ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮದ ಪರಿಸರಕ್ಕೆ ಮಾರಕವಾಗುವ ಜಲ್ಲಿ ಕ್ರಷರ್ ಹಾಗೂ ಕೃಷಿ ನಡೆಸದೆ ಕೃಷಿಯೇತರ ಚಟುವಟಿಕೆ ಮಂಜೂರಾದ ಭೂಮಿಯನ್ನು ಕ್ರಷರ್ ಗೆ ಲೀಸ್ ಕೊಡುತ್ತಿರುವ ಭೂಮಿಯನ್ನು ವಜಾ ಮಾಡುವ ಬಗ್ಗೆ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಹೋಬಳಿ ತೋರಣಗೊಂಡಕೊಪ್ಪ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿದರು.
ತೋರಣಗೊಂಡನಕೊಪ್ಪ ಗ್ರಾಮದ ಸನಂ 8ರಲ್ಲಿ 4:38 ಎಕರೆ ಜಾಗ ಬೇರೆ ಗ್ರಾಮದವರೊಬ್ಬರಿಗೆ 2019ರಲ್ಲಿ ಸರ್ಕಾರದಿಂದ ಮಂಜೂರಾಗಿದ್ದು, ಅಸಲಿ ಆ ವ್ಯಕ್ತಿ ತಮಗೆ ಮಂಜೂರಾದ ಜಾಗೆಯಲ್ಲಿ ಇದುವರೆವಿಗೂ ಯಾವುದೇ ಕೃಷಿ ಚಟುವಟಿಕೆ ನಡೆಸಿಲ್ಲ. ಸಾಲದೆಂಬಂತೆ ಈಗ ಈ ಜಾಗೆಯನ್ನು ಜಲ್ಲಿಕ್ರಷರ್ ಗೆ ಲೀಸ್ ಕೊಡಲು ಹೊರಟಿದ್ದು ಇಲ್ಲಿ ಕ್ರಷರ್ ಆದರೆ ಸನಿಹದಲ್ಲೆ ಇರುವ ವಾಸ ಮನೆಗಳು ಮತ್ತು ಅಕ್ಕಪಕ್ಕದ ಗ್ರಾಮಕ್ಕೆ, ಕೃಷಿ ಚಟುವಟಿಕೆಗಳಿಗೆ, ಕುಡಿಯುವ ನೀರು, ಪಕ್ಕದಲ್ಲೇ ಇರುವ ಅರಣ್ಯ, ಅರಣ್ಯ ಜೀವಿಗಳಿಗೆ ಮಾರಕ ಪರಿಣಾಮ ಬೀರಲಿದೆ ಎಂದು ಗ್ರಾಮ ಪ್ರಮುಖ ದಿನೇಶ್ ಭೂಮಿ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.

ತೋರಣಗೊಂಡನಕೊಪ್ಪ ಗ್ರಾಮಸ್ಥರಾದ ದಿನೇಶ್, ರಾಕೇಶ್, ಜಗದೀಶ್, ಸಲೀಂ, ಮಂಜುಶೇಟ್, ದೇವರಾಜಗೌಡ, ಲಕ್ಷ್ಮಣ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post