ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕದಲ್ಲಿ ನಡೆಯುವ ಗಣೇಶ ಗಲಾಟೆಗಳಲ್ಲಿ ಕೇರಳ ರಾಜ್ಯದ ರಾಷ್ಟ್ರ ದ್ರೋಹಿ ಮುಸ್ಲಿಂರ ಕೈವಾಡವಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಗಂಭೀರ ಆರೋಪ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ನಾಗಮಂಗಲ ಸೇರಿದಂತೆ ಹಲವು ಕಡೆ ರಾಷ್ಟ್ರದ್ರೋಹಿ ಮುಸ್ಲಿಂರಿಂದ ಗಲಾಟೆಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ನಾಗಮಂಗಲದ ಘಟನೆಯೇ ಉದಾಹರಣೆಯಾಗಿದೆ. ಪಿಎಫ್ಐ, ಕೆಎಫ್ಡಿಯಂತಹ ನಿಷೇದಿತ ರಾಷ್ಟ್ರದ್ರೋಹಿ ಸಂಸ್ಥೆಗಳು ಕೈಜೋಡಿಸುತ್ತಿವೆ. ಮುಖ್ಯವಾಗಿ ಕೇರಳ ಮೂಲದ ಮುಸ್ಲಿಂರು ರಾಜ್ಯದಲ್ಲಿ ಬೀಡುಬಿಟ್ಟು ಇಂತಹ ಘಟನೆಗಳಿಗೆ ಕಾರಣರಾಗಿದ್ದಾರೆ ಎಂದರು.

Also read: ಹಾಲಿನ ದರ ಹೆಚ್ಚಳ | ರೈತರ ಹೆಸರಿನಲ್ಲಿ ಗ್ರಾಹಕರಿಂದ ಸುಲಿಗೆ | ಎಮ್ಎಲ್ಸಿ ಡಿ.ಎಸ್. ಅರುಣ್ ಆರೋಪ
ನಾಳೆ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನ ಮೆರವಣ ಗೆ ಇದೆ. ಪೊಲೀಸರು ಈ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಶಿವಮೊಗ್ಗದಲ್ಲಿ ಮುಸ್ಲಿಂ ಮತ್ತು ಹಿಂದೂಗಳು ಸಹಭಾಳ್ವೆಯಿಂದಲೇ ಇದ್ದಾರೆ. ಮುಸ್ಲಿಂ ಯುವಕರೇ ಗಣೇಶ ಸ್ಥಾಪನೆಯ ಸ್ಥಳಗಳಿಗೆ ಹೋಗಿ ಮಾಲೆ ಹಾಕಿ ಬರುತ್ತಿದ್ದಾರೆ. ಇದು ತೋರಿಕೆಗೆ ಆಗಬಾರದು. ಶಿವಮೊಗ್ಗದಲ್ಲಿಯೂ ಕೇರಳದಿಂದ ಬಂದ ಮುಸ್ಲಿಂರು ಇರಬಹುದು ಆದ್ದರಿಂದ ಪೊಲೀಸ್ ಇಲಾಖೆ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.

ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಮತ್ತು ಅವುಗಳನ್ನು ಒಂದೇ ಸಮನೆ ಭಿತ್ತರಿಸುತ್ತಿರುವ ಟಿವಿ ಚಾನಲ್ಗಳನ್ನು ಕಂಡರೆ ಕೈಮುಗಿಯಬೇಕು ಎನಿಸುತ್ತದೆ. ಕೆಟ್ಟದ್ದನ್ನೇ ಮತ್ತೆ ಮತ್ತೇ ತೋರಿಸುತ್ತಿದ್ದಾರೆ. ಈ ಟಿವಿಯವರಿಗೆ ಬೇರೆ ಒಳ್ಳೆಯ ವಿಚಾರಗಳೇ ಸಿಗುವುದಿಲ್ಲವೇ ಎಂದು ಟಿವಿ ಚಾನಲ್ಗಳ ಬಗ್ಗೆ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಬಾಲು, ಜಾಧವ್, ಶೇಷಾದ್ರಿ, ಮೋಹನ್ರಾಜ್, ಶಂಕರನಾಯ್ಕ, ಟಾಕ್ರಾ ನಾಯ್ಕ, ಜಗದೀಶ್, ಶ್ರೀಕಾಂತ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post