ಟ್ ಮಾನಸಿಕ ಆರೋಗ್ಯ ಕೌನ್ಸಿಲರ್ ಎಸ್. ತನುಜಾ ಮಾತನಾಡಿ, ಈ ಸಹಯೋಗದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಈ ಒಡಂಬಡಿಕೆಯು ಪಿಇಎಸ್ ಗ್ರೂಪ್ ಆಫ್ ಇನ್ಸಿö್ಟಟ್ಯೂಷನಲ್ಲಿ ಕೌನ್ಸೆಲಿಂಗ್ ಯತ್ನಗಳನ್ನು ಬಲಪಡಿಸುತ್ತದೆ ಎಂದರು.
ಶೈಕ್ಷಣಿಕ ಸಮುದಾಯದಲ್ಲಿ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಉz್ದÉÃಶದಿಂದ ಪಿಇಎಸ್ ಸಂಸ್ಥೆ ಹಾಗೂ ಪಾಸಿಟಿವ್ ಮೈಂಡ್ ಆಸ್ಪತ್ರೆ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜಕರಾದ ಡಾ.ಆರ್. ನಾಗರಾಜ್ ಮತ್ತು ಪಾಸಿಟಿವ್ ಮೈಂಡ್ ಆಸ್ಪತ್ರೆಯ ಪ್ರತಿಷ್ಠಿತ ಮನೋವೈದ್ಯ ಡಾ.ಎಸ್.ಟಿ. ಅರವಿಂದ್ ಅವರುಗಳು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















