ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿರುಗಾಳಿ ಸಹಿತ ಮಳೆಗೆ ಶಿವಮೊಗ್ಗ – ಭದ್ರಾವತಿ ಬಿದಿರೆ ಸಮೀಪ ರೈಲ್ವೆ ಹಳಿಗೆ ಮರ ಉರುಳಿ ಬಿದ್ದು ಗಂಟೆಗಟ್ಟಲೇ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಶಿವಮೊಗ್ಗ – ಭದ್ರಾವತಿ ನಡುವಿನ ರೈಲ್ವೆ ಕಿಲೋ ಮೀಟರ್ 57ರಲ್ಲಿ ಮರ ಉರುಳಿ ಬಿದ್ದು ರೈಲ್ವೆ ವಿದ್ಯುತ್ ಲೈನ್ ತುಂಡಾಗಿತ್ತು. ಇದರಿಂದ ಶಿವಮೊಗ್ಗದಿಂದ ಹೊರಟಿದ್ದ ಶಿವಮೊಗ್ಗ – ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ನಿಂತಲ್ಲೇ ನಿಂತಿತ್ತು. ನಂತರ ಆ ರೈಲನ್ನು ಶಿವಮೊಗ್ಗಕ್ಕೆ ವಾಪಾಸ್ ಕರೆತರಲಾಯಿತು.

Also read: Amazon India to deploy 1,000 Eicher electric trucks for Amazon Now operations
ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ ರೈಲು ರಾತ್ರಿ 9 ಗಂಟೆಗೆ ತರೀಕೆರೆಗೆ ಬಂದಿದ್ದ ರೈಲು ರಾತ್ರಿ 10:17ರವರೆಗೆ ತರೀಕರೆಯಲ್ಲಿಯೇ ಇತ್ತು. ಮೈಸೂರು – ಶಿವಮೊಗ್ಗ ಕುವೆಂಪು ಎಕ್ಸ್ಪ್ರೆಸ್ ರೈಲು ರಾತ್ರಿ 8:49ರಿಂದ ರಾತ್ರಿ 10:13ರವರೆಗೆ ಮಸರಹಳ್ಳಿಯಲ್ಲಿ ನಿಲುಗಡೆ ಮಾಡಲಾಗಿತ್ತು. ಬೆಂಗಳೂರು – ಶಿವಮೊಗ್ಗ – ತಾಳಗುಪ್ಪ ಇಂಟರ್ಸಿಟಿ : ಸಂಜೆ 6:41ಕ್ಕೆ ತರೀಕೆರೆಯಿಂದ ಹೊರಟಿದ್ದ ರೈಲನ್ನು ಮಾರ್ಗ ಮಧ್ಯೆ ನಿಲ್ಲಿಸಲಾಗಿತ್ತು. ರಾತ್ರಿ 8:27ಕ್ಕೆ ಭದ್ರಾವತಿಗೆ ಆಗಮಿಸಿದ್ದ ರೈಲು ರಾತ್ರಿ 10:09ಕ್ಕೆ ಅಲ್ಲಿಂದ ಹೊರಟಿತ್ತು. ರಾತ್ರಿ 10:25ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಿದೆ. ಮರ ತೆರವು ಮಾಡಿ ವಿದ್ಯುತ್ ಲೈನ್ ಸರಿ ಮಾಡಲಾಗಿದ್ದು ರೈಲುಗಳು ಸಂಚಾರ ಪುನಾರಂಭಗೊಂಡಿತು. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೇ ರೈಲಿನಲ್ಲಿ ಕುಳಿತು ಹೈರಾಣಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















