Monday, June 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಶ್ರಾವಣ ಸಾಕ್ಷಾತ್ಕಾರ-2: ಹಬ್ಬಗಳ ಸಾಮ್ರಾಟ ಶ್ರಾವಣ ಮಾಸ

July 21, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶ್ರಾವಣ ಸರ್ವರಿಗೂ ಸಂಭ್ರಮದ ಮಾಸ. ಶ್ರಾವಣದ ತುಂತುರು ಹನಿಗಳ ನಡುವೆಯೇ ಹಬ್ಬಗಳನ್ನು ಎದುರುಗೊಳ್ಳುವ ಆತುರದಿಂದ ಸುಣ್ಣ-ಬಣ್ಣ ತಳಿರು ತೋರಣಗಳಿಂದ ಮನೆಗಳನ್ನು ಸಿಂಗರಿಸುತ್ತಾರೆ, ಹಾಗೆ ನೋಡಿದರೆ ಶ್ರಾವಣ ಪ್ರತಿದಿನವೂ ಹಬ್ಬವೇ ಆಯಾ ಜನಾಂಗಗಳಿಗೆ ಆಯಾ ಪಂಗಡಗಳಿಗೆ ಅವರವರ ನಂಬಿಕೆಗಳುನಸಾರವಾಗಿ ಒಂದೊಂದು ದಿನಕ್ಕೆ ಒಂದೊಂದು ಮಹತ್ವ.

ಈ ಪವಿತ್ರಮಾಸದುದ್ದಕ್ಕೂ ವ್ರತಾಚರಣೆ ಮಾಡುತ್ತ ಕೇವಲ ಫಲಾಹಾರ ಹಾಗೂ ಹಾಲುಗಳ ಸೇವನೆ ಹಾಗೂ ಮಾಂಸ-ಕುಡಿತಗಳ ತ್ಯಾಗ ಮಾಡುವ ಪದ್ಧತಿ ಎಲ್ಲ ಕುಲಗಳಲ್ಲೂ ಉಂಟು. ದೇವಾಸುರರು ಸಮುದ್ರಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಲಕ್ಷ್ಮಿಯೂ ಸೇರಿದಂತೆ ಚತುರ್ದಶರತ್ನಗಳು ಉದ್ಭವಿಸಿ ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ ಎಲ್ಲ ನೇಮಗಳೂ ಸಮೃದ್ಧಿಕಾರಕ ಎನ್ನಲಾಗುತ್ತದೆ.
ಶ್ರಾವಣ ಪ್ರತಿಯೊಬ್ಬರ ಬದುಕಿನಲ್ಲಿ ಹೊಸತನ ತರುತ್ತದೆ. ನವಚೈತನ್ಯ ತುಂಬುತ್ತದೆ. ಈ ಹೊಸತನ ಈ ನವಚೈತನ್ಯ ಪ್ರಕೃತಿಯ ಕೊಡುಗೆ. ಪ್ರಕೃತಿ ನಮ್ಮನ್ನು ಪೊರೆಯುತ್ತಿರುವ ತಾಯಿ, ತಾಯಿ ತನ್ನ ಮೈತುಂಬ ಹಸಿರುಟ್ಟು, ತಲೆತುಂಬ ವಿಭಿನ್ನ ಬಗೆಯ ಹೂವುಗಳನ್ನು ಮುಡಿದು ನಲಿಯ ತೊಡಗಿದಾಗ ಮಕ್ಕಳಾದ ನಮಗೆ ಕುಣಿಯಬೇಕೆನ್ನಿಸುತ್ತದೆ. ನಿಸರ್ಗದ ಮಕ್ಕಳು ಈ ತಿಂಗಳು ಹಾಡುತ್ತಾರೆ, ಕುಣಿಯುತ್ತಾರೆ. ಹಬ್ಬಗಳನ್ನು ಆಚರಿಸುತ್ತಾರೆ. ಪ್ರಕೃತಿಯ ವೈಭವವೇ ನಮ್ಮ ವೈಭವ. ಅದನ್ನು ಮರೆತು ಬಾಳುವುದು ಎಂದರೆ ಅದು ಜಡ ಬದುಕಾದೀತು ಎಚ್ಚರ!

ಶ್ರಾವಣ ಸಂಭ್ರಮದ ತಿಂಗಳು ಎನ್ನುವುದರಲ್ಲಿ ಸಂದೇಹವಿಲ್ಲವಾದರೂ ಅದು ಈಗ ಹಿಂದಿನಂತೆ ಆಚರಣೆಗೊಳ್ಳುತ್ತಿಲ್ಲ ಎಂಬುದನ್ನೂ ನಾವು ಒಪ್ಪಿಕೊಳ್ಳಬೇಕು. ಶ್ರಾವಣದ ಸಂಭ್ರಮ ಗ್ರಾಮೀಣ ವಲಯದಲ್ಲಾದರೂ ಇದೆ ಎಂದು ಅತ್ತ ಹೋದರೆ ಅಲ್ಲಿಯೂ ಪಟ್ಟಣದ ಥಳಕು ಬೆಳಕಿನ ಆಧುನಿಕ ಜೀವನ ಪ್ರವೇಶ ಪಡೆದಿದ್ದು ಸಾಂಪ್ರದಾಯಿಕ ಹಬ್ಬ ಹರಿದಿನಗಳು ತಮ್ಮ ಮೊದಲಿನ ವೈಭವ ಕಳೆದುಕೊಳ್ಳುತ್ತಿದೆ. ಉದಾಹರಣೆಗೆ ಶ್ರಾವಣ ಮಾಸದಲ್ಲಿ ನಡೆಯುವ ಹೊಸ್ತಿಲ ಪೂಜೆಯನ್ನೇ ನೋಡಿ, ನವನಾಗರೀಕತೆಯ ಸೋಂಕಿನಲ್ಲಿ ಎಲ್ಲೆಲ್ಲೂ ತಲೆಯೆತ್ತಿ ನಿಂತಿರುವ ಕಾಂಕ್ರೀಟ್ ಬಂಗಲೆಗಳಲ್ಲಿ ಹೊಸ್ತಿಲುಗಳಿಗೆ ಮಾನ್ಯತೆಯೇ ಇಲ್ಲ. ಕೆಲವು ಮನೆಗಳಲ್ಲಿ ಹೊರ ಬಾಗಿಲಿನಲ್ಲಿ ಮಾತ್ರ ಹೆಸರಿಗೆ ಎನ್ನುವಂತೆ ಒಂದು ಹೊಸ್ತಿಲು ಇರುತ್ತದೆ. ಕೆಲವಡೆ ಅದೂ ಇರುವುದಿಲ್ಲ. ಅಂದಾಗ ಹೊಸ್ತಿಲ ಪೂಜೆ ನಡೆಯುವುದೆಲ್ಲಿ? ಇಂದಿನ ಜನರು ನಾಗರೀಕತೆಯ ಬದುಕಿಗೆ ಒಗ್ಗಿಕೊಂಡಿದ್ದು, ಹಿಂದಿನ ಆಚರಣೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಕಲ್ಲು ಪ್ರಕೃತಿ ಅದು ಶಿಲ್ಪಿಯ ಕೈಯಲ್ಲಿ ಕಡೆದಾಗ ಸಂಸ್ಕೃತಿ ಎನಿಸುತ್ತದೆ. ಮನುಷ್ಯನು ಜೀವನವನ್ನು ಹೇಗೋ ಒಂದು ಗಳಿಗೆಯಲ್ಲಿ ಬಾಳಿ ಮುಗಿಸುವುದಂತೂ ಇದ್ದೇ ಇರುತ್ತದೆ. ಆದರೆ ಅದರಲ್ಲಿ ಧ್ಯೇಯ ಹಾಗೂ ವಿಕಾಸಪ್ರಾಯ ಜೀವನಶೈಲಿ ಇರದಿದ್ದಲ್ಲಿ ಅದು ಅರ್ಥಹೀನವೇ ಸರಿ. ಮೌಲ್ಯ, ಸಂಸ್ಕೃತಿ, ಧರ್ಮಪ್ರಜ್ಞೆ, ಸರ್ವಹಿತದೃಷ್ಟಿ ಹಾಗೂ ಪರತತ್ವದ ಜಿಜ್ಞಾಸೆಗಳೆಂಬ ವಿಚಾರ ಹಾಗೂ ಅನುಷ್ಠಾನ ಎನ್ನುವ ಆಚಾರ ಸೇರಿದಾಗಲೇ ಜೀವನಕ್ಕೆ ಒಂದು ಊರ್ಧ್ವಮುಖತೆ ಸಿಗುವುದು. ಭಾರತೀಯ ಚಿಂತನಧಾರೆಯಲ್ಲಿ ಹರಿದು ಬಂದ ಈ ಆಚಾರ-ವಿಚಾರಗಳ ಹಲವು ಮುಖಗಳ ಇಣುಕು ನೋಟವಿದು.

ಹಬ್ಬಗಳ ಸಾಮ್ರಾಟ
ಶ್ರವಣ ನಕ್ಷತ್ರ ವಿಷ್ಣುವಿನ ಜನ್ಮನಕ್ಷತ್ರವಂತೆ , ಶ್ರಾವಣ ಹುಣ್ಣಿಮೆಯಂದು ಶ್ರವಣ ನಕ್ಷತ್ರ ಬರುವುದರಿಂದ ಇಡೀ ಮಾಸಕ್ಕೆ ಪಾವಿತ್ರ್ಯ ಬಂತು ಎನ್ನುತ್ತಾರೆ. ಕೇರಳದಲ್ಲಿ ಅದರಲ್ಲಿನ ಶ್ರ’’ಕಳೆದು ವಣಂ ಮಾತ್ರ ಉಳಿಯಿತು. ಅದು ಅನಂತಶಯನನಾದ ಶ್ರೀವಿಷ್ಣುವಿನ ನಕ್ಷತ್ರವಾಗಿ ತಿರು(ಶ್ರೀ) ವೋಣಂ ಆಯ್ತು. ಬಲಿ ಚಕ್ರವರ್ತಿ ಮತ್ತು ವಿಷ್ಣುವಿನ ವಾಮನಾವತಾರದ ನಡುವಿನ ಕತೆಯೂ ಇದರೊಂದಿಗೆ ಹೊಂದುಕೊಂಡಿದೆ.

ಇದನ್ನು ಪ್ರಸೂತಿನಿ ಮಾಸವೆಂದು ಕರೆಯುತ್ತಾರೆ. ಯಾವುದೇ ದೋಷವಿದ್ದರೂ ಈ ಮಾಸದಲ್ಲಿ ರವಿಯು ಸಿಂಹಪ್ರವಿತನಾಗಿರುವಾಗ ಶಾಂತಿ ಮಾಡಿಸಿದರೆ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದಕ್ಕೆ ಕಾರಣ. ಆಷಾಢ ಜಡಿ ಮಳೆನೀರನ್ನು ಸ್ವೀಕರಿಸಿ ಉಬ್ಬಿ ಉಗ್ರಗೊಂಡಿರುವ ಸಮುದ್ರವು ಶ್ರಾವಣ ಹುಣ್ಣಿಮೆಯಂದು ಶಾಂತವಾಗುತ್ತದೆ. ಕರಾವಳಿಯಲ್ಲಿ ಈ ದಿನ ವರುಣದೇವತೆಯೆಂದು ಸಮುದ್ರಕ್ಕೆ ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ. ಶ್ರಾವಣ ಮಾಸಕ್ಕೆ ಅಧಿದೇವತೆ ಶಿವನಾದ್ದರಿಂದ ಇಲ್ಲಿ ಗಂಗೆಯನ್ನು ಶಿರದಲ್ಲಿ ಧರಿಸಿದ ಈಶ್ವರ ಮುಕ್ಕಣನೆಂದು ತೆಂಗಿನ ಕಾಯಿಯನ್ನು ಸಮುದ್ರಕ್ಕೆ ಸಲ್ಲಿಸಿ, ಈ ಮೂಲಕ ಗಂಗೆಯನ್ನು ಧರಿಸಿದ ಶಿವನನ್ನೂ ವಿಶೇಷವಾಗಿ ಪೂಜಿಸುತ್ತಾರೆ.

ವಾಲ್ಮಿಕಿಯ ಅವತಾರವೆನ್ನುವ ಹನುಮಾನ್ ಚಾಲೀಸ ರಚಿಸಿದ ತುಲಸೀದಾಸರು ಕೂಡ ಹುಟ್ಟಿದ ತಿಂಗಳು ಇದುವೇ. ಕಾರ್ತೀಕದಲ್ಲಿ ಸೋಮವಾರ, ಮಾರ್ಗಶಿರದಲ್ಲಿ ಗುರುವಾರ ಮತ್ತು ಮಾಘದಲ್ಲಿ ಭಾನುವಾರ ಶ್ರೇಷ್ಟವಾದರೆ ಶ್ರಾವಣದಲ್ಲಿ ಮಾತ್ರ ಮೂರು ವಾರಗಳು ಪ್ರಶಸ್ತ ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ, ಶ್ರಾವಣ ಮಂಗಳವಾರ .ನಮ್ಮ ಬಹುತೇಕ ಜನರು ಪೂಜಾಮನಸ್ಕರು ಮತ್ತು ಪುರಾಣವತ್ಸಲರು, ಶ್ರಾವಣ ದಲ್ಲಿ ಇದರ ನೆಪ ಮಾಡಿ ಪುಣ್ಯ ಸಂಚಯಕ್ಕೆ ವೇದಿಕೆಯಾಗಿಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಶ್ರಾವಣ ಮಾಸಕ್ಕೆ ಪ್ರತಿಸ್ಪರ್ಧೆಯೇ ಇಲ್ಲ ,ಹಾಗೆಯೆ ನಾವು ಬರಿ ವ್ರತ ಅನುಷ್ಠಾನಕ್ಕೆ ಮೀಸಲಾಗಿರಿಸದೆ ಸಾಧನಾಮಾಸವನ್ನಾಗಿ ಪರಿವರ್ತಿಸಿ ಮಾಸನಿಯಾಮಕ ಶ್ರೀಧರರೂಪಿ ಪರಮಾತ್ಮನಿಗೆ ಅರ್ಪಿಸಬೇಕು.

ಆಧ್ಯಾತ್ಮಿಕ ಪರ್ವಗಳಷ್ಟೆ ಅಲ್ಲದೆ ಹೋರಾಟ-ತ್ಯಾಗ ಬಲಿದಾನಗಳ ನೆನಪಿಸುವ ಸ್ವಾತಂತ್ರದಿನವೂ ಶ್ರಾವಣದಲ್ಲೆ, ಇಂದು ನಾವೆಲ್ಲರೂ ನಿರುಮ್ಮಳವಾಗಿರುಂತೆ ಅನುಕೂಲ ಮಾಡಿಕೊಟ್ಟವರ ಸ್ಮರಣೆ. ಮೇಳು- ಕೀಳು ಎನ್ನುವ ಭೇದಗಳಿಗೆ ಬೇಕಾದಷ್ಟು ಕಾರಣಗಳು ದೊರೆಯುವ ಕಾಲವಿದು. ಇಂತಹ ಕಾಲದಲ್ಲಿ ಸಾಮಾಜಿಕ ಜೀವನದ ಸೊಬಗಿನಲ್ಲಿ ಮಾನವೀಯತೆ ಪ್ರಧಾನವಾಗಬೇಕು ಎನ್ನುವ ಆಶಯ ಬಿತ್ತಿದ ಮಹರ್ಷಿ ಅರವಿಂದರ ಜನ್ಮದಿನ ಈ ಮಾಸದಲ್ಲೆ.

ಶ್ರಾವಣದ ಹಬ್ಬಗಳಲ್ಲಿ ಮಹಿಳೆಯರ ಅಂತರಂಗ ತೆರೆದುಕೊಳ್ಳುತ್ತದೆ. ಸಮಾಜದೊಂದಿಗೆ ಬೆಸೆಯುತ್ತದೆ. ಇಲ್ಲಿ ಖಾಸಗಿತನವಿದೆ, ಸಮೂಹದ ಸಂಭ್ರಮವಿದೆ. ಪ್ರತಿ ಶ್ರಾವಣದಲ್ಲೂ ಹೆಣ್ಣು ಹೊಸಬಳಾಗುತ್ತಾಳೆ. ಈ ಹೊಸದಾಗುವ ಕ್ರಿಯೆಯೇ ಶ್ರಾವಣ ಹೂರಣವೂ ಹೌದು, ಇಂಥ ಎಲ್ಲಾ ನೆನೆಪುಗಳೊಂದಿಗೆ ಮತ್ತೆ ಬಂದಿದೆ ಶ್ರಾವಣ. ಮಹಿಳೆಯರ ಕಣ್ಣಿನಲ್ಲಿ ಮಿನುಗುತಿದೆ ಕಾಂತಿಯ ಕಿರಣ.

ಮೇಲೇರಿದವನು ಚಿಕ್ಕವನಿರಬೇಕೆಲೆ
ವ್ಯಕ್ತಿ ಎಷ್ಟೇ ಸಿರವಂತನಿರಬಹುದು. ಆತ ಸದಾ ಸಂತೃಪ್ತನೇ ಇರಬಹುದು. ಎಲ್ಲರಿಗೂ ದಾನ-ಧರ್ಮ ಮಾಡುತ್ತ ತಾನೇ ಮೇಲಿದ್ದೇನೆ ಎಂಬ ತೃಪ್ತಿ ಆತನಲ್ಲಿರಬಹುದು. ಆದರೆ ಆತನನ್ನು ಮೀರಿದ ಶಕ್ತಿಯೊಂದಿದೆ ಎಂಬುದನ್ನು ನೆನಪಿಸಿಕೊಳ್ಳುವ ಅಪೂರ್ವಅ ವೇಳೆ ಇದು. ಪ್ರತಿ ಶ್ರಾವಣ ಶನಿವಾರಗಳಂದು ಕಿರಿಯರು-ಹಿರಿಯರೆನ್ನದೆ ಎಲ್ಲರೂ ನಾಮ ಹಾಕಿ ಭಿಕ್ಷೆ ಬೇಡುವ ಆಚರಣೆಯೂ ವೈಷ್ಣವರಲ್ಲಿದೆ. ಇದಕ್ಕೆ ಪಡಿ ಬೇಡುವುದು ಅನ್ನುತ್ತಾರೆ. ಈ ಮೂಲಕ ನಮ್ಮೊಳಗಿನ ಅಹಂಕಾರ ತೊಡೆದು ವಿನಮ್ರತೆ ಸಾರಬೇಕೆಂಬುದು ಇದರ ಹಿಂದಿನ ಉದ್ದೇಶ.

ಮಂಗಳಗೌರೀ ವ್ರತ
ವಿವಾಹಿತ ಮಹಿಳೆಯರು ಮದುವೆಯಾದ ಮೊದಲ ಐದು ವರ್ಷಗಳವರೆಗೆ ಮಾಡುವ ವ್ರತವಿದು. ಈ ವ್ರತವನ್ನು ಶ್ರಾವಣಮಾಸದಲ್ಲಿ ಬರುವ ನಾಲ್ಕು ಮಂಗಳವಾರಗಳಲ್ಲಿ ಆಚರಿಸಬೇಕು. ಮಂಗಳವಾರದ ದಿನ ಎಣ್ಣೆಯ ಸ್ನಾನ ಮಾಡಿ ಮಂಗಳದ್ರವ್ಯಗಳನ್ನು ಸಿದ್ಧಪಡಿಸಿಟ್ಟುಕೊಂಡು, ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರ ಮಧ್ಯೆ ಮಂಗಳವಾರದ ಅರಿಶಿನದಿಂದ ಗೋಪುರಾಕಾರದಲ್ಲಿ ಮಾಡಿದ ಮಂಗಳಗೌರಿಯನ್ನು ಸ್ಥಾಪಿಸಬೇಕು. ಕಲಶವನ್ನು ಸ್ಥಾಪಿಸಿ, ಕನ್ನಡಿ ಮುಂದಿಟ್ಟು, ಐದು ಕಣಗಳನ್ನು ಇಟ್ಟು, ಪೂರ್ಣಫಲವಾದ ತೆಂಗಿನಕಾಯಿಯನ್ನು ಬದಿಯಲ್ಲಿಟ್ಟು, ಆಮೇಲೆ ಗೌರಿಗೆ ಅವಾಹನೆ, ಆಸನಗಳನ್ನು ನೀಡಬೇಕು. ತಂಬಿಟ್ಟು-ಕೋಸಂಬರಿಗಳನ್ನು ನಿವೇದಿಸಬೇಕು. ತಂಬಿಟ್ಟಿನಲ್ಲಿ ಮಾಡಿದ 16 ದೀಪಗಳನ್ನು ಹಚ್ಚಬೇಕು. ವಾಯನದಾನ ಹಾಗೂ ಮೊರದ ಬಾಗಿನಗಳನ್ನು, ನಿವೇದಿತವಾದುದನ್ನು ಸುವಾಸಿನಿಯರಿಗೆ ಕೊಡಬೇಕು.

ಜೀವನದಲ್ಲಿ ಮದುವೆಯ ಮಂಗಳಕಾರ್ಯ ಆದ ಆನಂತರ, ಮನೆಗೆ ಮಂಗಳವಾದಂತೆ ಮುಂದಿನ ಜೀವನವು ಮಕ್ಕಳು, ಆರೋಗ್ಯ, ಆರೈಕೆಗಳಿಂದ ಮಂಗಳಮಯವಾಗಿ ಸಾಗಬೇಕಲ್ಲವೇ. ಅದಕ್ಕೆ ಮಂಗಳ ಗೌರಿಯ ಅನುಗ್ರಹ ಅತ್ಯವಶ್ಯ. ಈ ಆರಾಧನೆಯಿಂದ ಶಿವನು ಗೌರಿಯ ಅರ್ಧದೇಹ ಹಂಚಿ ಅರ್ಧನಾರೀಶ್ವರನಾದಂತೆ, ಸಂಪೂರ್ಣ ಸಾಮರಸ್ಯ ದಂಪತಿಗಳಲ್ಲಿ ಬರುವುದು ಖಚಿತ. ಇದನ್ನು ಐದು ವರ್ಷದವರೆಗೆ ಆಚರಿಸಿ ಪಾತ್ರೆಯಲ್ಲಿ ಧಾನ್ಯಾದಿಗಳನ್ನು ತುಂಬಿ ಪ್ರತಿಮೆಯನ್ನು ಇಟ್ಟು, ಪಾತ್ರೆಯ ಮುಖವನ್ನು ಮುಚ್ಚಿ ಮೊರದ ಬಾಗಿನದೊಂದಿಗೆ (ಸೀರೆ ಸಹಿತ) ದಾನಕೊಡುವ ಪದ್ಧತಿ ಇದೆ. ಇದರಿಂದ ಉಮಾಮಹೇಶ್ವರಾಂತರ್ಗತ ಜಯಾಪತಿ ಸಂಕರ್ಷಣ ಪ್ರೀತನಾಗುವನು. ಮದುವೆಯಾದ ದಂಪತಿಗಳಲ್ಲಿ ಸಾಮರಸ್ಯಕ್ಕೆ ಮನೋಭಿಮಾನಿಯಾದ ರುದ್ರದೇವರ ಅನುಗ್ರಹ ಬೇಡವೇ?


Get In Touch With Us info@kalpa.news Whatsapp: 9481252093

Tags: Dr Gururaj PoshettihalliFestivalKannada News WebsiteLatest News KannadaMangala Gowri VrathaShravana Masaಡಾ.ಗುರುರಾಜ ಪೋಶೆಟ್ಟಿಹಳ್ಳಿಪ್ರಸೂತಿನಿ ಮಾಸಮಂಗಳಗೌರೀ ವ್ರತಶ್ರಾವಣ ಮಾಸಹಬ್ಬ
Previous Post

Superb hunting by Bhadravathi Police on gambling: Arrest of four persons

Next Post

ಕೇವಲ 24 ಗಂಟೆಗಳಲ್ಲಿ ಬರಲಿದೆ ಕೊರೋನಾ ಪರೀಕ್ಷಾ ವರದಿ: ಸಿಎಂ ಬಿಎಸ್’ವೈ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Image

ಕೇವಲ 24 ಗಂಟೆಗಳಲ್ಲಿ ಬರಲಿದೆ ಕೊರೋನಾ ಪರೀಕ್ಷಾ ವರದಿ: ಸಿಎಂ ಬಿಎಸ್’ವೈ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!