ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಪಿಇಎಸ್’ಐಎಂಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹಣಕಾಸಿನ ಸಾಕ್ಷರತೆ ಕುರಿತ ವಿಶೇಷ ಉಪನ್ಯಾಸ ಯಶಸ್ವಿಯಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರಿನ ಹಣಕಾಸು ಸೇರ್ಪಡೆ ಅಭಿವೃದ್ಧಿ ಇಲಾಖೆಯ ಸಹಾಯಕ ಜನರಲ್ ಮ್ಯಾನೇಜರ್ ಬುಬುಲ್ ಬೊರ್ಡೋಲಿ ಅವರು, ಭಾರತೀಯ ರಿಸರ್ವ್ ಬ್ಯಾಂಕ್, ಅದರ ಕಾರ್ಯಗಳು, ಪಾತ್ರ ಮತ್ತು ಪ್ರಾಮುಖ್ಯತೆ, ನಿಯಂತ್ರಣ ಪ್ರಾಧಿಕಾರದ ಕಾರ್ಯ ನಿರ್ವಹಣೆ ಕುರಿತು ಮಹತ್ವದ ವಿಚಾರಗಳನ್ನು ತಿಳಿಸಿಕೊಟ್ಟರು.

ಶಿವಮೊಗ್ಗದ ಲೀಡ್ ಬ್ಯಾಂಕ್ನ ಲೀಡ್ ಡಿಸ್ಟಿçಕ್ ಮ್ಯಾನೇಜರ್ ಹನುಮಂತಪ್ಪ ಅವರು ಲೀಡ್ ಬ್ಯಾಂಕ್’ಗಳ ಕಾರ್ಯ ವಿಧಾನದ ಕುರಿತು ಹಲವು ಉಪಯುಕ್ತ ಮಾಹಿತಿಯನ್ನು ನೀಡಿದರು.

ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಿಲ್ಮಾ ಮಿರಾಂಡ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post