ಶಿವಮೊಗ್ಗ: ಗೋಪಾಳದ ಪ್ರತಿಷ್ಠಿತ ರಾಮಕೃಷ್ಣ ವಿದ್ಯಾನಿಕೇತನದ 10ನೆಯ ತರಗತಿ ಮಕ್ಕಳು ಜಿಲ್ಲಾ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದು, ಶಾಲೆಗೆ ಕೀರ್ತಿ ತಂದಿದ್ದಾರೆ.
ರಾಜ್ಯ ಬಾಲ ಭವನ ಮತ್ತು ಶಿವಮೊಗ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಶಿವಮೊಗ್ಗ ಜಿಲ್ಲಾ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಶಾಲೆಯ 10ನೆಯ ತರಗತಿ ವಿದ್ಯಾರ್ಥಿ ಎನ್. ಸಿಂಚನ, ಮತ್ತು 3ನೆಯ ತರಗತಿ ಎಸ್.ಟಿ.ಸೂಕ್ತಿ ಪ್ರಥಮ ಸ್ಥಾನ, 10ನೇ ತರಗತಿಯ ಆರ್.ಧನ್ಯ ದ್ವಿತೀಯ ಸ್ಥಾನ, 2ನೇ ತರಗತಿ ಅಭಿರಾಮ್ ಆರ್. ಸಾಲಿಯಾನ ಹಾಗೂ ಜಿ. ಆದ್ಯ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ ಆರ್. ತನ್ಮಯಿ ಪ್ರಥಮ ಸ್ಥಾನ, ಎ.ಎಸ್. ಗೋವರ್ಧನ್ ಗೌಡ ದ್ವಿತೀಯ ಸ್ಥಾನ, ಡಿ.ಜಿ. ನಿಖಿಲ್ ರಾಜ್, ತೃತೀಯ ಸ್ಥಾನ, ಪಿ.ಪ್ರಜೀದ. ನಾಲ್ಕನೇ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ರಾಜ್ಯ ಮಟ್ಟದ ಓಲಂಪಿಯಾಡ್ ಕ್ವಿಜ್ಗೆ ಆಯ್ಕೆ
ಶಿವಮೊಗ್ಗ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಓಲಂಪಿಯಾಡ್ ಕ್ವಿಜ್’ಗೆ ಆಯ್ಕೆಯಾದ ಮೂರು ವಿದ್ಯಾರ್ಥಿಗಳಲ್ಲಿ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನದ ಇಬ್ಬರು ಆಯ್ಕೆಯಾಗಿದ್ದಾರೆ.
ಈ ಶಾಲೆಯ ವಿದ್ಯಾರ್ಥಿಯಾದ ಸ್ಕಂದ ಎ. ವರ್ಣೇಕರ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಅದೇ ರೀತಿ ದ್ವಿತೀಯ ಸ್ಥಾನವನ್ನು ಇದೇ ಶಾಲೆಯ ವಿದ್ಯಾರ್ಥಿನಿ ಅಲಿಷಾ ಕೆ. ವಿನಯ್ ಇವರು ಪಡೆದಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶ್ರೀರಾಮಕೃಷ್ಣ ವಿದ್ಯಾನಿಕೇತನ ಶಾಲೆ ಆಡಳಿತ ಮಂಡಳಿ ಮತ್ತು ಶಿಕ್ಷಕರ ವರ್ಗದ ಪರವಾಗಿ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.
Get In Touch With Us info@kalpa.news Whatsapp: 9481252093, 94487 22200
Discussion about this post