Sunday, November 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ

ಜನರ ನಿರೀಕ್ಷೆ ಪೂರೈಸುವಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆ ವಿಫಲ: ಜಯರಾಮ್ ಅಮ್ಮಿನ್ ಅಭಿಪ್ರಾಯ

ಸಹ್ಯಾದ್ರಿ ಕಲಾ ಕಾಲೇಜಿನ ಸ್ನಾತಕೋತ್ತರ ರಾಜ್ಯಶಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ

April 7, 2022
in ಶಿವಮೊಗ್ಗ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಸ್ವಾತಂತ್ರ್ಯನಂತರದ ದಿನಗಳಲ್ಲಿ ರಾಜಕೀಯ ಬದಲಾವಣೆಯಾಗುತ್ತಿದ್ದಂತೆ ಜನರಲ್ಲಿ ನಿರೀಕ್ಷೆಯ ಮಟ್ಟ ಹೆಚ್ಚಿದೆ. ಆದರೆ ಈ ನಿರೀಕ್ಷೆಯನ್ನು ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಪೂರ್ಣ ಮಾಡಲು ಸಾಧ್ಯವಾಗಿಲ್ಲ ಎಂದು ಮಂಗಳೂರು ವಿವಿಯ ಸ್ನಾತಕೋತ್ತರ ರಾಜ್ಯಶಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಜಯರಾಮ್ ಅಮ್ಮಿನ್ ಎಂದು ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಕಲಾ ಕಾಲೇಜಿನ Sahyadri College Shivamogga  ಸ್ನಾತಕೋತ್ತರ ರಾಜ್ಯಶಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ತಥಾಕಥಿತ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಹೊಸ ವ್ಯವಸ್ಥೆ ಹುಟ್ಟುತ್ತಿದೆ. ಇದಕ್ಕೆ ರಾಜಕೀಯ ವ್ಯವಸ್ಥೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕು. ಸ್ವಾತಂತ್ರ್ಯದ ಬಳಿಕ ಉದ್ಭವಿಸಿದ ರಾಜಕೀಯ ವ್ಯವಸ್ಥೆಯಲ್ಲಿ ಮೌಲ್ಯಗಳಿದ್ದವು. ರಾಜಕೀಯದ ನಡುವೆಯೇ ರಾಜಕೀಯ ನೇತಾರರಲ್ಲಿ ಜ್ಞಾನ ಕಂಡು ಬರುತ್ತಿತ್ತು. ಸದಾ ಅಧ್ಯಯನ ಶೀಲರಾಗಿರುತ್ತಿದ್ದರು. ತಾವು ನಂಬಿದ ಸಿದ್ದಾಂತಗಳು ಏನೇ ಇರಲಿ ಮುಖಾಮುಖಿ ಚರ್ಚೆಯ ಮೂಲಕ ಇದಕ್ಕೆ ತಾರ್ಕಿಕ ಅಂತ್ಯವೊಂದನ್ನು ಕಂಡುಕೊಳ್ಳುತ್ತಿದ್ದರು. ರಾಜಕೀಯ ದ್ವೇಷ, ವೈಮನಸ್ಸು ಅಲ್ಲಿರಲಿಲ್ಲ. ಬದಲಾಗಿ ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸುವ ಮನಃಸ್ಥಿತಿ ಇತ್ತು. ಆಗಿನ ರಾಜಕೀಯ ನಾಯಕರ ಮೌಲ್ಯಯುತ ದಾರಿ ಉಳಿದವರಿಗೆ ಮಾರ್ಗದರ್ಶನವಾಗುತ್ತಿತ್ತು ಎಂದು ವಿಶ್ಲೇಷಿಸಿದ ಅವರು ಈಗ ವರ್ತಮಾನದಲ್ಲಿ ರಾಜಕೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ವಿಷಾದಿಸಿದರು.

ಸಾಲಡ್ ಮಿಶ್ರಣದಲ್ಲಿ ಎಲ್ಲ ಹಣ್ಣು, ತರಕಾರಿಗಳು ಪ್ರತ್ಯೇಕ ರುಚಿಯನ್ನು ಹಾಗೆಯೇ ಉಳಿಸಿಕೊಳ್ಳುವುದೂ ಮತ್ತು ಇವುಗಳನ್ನು ಗ್ರೈಂಡ್ ಮಾಡಿದಾಗ ಎಲ್ಲವೂ ಒಂದಾಗಿ ಒಂದೇ ರುಚಿ ಮೂಡುವ ಉದಾಹರಣೆ ನೀಡಿದ ಅವರು ಒಂದಾಗಿದ್ದೂ ಪ್ರತ್ಯೇಕ ಅಸ್ತಿತ್ವದ ಬದಲಿಗೆ ಎಲ್ಲವೂ ಒಂದಾಗಿರುವಂತೆ ಈಗಿನ ವ್ಯವಸ್ಥೆ ಭಾಸವಾಗುತ್ತಿದೆ. ಈಗ ಸಂಯೋಜಿತ ರಾಷ್ಟ್ರೀಯತೆಯ ಮನೋಭಾವ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.

ಜಾತಿ ಆಧಾರಿತ ರಾಜಕಾರಣದಿಂದ ಜಾತಿಯತೆಯ ವಿಜೃಂಭಣೆ, ಭಿನ್ನ ಚಿಂತನೆ- ವೈಚಾರಿಕ ಅಭಿಪ್ರಾಯವನ್ನು ಮುಖಾಮುಖಿಯಾಗಿಸುವಲ್ಲಿನ ವಿಫಲತೆ ಕಾಣುತ್ತಿದ್ದೇವೆ ಎಂದು ಹೇಳಿದರು.

ವೈಪಲ್ಯಗಳ ನಡುವೆಯೂ ಪತ್ರಕರ್ತರ ಕೆಲಸ ದೊಡ್ಡದು:
ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿ, ಕಾರ್ಯಾಂಗ, ಶಾಸಕಾಂಗದಂತೆ ಮಾಧ್ಯಮ ರಂಗವೂ ಹೂಡಿಕೆಯ ವ್ಯವಸ್ಥೆಯಾಗುತ್ತಿರುವಾಗ ಪ್ರಜಾಪ್ರಭುತ್ವ ಉಳಿವಿಕೆ ಮಾಧ್ಯಮಗಳಿಂದ ಮಾತ್ರ ಬಹಳಷ್ಟು ನಿರೀಕ್ಷೆ ಹೇಗೆ ಸಾಧ್ಯ? ಕಾರ್ಪೋರೇಟ್ ಜಗತ್ತು ಮಾಧ್ಯಮ ರಂಗವನ್ನು ಆಳುತ್ತಿರುವುದರಿಂದ ಸಹಜವಾಗಿಯೇ ಮಾಧ್ಯಮಗಳು ಧ್ವನಿ ಇಲ್ಲದವರಿಗೆ ಧ್ವನಿಯಾಗುವುದಕ್ಕಿಂತ ಹೆಚ್ಚು ಉಳ್ಳವರ ಧ್ವನಿಯಾಗುತ್ತಿದೆ ಎಂದು ಹೇಳಿದರು.

ಅನೇಕ ವೈಪಲ್ಯಗಳ ನಡುವೆಯೂ ಪತ್ರಕರ್ತರು ಇಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಯನ್ನು ಹೊರ ಜಗತ್ತಿಗೆ ತಲುಪಿಸುವಲ್ಲಿ ಯಶಸ್ಸಿನ ಹಾದಿಗೆ ಹೊರಳುತ್ತಿದ್ದಾರೆ. ಆದರೆ ಈ ಚಿಂತನೆಯ ಪತ್ರಕರ್ತರಿಗೆ ಸೂಕ್ತ ರಕ್ಷಣೆಯ ವ್ಯವಸ್ಥೆ, ಮೂಲಭೂತ ವ್ಯವಸ್ಥೆಯ ಬಗ್ಗೆ ಮಾತ್ರ ಸರ್ಕಾರ ಜಾಣ ಮೌನ ತಾಳುತ್ತಿವೆ ಎಂದು ಹೇಳಿದರು.

ಸ್ವಾತಂತ್ರ್ಯಾ ನಂತರದ ರಾಜಕೀಯ ವ್ಯವಸ್ಥೆ ಅನೇಕ ಹೊರಳುವಿಕೆಯಲ್ಲಿ ಇಲ್ಲಿಯವರೆಗೆ ಸಾಗಿ ಬಂದಿದೆ. ವ್ಯಕ್ತಿ ಆಧಾರಿತ ಪಕ್ಷಗಳು, ವ್ಯವಸ್ಥೆಯನ್ನು ಧಿಕ್ಕರಿಸುವ ರಾಜಕೀಯ ವ್ಯವಸ್ಥೆ, ಪುನಃ ವ್ಯಕ್ತಿ ಆಧಾರಿತ ಪಕ್ಷಗಳು, ರಾಷ್ಟ್ರೀಯತೆ ಚಿಂತನೆಯ ರಾಜಕೀಯ ವ್ಯವಸ್ಥೆಗಳು ನಮ್ಮ ಮುಂದಿವೆ. ಇದೀಗ ಕೊನೆಯ ಹೊರಳು ಹಾದಿಯಲ್ಲಿ ಅಭಿವೃದ್ಧಿಯ ಚಿಂತನೆಯ ರಾಜಕೀಯ ವ್ಯವಸ್ಥೆ ಕಂಡು ಬರುತ್ತಿದೆ. ಆದರೆ ಸ್ವಾತಂತ್ರ್ಯದ ಬಳಿಕ ಇದುವರೆಗಿನ ಕಾಲದಲ್ಲಿ ಜನರಿಗೆ ತಮಗೆ ಯಾವ ರೀತಿಯ ರಾಜಕೀಯ ವ್ಯವಸ್ಥೆ ಬೇಕು, ಯಾವ ಪರಿಕಲ್ಪನೆಯ ರಾಜಕೀಯ ಪಕ್ಷಗಳು ಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲ ಇರುವಂತೆ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಗಳು ಜವಾಬ್ದಾರಿಯುತ್ತ ಮಾಧ್ಯಮಗಳನ್ನು ಬಯಸುತ್ತದೆ. ಎಂದರೆ ಸರ್ಕಾರಕ್ಕೆ ಬದ್ದರಾಗಿರುವ ಮಾಧ್ಯಮಗಳು ಬೇಕು ಎನ್ನುತ್ತವೆ. ಇದು ಸಧ್ಯದ ಸಮಸ್ಯೆ. 2000 ವರ್ಷದವರೆಗೂ ಮಾಧ್ಯಮಗಳ ವರದಿಗೆ ಸ್ಪಂದಿಸುತ್ತಿದ್ದ ಸರ್ಕಾರಗಳು, ರಾಜಕೀಯ ವ್ಯವಸ್ಥೆ ಆ ಬಳಿಕ ಸ್ಪಂದನೆ ಎಂಬುದನ್ನೇ ಮರೆತಿರುವುದು ಕೂಡ ವ್ಯವಸ್ಥೆ ಸೋಲಲು ಕಾರಣವಾಗುತ್ತಿದೆ ಎಂದು ವಿಶ್ಲೇಷಿಸಿದರು.

Also read: ಸಮುದಾಯದಲ್ಲಿ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಸಾರ್ಥಕತೆ ಸಾಧ್ಯ…

ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಹೆಚ್. ರಾಮಲಿಂಗಪ್ಪ ಮಾತನಾಡಿ, ರಾಜಕೀಯ ಶಾಸದ ವಿದ್ಯಾರ್ಥಿಗಳು ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ ಇನ್ನಷ್ಟು ಅರಿವು ಮೂಡಿಸಿಕೊಳ್ಳಬೇಕು. ಇಂತಹ ವಿಚಾರ ಸಂಕಿರಣದಲ್ಲಿ ಮೂಡಿ ಬರುವ ಹೊಸ ವಿಷಯಗಳನ್ನು ಗ್ರಹಿಸುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಬಿ. ಧನಂಜಯ ಅವರು ಮಾತನಾಡಿ ಮುಂದಿನ ದಿನಗಳು ಇನ್ನಷ್ಟು ಸಂಕಷ್ಟ ತರುವ ದಿನಗಳಾಗಿದ್ದು, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂದರು.

ಜಗತ್ತಿನ ಎಲ್ಲೆಡೆ ನಡೆಯುವ ಘಟನೆಗಳನ್ನು ಅವಲೋಕಿಸಬೇಕಿದೆ. ಇದರ ಪರಿಣಾಮಗಳು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮದ ಕುರಿತು ಎಚ್ಚರಿಕೆಯಿಂದ ನೋಡಬೇಕಿದೆ. ಯುವಜನರು ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣದ ಕನಸನ್ನು ನನಸು ಮಾಡುವತ್ತ ಹೆಜ್ಜೆ ಇಡಬೇಕಿದೆ. ಸುಂದರ ಸಮಾಜ ನಿರ್ಮಾಣದತ್ತ ಸಾಗಬೇಕಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಗ್ರಾಮೀಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಕಳ್ಳಿಮಠ್ ಶಂಕರಯ್ಯ, ಪ್ರೊ. ಅಶೋಕ್ ಇದ್ದರು. ಸಹ್ಯಾದ್ರಿ ಕಲಾ ಕಾಲೇಜಿನ ಸ್ನಾತಕೋತ್ತರ ರಾಜ್ಯಶಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಘಟನಾ ನಿರ್ದೇಶಕರೂ ಆದ ಪ್ರಾಧ್ಯಾಪಕ ಪ್ರೊ. ಎಂ. ಹೆಚ್. ಪ್ರಹ್ಲಾದಪ್ಪ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ. ಹೆಚ್. ಸತ್ಯನಾರಾಯಣ ವಂದಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaSahyadri College ShivamoggaShimogaShivamoggaShivamogga Newsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್ಸಹ್ಯಾದ್ರಿ ಕಾಲೇಜ್
Previous Post

ಸಮುದಾಯದಲ್ಲಿ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಸಾರ್ಥಕತೆ ಸಾಧ್ಯ…

Next Post

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಏ.9ರಂದು ಬೃಹತ್ ಪ್ರತಿಭಟನೆ: ಹೆಚ್.ಪಿ. ಗಿರೀಶ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಏ.9ರಂದು ಬೃಹತ್ ಪ್ರತಿಭಟನೆ: ಹೆಚ್.ಪಿ. ಗಿರೀಶ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ವೈದ್ಯರ ಸಲಹೆಯಿಲ್ಲದೆ ಆಂಟಿ ಬಯೋಟಿಕ್ ಸೇವನೆ ಅಪಾಯಕ್ಕೆ ಆಹ್ವಾನ | ಡಾ. ಅಮೃತ್ ಉಪಾಧ್ಯಾಯ ಸಲಹೆ

November 22, 2025

ಸಿಗ್ನಲ್ – ಸುರಕ್ಷತಾ ಸಂಬಂಧಿ ಕೆಲಸ ಹಿನ್ನೆಲೆ | ಹಲವು ರೈಲುಗಳ ಸಂಚಾರ ರದ್ದು

November 22, 2025

Partial Cancellation and Regulation of Trains

November 22, 2025

ಪಿಇಎಸ್ ಐಎಎಮ್‌ಎಸ್ ಸ್ವಯಂಸೇವಕರಿಗೆ ಶಿವಮೊಗ್ಗ ಪಾಲಿಕೆಯಿಂದ ಪ್ರಮಾಣಪತ್ರ

November 22, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ವೈದ್ಯರ ಸಲಹೆಯಿಲ್ಲದೆ ಆಂಟಿ ಬಯೋಟಿಕ್ ಸೇವನೆ ಅಪಾಯಕ್ಕೆ ಆಹ್ವಾನ | ಡಾ. ಅಮೃತ್ ಉಪಾಧ್ಯಾಯ ಸಲಹೆ

November 22, 2025

ಸಿಗ್ನಲ್ – ಸುರಕ್ಷತಾ ಸಂಬಂಧಿ ಕೆಲಸ ಹಿನ್ನೆಲೆ | ಹಲವು ರೈಲುಗಳ ಸಂಚಾರ ರದ್ದು

November 22, 2025

Partial Cancellation and Regulation of Trains

November 22, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!