ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಗೀತಾ ಜಯಂತಿ Geetha Jayanthi ಪ್ರಯುಕ್ತ ಭಗವದ್ಗೀತೆ ಆಧರಿತ ವಿಶೇಷ ಉಪನ್ಯಾಸ ಮಾಲಿಕೆ ಆಧ್ಯಾತ್ಮಿಕ ಉನ್ನತಿಗಾಗಿ ಗೀತೆ ಎಂಬ ಕಾರ್ಯಕ್ರಮವನ್ನು ಡಿ.21ರಿಂದ 23ರವರೆಗೆ ಸಂಜೆ 6ಕ್ಕೆ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್ ಹೇಳಿದರು.
ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಗವದ್ಗೀತೆ ಎಂಬುವುದು ಭಾರತೀಯ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿ ಬಂದಿದೆ. ಮನುಷ್ಯನ ಜೀವನದ ಎಲ್ಲಾ ಘಟ್ಟಗಳ ಸಮಸ್ಯೆಗಳಿಗೆ ಪರಿಹಾರವು ಇದೆ. ನಿತ್ಯ ಜೀವನದಲ್ಲಿ ಎದುರಿಸುವ ಸಾಮಾಜಿಕ ಸಮಸ್ಯೆಗಳು ಅಲ್ಲದೇ ಯುದ್ಧ, ಭೂಮಿ, ಶಿಕ್ಷಣ, ರಾಜಕೀಯ ಕ್ಷೇತ್ರ ಮುಂತಾದವುಗಳಿಗೆ ಸರ್ವಕಾಲಕ್ಕೂ ಅನುವಯವಾಗುವ ರೀತಿಯಲ್ಲಿ ಇದು ಸಮಧಾನ ಮತ್ತು ಪರಿಹಾರವನ್ನು ನೀಡುತ್ತದೆ ಎಂದರು.
ಮಾರ್ಗಶಿರ ಶುದ್ಧ ಏಕಾದಶಿ ಎಂದು ಶ್ರೀಕೃಷ್ಣ ಭಗವದ್ಗೀತೆಯನ್ನು ಉಪದೇಶಿಸಿದ ದಿನವಾಗಿದೆ. ಇದರ ಅಂಗವಾಗಿ ಡಿ.21ರಿಂದ 23ರವರೆಗೆ ಭಗವದ್ಗೀತೆ ಆಧಾರಿತ ವಿಶೇಷ ವಿಶ್ಲೇಷಣಾತ್ಮಕ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. 21ರಂದು ಸಂಜೆ 6ಕ್ಕೆ ಶ್ರೀಮನ್ ಮದ್ವಸೇವಾ ಸಮಿತಿಯ ನಿರ್ದೇಶಕ ಎಂ.ಜಿ.ರಾಮಚಂದ್ರಮೂರ್ತಿ ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಭಗವದ್ಗೀತೆ, ಭಕ್ತಿಯೋಗ ವಿಷಯ ಕುರಿತು ಪುತ್ತೂರಿನ ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ವಿಶೇಷ ಉಪನ್ಯಾಸ ನೀಡುವರು ಎಂದರು.
Also read: ಅಪರಾಧ ಚಟುವಟಿಕೆಗಳ ನಿಯಂತ್ರಿಸಲು ಸಾರ್ವಜನಿಕ ಸಹಕಾರ ಅಗತ್ಯ: ಎಸ್ಪಿ ಮಿಥುನ್ ಕುಮಾರ್
22ರಂದು ಸಂಜೆ 6ಕ್ಕೆ ಭಗವದ್ಗೀತೆ ಮತ್ತು ಕರ್ಮಯೋಗ ಕುರಿತು ತೋಳ್ಪಾಡಿಯವರೇ ಉಪನ್ಯಾಸ ನೀಡುತ್ತಾರೆ. 23ರಂದು ಸಂಜೆ ಕಾಸರಗೋಡಿನ ಶಿಕ್ಷಕ ಹಾಗೂ ವಾಗ್ಮಿ ಸುಬ್ರಾಯ ನಂದೋಡಿ ಭಗವದ್ಗೀತೆ-ಜ್ಞಾನಯೋಗ ಕುರಿತು ಉಪನ್ಯಾಸ ನೀಡುವರು. ಸಮಾರೋಪ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮಹಾಸಭಾದ ಪದಾಧಿಕಾರಿಗಳು ಹಾಗೂ ಶಿವಮೊಗ್ಗ ಶೃಂಗೇರಿ ಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಕನ್ನಡ ಅಷ್ಟಾವಧಾನ : ಡಿ.24ರಂದು ಸಂಜೆ 5.30ಕ್ಕೆ ಅಭಿರುಚಿ ಭಾರತೀಯ ಸಾಂಸ್ಕøತಿ ವೇದಿಕೆಯಿಂದ ಕನ್ನಡ ಅಷ್ಟಾವಧಾನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಅವಧಾನಿ ಗಣೇಶ್ ಭಟ್ ಕೊಪ್ಪಲತೋಟ, ಡಾ.ಪ್ರಸಾದ್ ಎನ್.ಬಾಪಟ್, ಸಿ.ಎಸ್.ಚಂದ್ರಶೇಖರ್, ಡಾ. ಶಾಂತರಾಮ ಪ್ರಭುಗಳು, ಜಿ.ಎಸ್.ನಟೇಶ್, ಶ್ರೀಶ ಕಾರಂತ್, ಮಾನಸ ಶಿವರಾಮಕೃಷ್ಣ, ಪಿ.ಮುರಳೀಧರ, ಮಂಜುನಾಥ ಹೆಗ್ಡೆ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ನಿಷೇಧಾಕ್ಷರ ದತ್ತಪದಿ ಸಮಸ್ಯಾಪೂರ್ಣ, ಅಪ್ರಸ್ತುತ ಪ್ರಸಂಗ, ಆಶು ಕವಿತೆ, ಕಾವ್ಯವಾಚನ, ಸಂಖ್ಯಾಬಂಧ, ಚಿತ್ರಕವಿತೆ ಕಾರ್ಯಕ್ರಮಗಳು ಇರುತ್ತವೆ ಎಂದು ಕಾರ್ಯದರ್ಶಿ ಕೆ.ಜಿ.ಕುಮಾರಶಾಸ್ತ್ರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಕೆ. ವಂಕಟೇಶ ಮೂರ್ತಿ, ಸರಳ ಹೆಗ್ಡೆ, ಕುಲಕರ್ಣಿ, ಕೇಶವಮೂರ್ತಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















