ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕಳೆದ ವಾರ ವಾರದ ನಾಲ್ಕು ದಿನ ಹೇಗೆ ಕಠಿಣ ಲಾಕ್ ಡೌನ್ ಮಾಡಲಾಗಿತ್ತು. ಅದನ್ನ ಈ ವಾರವೂ ಅಂದರೆ ಮೇ 24ರವರೆಗೆ ಮುಂದುವರೆಸಲು ಸಭೆ ನಿರ್ಣಯಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಿರ್ಣಯ ಪ್ರಕಟಿಸಿದ ಅವರು, ತರಕಾರಿ ಅವರಿಗೆ ಒಂದು ವಾರ ಬೆಳಿಗ್ಗೆ 6 ರಿಂದ 7 ಗಂಟೆ, ದಿನಸಿಯವರಿಗೆ 6 ರಿಂದ 9 ಗಂಟೆಯ ವರೆಗೆ ಅವಕಾಶ ನೀಡಲಾಗುತ್ತಿದೆ ಎಂದರು.
ಜವಳಿ ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಅವಕಾಶ ನೀಡಿಲ್ಲ ಹಾಗಾಗಿ ಜವಳಿ, ಹೋಟೆಲ್, ಕೈಗಾರಿಕೆಗೆ ಎಂದಿನಂತೆ ಲಾಕ್ ಡೌನ್ ನಿಯಮಾವಳಿ ಅನ್ವಯವಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post