ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬೇಕಾಗುವ ಸಹಾಯವಾಣಿ ಹಾಗೂ ಇಆರ್ಎಸ್ಎಸ್ ಸೇವೆಯ ಬಗ್ಗೆ ಪಿಎಸ್ಐಟಿಎಂ ನ ಮಹಿಳಾ ಸಬಲೀಕರಣ ಘಟಕ ಹಾಗೂ ಎಐಎಂಎಲ್ ವಿಭಾಗದ ಜಂಟಿ ಸಹಬಾಗಿತ್ವದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಕಾರ್ಯಕ್ರಮದಲ್ಲಿ ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟರ್ ಜಯಶ್ರೀ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಿಳಿಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ. ಚೈತನ್ಯಕುಮಾರ್ ಮಾತನಾಡಿ, ಮಹಿಳೆಯರು ಆರ್ಥಿಕ ಸಭಲತೆ ಹೊಂದುವುದು ಅತ್ಯವಶ್ಯಕ ಹಾಗೂ ಇದರಿಂದ ಅಗಾಧವಾದ ಆತ್ಮ ವಿಶ್ವಾಸವನ್ನು ಸೃಷ್ಟಿಸಲು ಸಹಾಯಕವಾಗುತ್ತದೆ. ಅಲ್ಲದೆ ಮಹಿಳೆಯರು ಸ್ವಂತ ಉದ್ಯಮಗಳ ಮೂಲಕ, ಇತರರಿಗೆ ಉದ್ಯೋಗವಕಾಶಗಳನ್ನು ಸೃಷ್ಟಿಸುವಲ್ಲಿ ಸಫಲವಾಗುವಂತೆ ಸಲಹೆ ನೀಡಿದರು.
ಕಾಲೇಜಿನ ಆಡಳೀತಾಧಿಕಾರಿ ಡಾ. ನಾಗರಾಜ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಕ್ಷ್ಯಮ್ಯ ಅಪರಾಧಗಳನ್ನು ತಡೆಯಲು, ಮಹಿಳೆಯರು ಕಾನೂನಿನ ಚೌಕಟ್ಟಿನಲ್ಲಿ ತಮಗಾಗಿಯೇ ಸೃಷ್ಟಿಸಿರುವ ಕಾನೂನುಗಳ ಪ್ರಾಯೋಗಿಕ ಪ್ರಸ್ತುತತೆಯನ್ನು ಅರ್ಥೈಸಿಕೊಳ್ಳಬೇಕೆಂದು ಕರೆಕೊಟ್ಟರು.
ಮತ್ತೊಬ್ಬ ಅತಿಥಿ ವೆಲ್ನೆಸ್ ಆಂತ್ರಪ್ರಿನುರ್ ಹಾಗೂ ಲೈಫ್ ಸ್ಟೈಲ್ ಕೋಚ್ ಆದ ವಿನ್ಯಾಸ ಹಿಪ್ಪಲಗೌಡರವರು ಮಾತನಾಡಿ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ಆಧ್ಯಾತ್ಮಿಕ ಶಿಕ್ಷಣ ಶಕ್ತಿಯ ಅವಶ್ಯಕತೆ ಬಹಳ ಮುಖ್ಯ. ಎ.ಐ.ಎಂ.ಎಲ್ ವಿಭಾಗದಿಂದ ಏರ್ಪಡಿಸಿದ ಹಿರಿಯನಾಗರಿಕರ ಸಬಲೀಕರಣದ ಸಲುವಾಗಿ ನಡೆಸಿದ ಆಧುನಿಕ ಮೊಬೈಲ್ ಬಳಕೆಯ ಅರಿವು ಮೂಡಿಸಿರುವ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು.
ಮಹಿಳೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನೇಕ ಆಟೋಟಗಳನ್ನು ಎ.ಐ.ಎಂ.ಎಲ್ ವಿದ್ಯಾರ್ಥಿಗಳು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿಯರು ಹಾಗೂ ವಿದ್ಯಾರ್ಥಿವೃಂದದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಹಿಳಾ ಸಬಲೀಕರಣ ಅಧ್ಯಕ್ಷರಾದ ರಮ್ಯ ಹಾಗೂ ಎಐಎಂಎಲ್ ನ ಮುಖ್ಯಸ್ಥರಾದ ಡಾ. ಲೈಕ್ವಿನ್ಥಾಮಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಕ್ಷಾ ಕಾಮತ್ ರವರು ನಿರೂಪಿಸಿ, ಮಾನಸ ಬಿ ಹಾಗೂ ಜ್ಯೋತಿ ಜಿ,ಹೆಚ್ ರವರು ಮುಖ್ಯ ಅತಿಥಿಗಳನ್ನು ಪರಿಚಿಯಿಸಿದರು. ಎ.ಐ.ಎಂ.ಎಲ್ ವಿದ್ಯಾರ್ಥಿಗಳಾದ ಪ್ರಭಂಜನ್ ಹಾಗೂ ಗಗನ್ದೀಪ್ ಫ್ರಾರ್ಥನೆ ಮಾಡಿದರು. ಸಹಪ್ರಾದ್ಯಾಪಕಿಯಾದ ಯಜ್ಞೋದ್ಭವಿ ಹೆಚ್.ಎಂ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post