ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಕ್ರಮ ಮರಳು ದಂಧೆ ನಡೆಸುವವರ ವಿರುದ್ದ, ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಹಾಗೂ ತಹಶೀಲ್ದಾರ್ ರಾಜೀವ್ ನೇತೃತ್ವದ ತಂಡ ತಾಲೂಕಿನ ಹಲವೆಡೆ ನಿರಂತರ ದಾಳಿ ನಡೆಸುತ್ತಿದೆ.
ನಗರ ಹಾಗೂ ಗ್ರಾಮಾಂತರ ಭಾಗಗಳು ಸೇರಿದಂತೆ ಹಲವು ಕಡೆ ನಿರಂತರವಾಗಿ ದಾಳಿ ನಡೆಸಿ ಅಕ್ರಮ ಮರಳು ದಂಧೆಕೋರರಿಂದ ಮರಳು ವಶಪಡಿಸಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿ ಹಲವು ಪ್ರಕರಣ ದಾಖಲಿಸಲಾಗಿದೆ.
ಯಾವುದೇ ಭಯವಿಲ್ಲದೇ ಅಕ್ರಮ ಮರಳುದಂಧೆಕೋರರು ಮತ್ತೆ ಮತ್ತೆ ತುಂಗಾಭದ್ರಾನದಿಯಲ್ಲಿ ಮರಳು ತೆಗೆದು ದುಬಾರಿ ಬೆಲೆಗೆ ಮಾರಾಟ ಮಾಡುವುದನ್ನು ನಿಲ್ಲಿಸಿಲ್ಲ ಎಂಬ ಸತ್ಯ ಸುದ್ದಿ ಹುಡುಕಿ ಇಂದು ಬೆಳಗ್ಗೆ ಹಾಡೋನಹಳ್ಳಿ ಮತ್ತು ಮಂಗೋಟೆ ಗ್ರಾಮದಲ್ಲಿ ಯಾವುದೇ ಭಯವಿಲ್ಲದೇ ನಡೆಸುತ್ತಿದ್ದ ಮರಳುಗಾರಿಕೆ ಮೇಲೆ ಎಸಿ ಸತ್ಯನಾರಾಯಣ ತಹಶೀಲ್ದಾರ್ ರಾಜೀವ್. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೇರಿದಂತೆ ಪೋಲಿಸ್ ಇಲಾಖೆ ಖಡಕ್ ದಾಳಿ ನಡೆಸಿ ಹಲವು ವಾಹನಗಳನ್ನು ವಶಪಡಿಸಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಮರಳು ದಂಧೆಕೋರರಿಗೆ ಸ್ಥಳದಲ್ಲೆ ಬರೋಬ್ಬರಿ ಮೂರು ಲಕ್ಷದ ಅರವತ್ತು ಸಾವಿರ ದಂಡ ವಿಧಿಸಿದ ಘಟನೆ ನಡೆದಿದ್ದು, ಇನ್ನೂ ಮಾಹಿತಿ ಬರಬೇಕಿದೆ. ಈ ವೇಳೆಯಲ್ಲೆ ಕೆಲವು ವಾಹನಗಳು ತಪ್ಪಿಸಿಕೊಂಡಿವೆ ಎನ್ಲಲಾಗಿದ್ದು ಅವುಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post