ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಪ್ರತಿಷ್ಠಿತ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯವು ರಾಜ್ಯ ಮಟ್ಟದ ಅನಸ್ತೇಶಿಯಾ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದು, ಇದರಲ್ಲಿ ಅಂತಾರಾಷ್ಟ್ರೀಯ ವೈದ್ಯರು ಪಾಲ್ಗೊಂಡಿದ್ದು ವಿಶೇವಾಗಿತ್ತು.
ಇಂಡಿಯನ್ ಸೊಸೈಟಿ ಆಫ್ ಅನಸ್ತೇಶಿಯಿಸ್ಟ್ ವತಿಯಿಂದ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿದ್ದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ನಿಟ್ಟೆ ಮಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಸತೀಶ್ ಭಂಡಾರಿ, ಪ್ರಸ್ತುತ ಕಾಲಘಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅರಿವಳಿಕೆ ಶಾಸ್ತ್ರವು ವೈದ್ಯ ವಿಜ್ಞಾನದ ಒಂದು ಪ್ರತ್ಯೇಕ ಹಾಗೂ ಮುಖ್ಯ ವಿಶೇಷ ವಿಷಯವಾಗಿ ಬೆಳೆದು ನಿಂತಿದೆ. ಯಾವುದೇ ಶಸ್ತ್ರಚಿಕಿತ್ಸೆ ನಡೆಯಬೇಕಾದರೆ, ಶಸ್ತ್ರಚಿಕಿತ್ಸಾ ತಜ್ಞರಷ್ಟೇ ಅರಿವಳಿಕೆ ತಜ್ಞರೂ ಮುಖ್ಯರಾಗಿದ್ದಾರೆ ಎಂದರು.
ಅನಸ್ತೇಶಿಯಾ ವಿಭಾಗದಲ್ಲಿನ ಉನ್ನತೀಕರಿಸಿದ ಜ್ಞಾನ, ಇದರಲ್ಲಿನ ಕೌಶಲ್ಯಗಳ ಜ್ಞಾನ ಸೇರಿದಂತೆ ವಿವಿಧ ವಿಚಾರಗಳನ್ನು ತಿಳಿಸುವ ಸಮ್ಮೇಳನ ಇದಾಗಿದ್ದು, ಆನ್ ಲೈನ್ ಹಾಗೂ ಆಫ್ ಲೈನ್ ಎರಡರಲ್ಲೂ ಆಯೋಜಿಸಲಾಗಿತ್ತು.
ರಾಷ್ಟ್ರದ ವಿವಿಧ ಕಡೆಗಳು ಮಾತ್ರವಲ್ಲದೇ, ವಿಶ್ವದ ಪ್ರಮುಖ ರಾಷ್ಟ್ರಗಳಾದ ಅಮೆರಿಕಾ, ಯುಕೆ, ದುಬೈ, ಖಥಾರ್ ಸೇರಿದಂತೆ ೯೦ಕ್ಕೂ ಅಧಿಕ ಅನಸ್ತೇಶಿಯಾ ತಜ್ಞರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಅನಸ್ತೇಶಿಯಾ ಐಎಸ್’ಎ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಮುರಳೀಧರ್, ರಾಷ್ಟ್ರೀಯ ಕಾರ್ಯದರ್ಶಿ ಡಾ.ನವೀನ್ ಮಲ್ಹೋತ್ರಾ, ಡಾ.ವೆಂಕಟಗಿರಿ, ಐಎಸ್’ಎ ರಾಷ್ಟ್ರೀಯ ಮಾಜಿ ಅಧ್ಯಕ್ಷ-ಶೈಕ್ಷಣಿಕ ಸಂಯೋಜಕ ಡಾ.ಬಾಲಬಾಸ್ಕರ್, ಐಎಸ್’ಎ ರಾಜ್ಯಾಧ್ಯಕ್ಷ ಡಾ.ವಿಜಯಾನಂದ್, ಸುಬ್ಬಯ್ಯ ವೈದ್ಯಕೀಯ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ.ಎಸ್.ಎಂ. ಕಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಹಾಗೂ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post