ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ನೂತನ ಅದ್ಯಕ್ಷರನ್ನಾಗಿ ಶಿವಮೊಗ್ಗ ಜಿಲ್ಲಾಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಜಿಲ್ಲಾ ಭೋವಿ ಸಮಾಜದ ಮುಖಂಡ ಎಸ್. ರವಿಕುಮಾರ್ ಅವರನ್ನು ಸರ್ಕಾರ ನೇಮಕಮಾಡಿದೆ.
ಸರ್ಕಾರದ ಅದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ದೊಡ್ಡ ಗೋಪುರ 20ನೇ ಮಹಡಿಯಲ್ಲಿ ರುವ ನಿಗಮದ ಕೇಂದ್ರ ಕಛೇರಿ ಯಲ್ಲಿ ಅವರು ಇಂದು ( ಮಾ.15) ಸಂಜೆ 5 ಗಂಟೆಗೆ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
Also read: ನಾಳೆ ಕಲಬುರಗಿಗೆ ಪ್ರಧಾನಿ | ಖರ್ಗೆ ತವರಿನಿಂದಲೇ ಮೋದಿ ರಣಕಹಳೆ
ಭೋವಿ ಗುರು ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹಿಂದುಳಿದ ವರ್ಗಗಳ ಕಲ್ಯಾಣಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಚಿವ ರು ಶಿವರಾಜ್ ಎಸ್ ತಂಗಡಗಿ, ಸಮಾಜ ಕಲ್ಯಾಣ ಸಚಿವರಾದ ಎಚ್ ಸಿ ಮಹಾದೇವಪ್ಪ ಸೇರಿದಂತೆ ಭೋವಿ ಸಮಾಜದ ಎಲ್ಲಾ ಹಾಲಿ ಶಾಸಕರು. ಹಾಗೂ ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರ ಹಾಜರಿರಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















