ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೂತನ ಗ್ರಂಥಾಲಯ ಕಟ್ಟಡದ ಉದ್ಘಾಟನಾ ಸಮಾರಂಭ
ಸಹ್ಯಾದ್ರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡದ ಉದ್ಘಾಟನಾ ಸಮಾರಂಭ ಜನವರಿ 5 ರ ಬೆಳಿಗ್ಗೆ 9:30 ಕ್ಕೆ ಆಯೋಜಿಸಲಾಗಿದೆ.
ಸಹ್ಯಾದ್ರಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯದ ಕಟ್ಟಡದ ಉದ್ಘಾಟನೆಯನ್ನು ಸಂಸದ ಬಿ.ವೈ.ರಾಘವೇಂದ್ರ, ನಾಮಪಲಕ ಅನಾವರಣವನ್ನು ಶಾಸಕ ಚನ್ನಬಸಪ್ಪ ನೆರವೇರಿಸಲಿದ್ದು, ಸಂಘದ ಅಧ್ಯಕ್ಷ ಶಿವನಾಗಪ್ಪ ಎಸ್. ಮಂಡಕ್ಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಎಂಎಲ್’ಸಿ ಡಿ.ಎಸ್. ಅರುಣ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಕಾರ್ಯದರ್ಶಿ ಟಿ. ಮಂಜಪ್ಪ ಮನವಿ ಮಾಡಿದ್ದಾರೆ.

ಶಿವಮೊಗ್ಗ: ಸಿ. ಅಶ್ವತ್ ರವರು ಸ್ವರ ಸಂಯೋಜಿಸಿ-ಹಾಡಿರುವ ಗೀತೆಗಳ ಗಾಯನ ಸಿ. ಅಶ್ವತ್ ಗಾನಸಿರಿ ಕಾರ್ಯಕ್ರಮ ರಾಗ ರಂಜನಿ ಟ್ರಸ್ಟ್ ವತಿಯಿಂದ ಜನವರಿ 05 ರಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಸದರಿ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ ಎಂದು ರಾಂಗರಂಜಿನಿ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ್ ದೀಕ್ಷಿತ್ ತಿಳಿಸಿದ್ದಾರೆ.
ಭೂಮಣ್ಣಿಬುಟ್ಟಿ ಸ್ಪರ್ಧೆ
ಸಾಗರ: ಇಲ್ಲಿನ ಸಹೃದಯ ಬಳಗ, ತಾಲ್ಲೂಕು ಇತಿಹಾಸ ವೇದಿಕೆ ಆಶ್ರಯದಲ್ಲಿ 24ನೇ ವರ್ಷದ ಸಾಗರೋತ್ಸವ ಅಂಗವಾಗಿ ಜ. 5ರಂದು ಬೆಳಿಗ್ಗೆ 9-30ಕ್ಕೆ ಗಾಂಧಿ ಮೈದಾನದ ನಗರಸಭೆ ಆವರಣದಲ್ಲಿ ಮಲೆನಾಡಿನ ಚಿತ್ತಾರದ ಸಾಕ್ಷಿಪ್ರಜ್ಞೆ ಶೀರ್ಷಿಕೆಯಡಿ ಭೂಮಣ್ಣಿಬುಟ್ಟಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಸಿರಿವಂತೆ ಉದ್ಘಾಟಿಸಲಿದ್ದಾರೆ. ಲೋಕೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯಲ್ಲಿ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಎನ್. ಲಲಿತಮ್ಮ, ಪ್ರಮುಖರಾದ ಉಮೇಶ್ ಹಿರೇನೆಲ್ಲೂರು, ರಮೇಶ್ ಈ. ಕೆಳದಿ, ಅಶೋಕ್ ಬೇಳೂರು, ದಿನೇಶ್ ಬರದವಳ್ಳಿ, ಎಲ್. ಚಂದ್ರಪ್ಪ, ವೆಂಕಟೇಶ್ ಮೆಳವರಿಗೆ, ರಾಮಚಂದ್ರ ಸಾಗರ, ಚೌಡಮ್ಮ ಪಾಲ್ಗೊಳ್ಳಲಿದ್ದಾರೆ.
ಭೂಮಣ್ಣಿ ಬುಟ್ಟಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ. 2000 (ಪ್ರಥಮ), ರೂ. 1500 (ದ್ವಿತೀಯ), ರೂ. 750 (ತೃತೀಯ) ಬಹುಮಾನ ನೀಡಲಾಗುತ್ತದೆ. ನೈಸರ್ಗಿಕ ಬಣ್ಣದಿಂದ ಮನೆಯಲ್ಲಿಯೆ ರಚಿಸಿದ ದೊಡ್ಡ ಭೂಮಣ್ಣಿ ಒಂದು ಬುಟ್ಟಿಯನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಸ್ಥಳದಲ್ಲಿಯೆ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.

ಶಿವಮೊಗ್ಗ : ಮಾನಸ ವಿದ್ಯಾಲಯದ 18 ನೇ ವಾರ್ಷಿಕೋತ್ಸವ ಮತ್ತ ಚಿಣ್ಣರ ಕಲಾ ಮೇಳಾ ಜನವರಿ 6 ರ ಮಧ್ಯಾಹ್ನ 1:30 ಕ್ಕೆ ನಗರದ ಕುವೆಂಪುನಗರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸುಬ್ಬಯ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾಗಿ ಬೆಂಗಳೂರಿನ ಭಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎನ್.ಶ್ರೀನಿವಾಸ್ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮತ್ತು ಬೆಂಗಳೂರಿನ ಇಎಸ್’ಐ ಆಸ್ಪತ್ರೆಯ ಅರವಳಿಕೆ ತಜ್ಞರಾದ ಡಾ.ಜಯಪ್ರಕಾಶ್, ಕಸ್ತೂರ ಬಾ ಬಾಲಕಿಯರ ಕಾಲೇಜು ನಿವೃತ್ತ ಉಪನ್ಯಾಸಕರಾದ ಜಿ.ಎಸ್. ನಟೇಶ್ ಆಗಮಿಸಲಿದ್ದಾರೆ. ಸುಮನ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಎಲ್ಲಾ ಪದಾಧಿಕಾರಿಗಳ ಹಾಗೂ ಸದಸ್ಯರುಗಳು, ಶಾಲೆಯ ಮುಖ್ಯಶಿಕ್ಷಕರುಗಳು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು, ವಿದ್ಯಾಲಯದ ಸಿಬ್ಬಂದಿವರ್ಗದವರ ಉಪಸ್ಥಿತಿ ಇರಲಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post