ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎರಡು ಕುಟುಂಬಗಳಲ್ಲಿ ಹೊಂದಾಣಿಕೆಯ ಕೊರತೆಯಿಂದಾಗಿ ಇಂದು ವಿಚ್ಚೇದನಗಳ #Divorce ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಲೈಂಗಿಕ ದೌರ್ಜನ್ಯದ ದೂರು ಸಮಿತಿಯ ಸದಸ್ಯರು ಹಾಗೂ ನ್ಯಾಯವಾದಿಗಳು ಆದ ಬಿ.ಎಸ್. ರೂಪಾರಾವ್ ತಿಳಿಸಿದರು.
ರವೀಂದ್ರ ನಗರದ ಸರಸ್ವತಿ ಮಂದಿರದಲ್ಲಿ ಪ್ರೇರಣ ಮಹಿಳಾ ಸಂಘ ಹಾಗೂ ಮಥುರಾ ಪ್ಯಾರಡೈಸ್ ರಜತೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಪರವಾಗಿ ಕಾನೂನು ಸಂವಾದದಲ್ಲಿ ಅವರು ಮಾತನಾಡಿದರು.
ಮದುವೆಯಾದ ಹೊಸದರಲ್ಲಿ ಒಬ್ಬರನ್ನೊಬ್ಬರು ಹೊಂದಿಕೊಂಡು ಹೋಗುವುದು ಕಷ್ಟವಾದರೆ ಅಂತಹವರು ದುಡುಕದೇ ಇದ್ದರೆ ನಿಧಾನವಾಗಿ ಹೊಂದಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದರು.
Also read: ರಾತ್ರಿ ಪುಂಡರ ಹಾವಳಿ, ಅನಧಿಕೃತ ಡಾಬಾ, ಗೂಡಂಗಡಿ ಲೂಟಿ | ಇದು ಶಿವಮೊಗ್ಗದ ಈ ಪ್ರದೇಶದ ಸಂಕಷ್ಟಗಳು
ದಾಂಪತ್ಯ ಜೀವನದ ಮೌಲ್ಯವನ್ನು ಅರಿತು ಬಾಳಿದಾಗ ಅಂತಹ ಕುಟುಂಬದಲ್ಲಿ ಯಾವ ಕಲಹವು ಇರುವುದಿಲ್ಲ. ಹೆಣ್ಣು ಮಕ್ಕಳು ಯಾವ ಯಾವ ಸಮಸ್ಯೆಗಳಿಗೆ ಕಾನೂನಿಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು. ಹೆಣ್ಣು ಮಕ್ಕಳಿಗೆ ಇರುವ ಕಾನೂನಿನ ಸೌಲಭ್ಯವನ್ನು ತಿಳಿಸಿದರು.
ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶಾಂತ ಶೆಟ್ಟಿ ಮಾತನಾಡಿ, ಪ್ರೇರಣ ಸಂಘದವರು ಹೆಣ್ಣು ಮಕ್ಕಳ ಬಗ್ಗೆ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವೆಂದರು. ಚಿಕ್ಕ ಚಿಕ್ಕ ವಿಷಯಗಳಿಗೆ ದಾಂಪತ್ಯ ಜೀವನದಿಂದ ಹೊರ ಬರುವ ಪ್ರವೃತ್ತಿ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದರಿಂದ ಸಮಾಜದ ಮೇಳೆ ದುಷ್ಪರಿಣಾಮವಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಎಸ್.ಎಚ್. ಸುಶೀಲಮ್ಮ ಎಸ್ ಹೆಚ್ ವಹಿಸಿದ್ದರು. ಸುಗುಣ ತ್ಯಾಗರಾಜ್ ಪ್ರಾರ್ಥಿಸಿ, ಜಯಶ್ರೀ ಶೆಣೈ ಸ್ವಾಗತಿಸಿದರು. ಮಾಲ ಗಿರಿಧರ್ ವಂದಿಸಿ, ಪುಷ್ಪಲತಾ ಮೂರ್ತಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post