ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯುವಾ ಬ್ರಿಗೇಡ್ ತಂಡ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ಇಂತಹುದ್ದೇ ಸೇವಾಕಾರ್ಯವನ್ನು ಮಾಡಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಹೊಳೆಹೊನ್ನೂರು ರಸ್ತೆಯಲ್ಲಿರುವ ಹೊಸಮನೆ ತಾಂಡಾದಲ್ಲಿರುವ ಬಸ್ ಸ್ಟಾಂಡ್ ಸಂಪೂರ್ಣವಾಗಿ ಗಿಡಗಂಟೆ ಬೆಳೆದುಕೊಂಡು, ಪಾಳುಬಿದ್ದು, ಜನ ಬಳಕೆಗೆ ಬಾರದಂತಿತ್ತು. ಹೀಗಾಗಿ, ಇದನ್ನು ಆಯ್ಕೆ ಮಾಡಿಕೊಂಡ ಯುವಾ ಬ್ರಿಗೇಡ್ ತಂಡ ಇಡಿಯ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾರೆ.
ಸೊರಬ ಗ್ರಂಥಾಲಯ ಆವರಣ ಸ್ವಚ್ಛತೆ
ಇನ್ನು, ಯುವಾ ಬ್ರಿಗೇಡ್ ಸೊರಬ ಘಟಕದ ಸದಸ್ಯರು ಇಲ್ಲಿನ ಗ್ರಂಥಾಲಯ ಅವರಣವನ್ನು ಸ್ವಚ್ಛಗೊಳಿಸುವ ಮೂಲಕ ಯುವ ಸಮೂಹ ಹಾಗೂ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಗ್ರಂಥಾಲಯವೆಂದರೆ ಜ್ಞಾನದ ಭಂಡಾರ ನಮಗೆ ಸರಿದಾರಿಯನ್ನು ತೋರಿಸುವ ಮಾರ್ಗದರ್ಶಕ. ಇಂತಹ ದೇಗುಲದ ಆವರಣ ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ. ಆದರೆ ಸೊರಬ ಪಟ್ಟಣದ ಮಧ್ಯದಲ್ಲಿರುವ ಸಾರ್ವಜನಿಕ ಗ್ರಂಥಾಲದ ಹಿಂಭಾಗದಲ್ಲಿ ಗ್ರಂಥಾಲಯಕ್ಕೆ ಸೇರಿದ ಜಾಗದಲ್ಲಿ ಅನೇಕ ವರ್ಷಗಳಿಂದ ಕಸಕಡ್ಡಿಗಳನ್ನು ಬಿಸಾಡುತ್ತಾ, ಹಲವು ವರ್ಷಗಳಿಂದ ಸ್ವಚ್ಛತೆ ಕಾಣದೆ ಪೊದೆಗಳು ಬೆಳೆದು ಶುದ್ಧ ವಾತಾವರಣ ಸಿಗದ ಜಾಗವನ್ನು ಇಂದು ಯುವಾ ಬ್ರಿಗೇಡ್ ಸದಸ್ಯರು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿದರು.
ಇನ್ನಾದರೂ ಇಂತವುಗಳನ್ನು ಸ್ವಚ್ಛವಾಗಿಡುವುದು ನಮ್ಮ ಆದ್ಯ ಕರ್ತವ್ಯವಾದ್ದರಿಂದ ಸಾರ್ವಜನಿಕರು ಇಂತಹ ಜಾಗದಲ್ಲಿ ಕಸಗಳನ್ನು ಬಿಸಾಡದೇ ಸ್ವಚ್ಛತೆ ಕಾಪಾಡಬೇಕೆಂದು ಮನವಿ ಮಾಡಿದರು.
ಯುವಾ ಬ್ರಿಗೇಡ್ ಸದಸ್ಯರಾದ ಮಹೇಶ ಸಿ. ಖಾರ್ವಿ, ರಾಘವೇಂದ್ರ ಎಸ್. ಕೃಷ್ಣ, ಬಸವರಾಜ ಪಾಟೀಲ್, ಗ್ರಂಥಾಲಯದ ಪಾಲಕರಾದ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post