ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದ ಮೂರನೇ ವಾರ್ಷಿಕೋತ್ಸವ ಜು.29 ಮತ್ತು 30ರಂದು ನವದೆಹಲಿ ಮತ್ತು ದೇಶಾದ್ಯಂತ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯ ಶಿವಮೊಗ್ಗದ ಪ್ರಭಾರಿ ಪ್ರಾಂಶುಪಾಲ ಯು.ಪಿ. ಬಿನೋಯ್ ತಿಳಿಸಿದರು.
ಅವರು ಇಂದು ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ 2022ರ ಅನುಷ್ಠಾನದ ಉತ್ತಮ ಅಭ್ಯಾಸಗಳು ಮತ್ತು ಸಾಧನೆಗಳು, ಪ್ರದರ್ಶನಗಳು ಅಗತ್ಯ ಮತ್ತು ಪರಿಣಾಮಕಾರಿ ಅನುಷ್ಠಾನದ ಪ್ರಾಮುಖ್ಯತೆ ಇತ್ಯಾದಿಗಳನ್ನು ಪ್ರಸಾರ ಮಾಡಲು 20 ಅತ್ಯುತ್ತಮ ಸಾಧನೆಗಳನ್ನು ಹಲವಾರು ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಶಿಕ್ಷಣ ನೀತಿ 2020 ಮೂರನೇ ವಾರ್ಷಿಕೋತ್ಸವದೊಂದಿಗೆ 2ನೇ ಅಖಿಲ ಭಾರತೀಯ ಶಿಕ್ಷಾ ಸಂಗಮವನ್ನು ಜು.29ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾರ್ಯಕ್ರಮವನ್ನು ಶಿಕ್ಷಣ ಸಚಿವಾಲಯ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವಾಲಯ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಪ್ರಧಾನಿಗಳು ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ಕಲಿಕೆಯ ಅಡಿಪಾಯದಲ್ಲಿ ಗ್ರೇಡ್ 3ರ ಪ್ರಕಾರ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ, ಡ್ರಾಪ್-ಔಟ್ ದರವನ್ನು ಕಡಿತಗೊಳಿಸುವುದು, ಮತ್ತು ಎಲ್ಲಾ ಹಂತಗಳಲ್ಲಿ ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶ ಖಾತ್ರಿಪಡಿಸುವುದು, ಸಮಗ್ರ ಆನಂದದಾಯಕ ಕಲಿಕೆಯ ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರ, ಶಿಕ್ಷಕರು ಮತ್ತು ಅಂತರ್ಗತ ಶಿಕ್ಷಣದ ಬೋಧನೆಯ ಗುಣಮಟ್ಟ, ಸಮಾನ ಮತ್ತು ಅಂತರ್ಗತ ಶಿಕ್ಷಣ-ಎಲ್ಲರಿಗೂ ಕಲಿಕೆ ಹಾಗೂ ಶಾಲಾ ಸಂಕೀರ್ಣಗಳ ಮೂಲಕ ಸಮರ್ಥ ಸಂಪನ್ಮೂಲ ಹಾಗೂ ಪರಿಣಾಮಕಾರಿ ಆಡಳಿತದ ಉಪಕ್ರಮಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ ಎಂದರು.
ನೀತಿಯ ವಿವಿಧ ಉಪಕ್ರಮಗಳು
ಎನ್ಇಪಿ ಅಡಿ ಶಿಕ್ಷಣ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಲಾಗಿದ್ದು ಇದರಲ್ಲಿ ಮುಖ್ಯವಾಗಿ 1 ನೇ ತರಗತಿ ಪ್ರವೇಶಕ್ಕೆ ಮಗುವಿನ ವಯಸ್ಸು 6 ರಿಂದ 8 ಕ್ಕೆ ನಿಗದಿಗೊಳಿಸಲಾಗಿದೆ. ಇದು ಮೊದಲು 5 ವರ್ಷವಿತ್ತು. ಹಾಗೂ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಬಾಲವಾಟಿಕಾ ಪರಿಚಯಿಸಲಾಗಿದೆ.
ಬಾಲವಾಟಿಕಾವನ್ನು ಎಲ್ಲ ಶಾಲೆಗಳಲ್ಲಿ ಪ್ರಾರಂಭಿಸಲಾಗುವುದು. ಒಟ್ಟು 1253 ಕೇಂದ್ರೀಯ ವಿದ್ಯಾಲಯಗಳಿದ್ದು, ಈ ವರ್ಷ 500 ಶಾಲೆಗಳಲ್ಲಿ ಬಾಲವಾಟಿಕ ಆರಂಭವಾಗಿದೆ. ಬೆಂಗಳೂರು ವಲಯದ 20 ಶಾಲೆಗಳಲ್ಲಿ ಆರಂಭಿಸಲಾಗಿದೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಡಿ ಶಾಲಾ ಶಿಕ್ಷಣ ಹಂತಗಳ ವಿನ್ಯಾಸಗೊಳಿಸಲಾಗಿದೆ. 3-8 ವರ್ಷಗಳು ಫೌಂಡೇಷನಲ್, 6-8 ವರ್ಷ +ಗ್ರೇಡ್1 ಮತ್ತು 2, 8-11 ವರ್ಷ ಪೂರ್ವಸಿದ್ದತೆ(ಗ್ರೇಡ್ 3-5), 11-14 ವರ್ಷ ಮಧ್ಯಮ ಹಂತ(ಗ್ರೇಡ್ 6-8) ಮತ್ತು 14-18 ವರ್ಷಗಳು ದ್ವಿತೀಯ ಹಂತ(ಗ್ರೇಡ್ 9-12).
1 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಿಸ್ಕೂಲ್ ತಯಾರಿ ಕಾರ್ಯಕ್ರಮ, ಮಕ್ಕಳನ್ನು ಶಾಲೆಗೆ ತಯಾರಿಗೊಳಿಸುವುದು ಹಾಗೂ 3 ತಿಂಗಳ ಪ್ಲೇ ಮಾಲ್ಯಲ್ ವಿದ್ಯಾ ಪ್ರವೇಶ ಉಪಕ್ರಮದಲ್ಲಿ ಅಳವಡಿಸಲಾಗಿದೆ.
ಆಟಿಕೆ ಆಧಾರಿತ ಶಿಕ್ಷಣಶಾಸ್ತ್ರ ಉಪಕ್ರಮದಲ್ಲಿ ಆಟಿಕೆ ಮತ್ತು ಆಟಗಳ ಮೂಲಕ ಕಲಿಕೆ, ಕಲೆಯ ಏಕೀಕರಣ ಉಪಕ್ರಮದಡಿ ಕಲೆ ಮತ್ತು ಸಂಸ್ಕøತಿಯ ವಿವಿಧ ಅಂಶಗಳನ್ನು ಮತ್ತು ಪ್ರಕಾರಗಳನ್ನು ರೂಪಿಸುವುದು. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದಲ್ಲಿ ಮೂಲಭೂತ ಗಣಿತದ ಕಾರ್ಯಾಚರಣೆ ಹಾಗೂ ಅತಿ ಪ್ರಮುಖವಾಗಿ ಮಕ್ಕಳ ಕೌಶಲ್ಯಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ನಿಪುಣ್ ಭಾರತ್ ಮಿಷನ್ ಇನಿಷಿಯೇಟಿವ್ ಅಡಿಯಲ್ಲಿ ವಿದ್ಯಾರ್ಥಿಗಳ ಪ್ರಗತಿಯನ್ನು ಟ್ರ್ಯಾಕ್ ಮಾಡುವುದು, ಎಫ್ಎಲ್ಎನ್ ಅನುμÁ್ಟ, ಪಿಎಂ ಇ-ವಿದ್ಯಾ & ಶಿಕ್ಷಾ ಉಪಕ್ರಮದಡಿ ಡಿಜಿಟಲ್/ ಆನ್ಲೈನ್ ಆನ್ ಏರ್ ಶಿಕ್ಷಣಕ್ಕೆ ಬಹುಮಾರ್ಗದ ಪ್ರವೇಶಕ್ಕಾಗಿ ಒಂದು ಕಾರ್ಯಕ್ರಮ, ವಿದ್ಯಾಂಜಲಿ ಉಪಕ್ರಮದಡಿ ದೇಶಾದ್ಯಂತ ಶಾಲೆಗಳಲ್ಲಿ ಸಮುದಾಯ ಮತ್ತು ಖಾಸಗಿ ವಲಯದ ಒಳಗೊಳ್ಳುವಿಕೆಯ ಮೂಲಕ ಶಾಲೆಗಳನ್ನು ಬಲಪಡಿಸುವ ಗುರಿಯನ್ನು ವಿದ್ಯಾಂಜಲಿ ಹೊಂದಿದೆ ಎಂದರು.
ಪಠ್ಯಕ್ರಮದಲ್ಲಿ ಕೌಶಲ್ಯ ವಿಷಯದ ಏಕೀಕರಣ, ಸ್ಕಿಲ್ ಹಬ್, ಪಾಲುದಾರರಾಗಿ ಪೆÇೀಷಕರನ್ನು ಅಳವಡಿಸುವುದು, ಸಮಾನ ಮತ್ತು ಅಂತರ್ಗತ ಶಿಕ್ಷಣ, ಶಿಕ್ಷಣ ಪಲ್ಲಟ ಮತ್ತು ಶಿಕ್ಷಕರಿಗೆ ತರಬೇತಿ, ಶಿಕ್ಷಕರ ತರಬೇತಿ: ನಿಷ್ಟ 2.0 ಹಾಗೂ ಸಫಲ್ ಒಟ್ಟು 17 ಉಪಕ್ರಮಗಳಡಿ ಈ ನೀತಿಯಲ್ಲಿ ಪಠ್ಯಕ್ರಮ ಮತ್ತು ಕೌಶಲ್ಯಾಭಿವೃದ್ಧಿಯನ್ನು ಅಳವಡಿಸಿಕೊಳ್ಳಲಾಗಿದೆ.
ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಎಲ್ಲ ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುವುದು. ಸದ್ಯಕ್ಕೆ 9 ಉಪಕ್ರಮಗಳು ಅನುಷ್ಟಾನದಲ್ಲಿವೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಗಾಜನೂರು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಜಾನ್ಸನ್ ಪಿ ಜೇಮ್ಸ್, ಹಿರಿಯ ಶಿಕ್ಷಕಿ ಲಿಶಾ ವರ್ಗೀಸ್ ಹಾಜರಿದ್ದರು. ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post