ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಕ್ರಾಂತಿ ಪ್ರಯುಕ್ತ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆ ಶ್ರೀನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಜ.14ರಂದು ಬೆಳಿಗ್ಗೆ 6 ರಿಂದ 9ರವರೆಗೆ 3 ಭಜನಾ ತಂಡದಿಂದ ಧನುರ್ಮಾಸ ಭಜನಾ ಸೇವೆ ಸಂಜೆ 5 ರಿಂದ ಸದ್ಯೋಜಾತ ಗುರುಕುಲ ಮಕ್ಕಳಿಂದ ಭಗವದ್ಗೀತೆ ಪಠಣ, ಭಜನೆ ನಡೆಯುತ್ತದೆ.
ಜ.15ರಂದು ಬೆಳಿಗ್ಗೆ 9 ಕ್ಕೆ ಆರೋಗ್ಯಕ್ಕೊಸ್ಕರ ಸಮಾಜದ ಸ್ವಾಸ್ಥ್ಯಕ್ಕೆ ವಿಶೇಷ ಸೌರಸೂಕ್ತ ಹೋಮ,11:30ಕ್ಕೆ ಪೂರ್ಣಾಹುತಿ ಜರುಗಲಿದೆ ಎಂದು ಅರ್ಚಕ ಶಂ. ಸಂದೇಶ ಉಪಾದ್ಯ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post