No Result
View All Result
Blood Donation Camp Successfully Organised at Mysuru Division
English Articles

Blood Donation Camp Successfully Organised at Mysuru Division

by ಕಲ್ಪ ನ್ಯೂಸ್
June 16, 2026
0

Kalpa Media House  | Mysuru | South Western Railway, Mysuru Division, organised a Blood Donation Camp in collaboration with Railway...

Read moreDetails
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
  • Advertise With Us
  • Grievances
  • About Us
  • Contact Us
Friday, June 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಶ್ರಾವಣ ಸಾಕ್ಷಾತ್ಕಾರ-5: ಯಜ್ಞದ ಪ್ರತೀಕ ಉಪಾಕರ್ಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 30, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ಶ್ರಾವಣ ಸಾಕ್ಷಾತ್ಕಾರ-5: ಯಜ್ಞದ ಪ್ರತೀಕ ಉಪಾಕರ್ಮ

Internet Image

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಉಪಾಕರ್ಮವು ಶ್ರಾವಣಮಾಸದಲ್ಲಿ ಆಚರಿಸಲ್ಪಡುವ ಮುಖ್ಯತಮವಾದ ಒಂದು ಪರ್ವ. ವೇದಾಧ್ಯಯನಕ್ಕೆ ಸಂಬಂಧಪಟ್ಟ ಪ್ರಶಸ್ತವಾದ ಮಂಗಲಕರ್ಮವಾಗಿದೆ. ಕೆಲವು ಮಹರ್ಷಿಗಳು ಇದನ್ನು ಅಷ್ಟಾದಶ (18) ಮಹಾ ಸಂಸ್ಕಾರಗಳಲ್ಲಿ ಒಂದನ್ನಾಗಿ ಪರಿಗಣಿಸುತ್ತಾರೆ.

ನಮ್ಮ ದೇಶದಲ್ಲಿ ಅತ್ಯಂತ ಪ್ರಶಸ್ತವಾದ ಪರ್ವಗಳು ನಾಲ್ಕು. ಅವು ಶ್ರಾವಣೀ-ಉಪಾಕರ್ಮ, ದಶಹರಾ (ನವರಾತ್ರಿ, ವಿಜಯದಶಮಿ), ದೀವಾಲೀ – (ದೀಪಾವಳಿ) ಮತ್ತು ಹೋಲಿ – ಇವು ಎಲ್ಲರಿಗೂ ಮುಖ್ಯವಾಗಿದ್ದರೂ ಕ್ರಮವಾಗಿ ಆ ನಾಲ್ಕೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಣದವರಿಗೆ ವಿಶೇಷವಾಗಿ ಮುಖ್ಯವಾಗಿವೆ.

ಸಂಸ್ಕಾರಪೂರ್ವಕವಾಗಿ ವೇದಗಳನ್ನು ಗ್ರಹಿಸುವ ಮತ್ತು ಪ್ರಾರಂಭಿಸುವ ಕರ್ಮವಾದ್ದರಿಂದ ಇದಕ್ಕೆ ಉಪಾಕರ್ಮ, ಅಧ್ಯಾಯೋಪಾಕರ್ಮ, ಉಪಾಕರಣ, ವೇದ ಸ್ವೀಕಾರ, ವೇದಾರಂಭಣ ಎಂಬ ಹೆಸರುಗಳೂ ಸಲ್ಲುತ್ತದೆ. ಶ್ರಾವಣ ಮಾಸದಲ್ಲಿ ಬರುವ ಮುಖ್ಯವಾದ ಪರ್ವವಾದ್ದರಿಂದ ಶ್ರಾವಣೀ ಎಂಬ ಹೆಸರೂ ಉಚಿತವಾಗಿದೆ. ತಮಿಳುನಾಡಿನವರು ಆವಣಿ ಅವಿಟ್ಟಂ ಎಂದು ಹೆಸರಿಸುತ್ತಾರೆ. ಕನ್ನಡನಾಡಿನಲ್ಲಿ ಉಪಾಕರ್ಮ ಎಂಬ ಶಾಸ್ತ್ರೀಯವಾದ ನಾಮಧೇಯದಿಂದ ಸಂಪ್ರದಾಯವನ್ನು ಬಲ್ಲವರು ಕರೆಯುತ್ತಾರೆ. ಅದನ್ನು ಅರಿಯದವರು ಜನಿವಾರದ ಹಬ್ಬ ಎಂದು ವ್ಯವಹರಿಸುತ್ತಾರೆ.

ಎಲ್ಲಾ ವೇದ ಶಾಖೆಗಳಿಗೆ ಸೇರಿದವರು ಈ ಪರ್ವವನ್ನು ಆಚರಿಸಬೇಕು. ಉಪನಯನ ಸಂಸ್ಕಾರ ಯಾರಿಗೆ ಆಗಿದೆಯೋ ಅವರೆಲ್ಲರೂ ಇದಕ್ಕೆ ಅಧಿಕಾರಿಗಳು, ಯಾರಿಗೆ ಉಪನಯನ ಸಂಸ್ಕಾರ ಇಲ್ಲವೋ ಅಂತಹವರು ಕೂಡ ವೇದಪುರುಷನಿಗೆ ಪ್ರಿಯವಾದ ಆ ದಿವಸದಲ್ಲಿ ವಿಶೇಷವಾಗಿ ಭಗವಂತನ ಧ್ಯಾನ ಪೂಜೆಗಳನ್ನು ಮಾಡಬೇಕು. ತಂದೆ ಅಥವಾ ತಾಯಿ ಮೃತರಾಗಿದ್ದರೆ ಅವನಿಗೆ ಆ ವರ್ಷ ಉಪಾಕರ್ಮವಿಲ್ಲ. ಅಥವಾ ಮೃತಶೌಚ ದೋಷದಲ್ಲಿರುವಾಗ ಉಪಾಕರ್ಮ ಮಾಡಬಾರದು. ಮಲಮಾಸದಲ್ಲಿ ಉಪಾಕರ್ಮವನ್ನು ಮಾಡುವುದು ಶುಭಕರವಲ್ಲ.

ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳಿಗೆ ಕ್ರಮವಾಗಿ ಬೃಹಸ್ಪತಿ. ಶುಕ್ರ, ಮಂಗಳ ಮತ್ತು ಬುಧ ಇವರು ಅಧಿಪತಿಗಳು. ಆಯಾ ಗ್ರಹಗಳಿಗೆ ಶಕ್ತಿ ಇರುವ ಸಮಯದಲ್ಲಿಯೇ ಆಯಾ ಶಾಖೆಯವರು ಉಪಾಕರ್ಮವನ್ನು ಮಾಡಿಕೊಳ್ಳುವುದು ಶುಭಕರ.

ಉಪಾಕರ್ಮಕ್ಕೆ ಶ್ರಾವಣ, ಭಾದ್ರಪದ ಅಥವಾ ಆಷಾಢಮಾಸವನ್ನೂ ಪೌರ್ಣಮಿ ಮತ್ತು ಪಂಚಮಿ ತಿಥಿಗಳನ್ನೂ, ಶ್ರವಣ ಮತ್ತು ಹಸ್ತಾ ನಕ್ಷತ್ರಗಳನ್ನೂ, ಪ್ರಶಸ್ತವೆಂದು ಹೇಳಲಾಗುತ್ತದೆ. ಮಳೆಯಿಂದ ಹೊಸ ಔಷಧಿಗಳು ಹುಟ್ಟಿರುವ ಸಮಯವು ಉಪಾಕರ್ಮಕ್ಕೆ ಪ್ರಶಸ್ತ ಎಂಬುದನ್ನು ನಾವಿಲ್ಲಿ ಗಮನಿಸಬೇಕು.
ಉಪನಯನದ ಅನಂತರ ಬರುವ ಮೊದಲನೇ ಉಪಾಕರ್ಮಕ್ಕೆ ಪ್ರಥಮೋಪಾಕರ್ಮ ಎಂದು ಹೆಸರು. ಆ ಪ್ರಥಮೋಪಾಕರ್ಮ ಮಾಡಿಕೊಂಡ ನಂತರವೇ ಬ್ರಹ್ಮಚಾರಿಗೆ ಬ್ರಹ್ಮಯಜ್ಞ ಮಾಡುವ ಅಧಿಕಾರ ಉಂಟಾಗುತ್ತದೆ. ವೇದಾಧ್ಯಯನದ ಅಭ್ಯುದಯಕ್ಕೆ ಕಾರಣವಾದ ಹೊಸತನ ಉಂಟಾಗಿ, ಅಧ್ಯಯನ ಪುನರ್ನವೀಕೃತವಾಗುತ್ತದೆ.

ವೇದಗಳ ಮತ್ತು ಶಾಸ್ತ್ರಗಳ ಅಧ್ಯಯನವು ಋಷಿಗಳ ಕಾಲದಲ್ಲಿ ವೇದ ಮತ್ತು ಶಾಸ್ತ್ರ ಎಂಬ ಉಭಯ ಸರಸ್ವತಿಗಳಿಗೂ ತೃಪ್ತಿಯಾಗುವಂತೆ ನಡೆಯುತ್ತಿತ್ತು. ನಮ್ಮ ವೇದ ಮತ್ತು ಸಂಸ್ಕತ ಪಾಠಶಾಲೆಗಳಲ್ಲಿ ಈ ಬಗ್ಗೆ ತುಂಬಾ ಅಪಚಾರವಾಗಿದೆ. ಅವುಗಳಲ್ಲಿ ಒಂದು ಮುಖ್ಯ ಉಪಚಾರ ವೇದಶಾಸ್ತ್ರಗಳ ಪಾಠ್ಯಕ್ರಮ ಮತ್ತು ಕಾಲಾವಧಿಗಳಿಗೆ ಸಂಬಂಧಪಟ್ಟಿದ್ದು ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ ಎಂಬ ಆರು ಶಾಸ್ತ್ರಗಳು ವೇದಾಂಗ ಎನಿಸುತ್ತದೆ. ಇದಲ್ಲದೆ ತರ್ಕ, ಮೀಮಾಂಸಾ, ಸಾಂಖ್ಯಯೋಗ ಮುಂತಾದ ಶಾಸ್ತ್ರಗಳು, ಇತಿಹಾಸ, ಪುರಾಣಗಳು ವೇದಾರ್ಥಗಳನ್ನು ವಿವರಿಸುವುದಕ್ಕೂ ವೇದಗಳನ್ನು ಸಂರಕ್ಷಿಸುವುದಕ್ಕೂ ಮಹರ್ಷಿಗಳಿಂದ ಉಪದೇಶಿಸಲ್ಪಟ್ಟವು. ಆದರೆ ನಮ್ಮ ವೇದ ಸಂಸ್ಕತ ಪಾಠಶಾಲೆಗಳಲ್ಲಿ ಅಂಗಿಯಾದ ವೇದಗಳೂ ಅದಕ್ಕೆ ಅಂಗವೂ ಪೋಷಕವೂ ಆಗಿರುವ ಶಾಸ್ತ್ರಗಳು ಏಕದೇಹದಲ್ಲಿ ವಾಸ ಮಾಡಲು ಸಾಧ್ಯವಾಗದಂತಹ ಪಠ್ಯಕ್ರಮವೂ ಯೋಜಿತವಾಗಿಬಿಟ್ಟಿವೆ.

ತರ್ಕ, ವ್ಯಾಕರಣಾದಿಗಳನ್ನು ಅಧ್ಯಯನ ಮಾಡಿ ಪರಿಣತಿಯ ಪದವಿಯನ್ನು ಪಡೆದ ವಿದ್ವಾಂಸನಿಗೆ ವೇದದ ಗಂಧವೂ ಇರಬೇಕಾಗಿಲ್ಲ. ವೇದಪಂಡಿತರಿಗೆ ವ್ಯಾಕರಣಾದಿ ಶಾಸ್ತ್ರಗಳ ಪರಿಚಯ ಇರಬೇಕಾಗಿಲ್ಲ. ತರ್ಕಾದಿ ಪಂಡಿತರು ವೇದಾಧ್ಯಯನ ಮಾಡಿದವರನ್ನು, ವೇದಭ್ಯಾಸ ಜಡ ಎಂದು ಜರಿಯುವುದೂ, ವೇದ ಪಂಡಿತರು ಅವರನ್ನು ಅಶ್ರೋತ್ರೀಯ ಅವೈದಿಕ ಎಂದು ಹಳಿಯುವುದೂ ಪದ್ಧತಿಯಾಗಿಬಿಟ್ಟಿದೆ. ಅಂಗಿ, ಅಂಗ ಮತ್ತು ಅಂಗರಕ್ಷಕರು ಪರಸ್ಪರ ಅಪರಿಚಿತರಾಗಬೇಕು. ಪರಿಚಿತವಾಗಿದ್ದರೂ ಒಬ್ಬರನ್ನೊಬ್ಬರೂ ತಿರಸ್ಕರಿಸಬೇಕು. ಇಂತಹ ಅವೈಜ್ಞಾನಿಕವಾದ ಪಾಠಕ್ರಮ ಈಗ ನಡೆಯುತ್ತಿದೆ. ಋಷಿಗಳ ಪೂಜೆ, ತರ್ಪಣ, ಅವರನ್ನು ಕುರಿತಾದ ಹೋಮ, ಹೊಸ ಯಜ್ಞೋಪವೀತ ಧಾರಣೆ, ವೇದದ ಆದಿಭಾಗದ ಅಧ್ಯಯನ ಇವು ಉಪಾಕರ್ಮದ ಪ್ರಧಾನ ಕರ್ಮಾಂಗವಾಗಿವೆ.

ಬೇರೆ ಬೇರೆ ವೇದಶಾಖೆಗಳಿಗೂ ಮತ್ತು ಸೂತ್ರಗಳಿಗೂ ಅನುಗುಣವಾಗಿ ಈ ಕರ್ಮಗಳ ಪ್ರಯೋಗದಲ್ಲಿ ಅನೇಕ ಸಾಮ್ಯ ವೈಷಮ್ಯಗಳನ್ನು ಕಾಣುತ್ತೇವೆ.
ವೇದದ ದೇವತೆಗಳನ್ನು ಋಷಿಗಳನ್ನು ಪೂಜಿಸಿ, ಅವರು ಅನುಗ್ರಹದಿಂದ ಪ್ರಕೃತಿಯ ಜಾಡ್ಯವು ತೊಲಗಿ ಹೊಸತನ ಉಾಂಗುತ್ತದೆ. ತರ್ಪಣವೆಂದರೆ ದೇವತೆಗಳಿಗೆ ಮತ್ತು ಋಷಿಗಳಿಗೆ ಸಂತೃಪ್ತಿ ಉಾಂಗಲೆಂದು ಕೃತಜ್ಞತೆಯಿಂದ ಅವರಿಗೆ ಅರ್ಪಿಸುವ ಒಂದು ಸೇವೆ.

ದಾನಕ್ಕೆ ಯೋಗ್ಯವಾದ ಅನೇಕ ಶ್ರೇಷ್ಠ ದ್ರವ್ಯಗಳಲ್ಲಿ ಒಂದಾದ ಯಜ್ಞೋಪವೀತವನ್ನು ದಾನಮಾಡುವುದು ವಿಶೇಷ. ಶ್ರಾವಣ ಕೃಷ್ಣ ಪ್ರಥಮದಂದು ವಿಶೇಷವಾಗಿ ಗಾಯಿತ್ರಿ ಜಪವನ್ನು ಮಾಡುತ್ತಾರೆ. ಇದನ್ನು ಗಾಯತ್ರಿ ಹಬ್ಬ ಎಂದು ಕರೆಯುತ್ತಾರೆ.

ಪಿತೃದೀಕ್ಷೆ ಮುಂತಾದ ಕಾರಣದಿಂದ ಯಾರು ಆ ವರ್ಷದಲ್ಲಿ ಉಪಾಕರ್ಮ ಮಾಡಿಕೊಳ್ಳುವುದಿಲ್ಲವೋ ಅವರೂ ಕೂಡ ಶ್ರಾವಣಕೃಷ್ಣ ಪ್ರಥಮದಂದು ಗಾಯತ್ರಿಯ ಜಪ ಅಥವಾ ಹೋಮವನ್ನು ಮಾಡಲೇಬೇಕು. ಹೀಗೆ ಗಾಯತ್ರಿಯು ಉಪಾಕರ್ಮದ ಅಂಗವಲ್ಲದಿದ್ದರೂ ವೇದದ ಅಧ್ಯಯನಕ್ಕೆ ಸಂಬಂಧಪಟ್ಟ ಅತ್ಯಂತ ಮುಖ್ಯವಾದ ಕರ್ಮ. ಮಿಥ್ಯಾಧ್ಯಯನ ಎಂಬ ದೋಷಕ್ಕೆ ಪ್ರಾಯಶ್ಚಿತ್ತ ರೂಪವಾದ ಕರ್ಮ, ಉದ್ದಿಷ್ಟವಾದ ಫಲವನ್ನು ಕೊಡದೆ ಅನಿಷ್ಟವಾದ ಫಲವನ್ನು ಕೊಡುವ ಅಧ್ಯಯನ.

ಯಾವುದನ್ನು ಅಧ್ಯಯನ ಮಾಡಬಾರದೋ ಅದನ್ನು ಅಧ್ಯಯನ ಮಾಡಿದರೆ ಅಥವಾ ಅಧ್ಯಯನ ಮಾಡಬೇಕಾದ್ದನ್ನು ಅಶಾಸ್ತ್ರೀಯವಾಗಿ ಅಧ್ಯಯನ ಮಾಡಿದರೆ ಅದು ಸುಳ್ಳು ಅಥವಾ ಮಿಥ್ಯಾಧ್ಯಯನ. ಇದು ವೇದಮಾತೆಗೆ ಅಪಚಾರ. ಈ ದೋಷ ಪರಿಹಾರಾರ್ಥವಾಗಿ ಅಂದು ವಿಶೇಷವಾಗಿ ಗಾಯತ್ರಿ ಜಪ, ಹೋಮಾದಿಗಳನ್ನು ಶ್ರದ್ಧೆ ಉತ್ಸಾಹ ಹಾಗೂ ಏಕಾಗ್ರತೆಯಿಂದ ಮಾಡಿ ಮಾರನೇ ದಿನ ಯಥಾಶಕ್ತಿ ಸತ್ಯವಾದ ಅಧ್ಯಯನ ಮಾಡಬೇಕು.


Get In Touch With Us info@kalpa.news Whatsapp: 9481252093

Tags: Dr Gururaj PoshettihalliKannada News WebsiteLatest News KannadaShravana MasaUpakarmaಉಪಾಕರ್ಮಡಾ.ಗುರುರಾಜ ಪೋಶೆಟ್ಟಿಹಳ್ಳಿಭಾದ್ರಪದಮಹಾ ಸಂಸ್ಕಾರಶ್ರಾವಣ
Share206Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಫೇಲ್ ಹಾರಿಸಿಕೊಂಡು ಬಂದ ಕನ್ನಡಿಗ ವಿಂಗ್ ಕಮಾಂಡರ್ ಅರುಣ್ ಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು?

Next Post

ಆರ್. ಮಂಜುನಾಥ್ ಗೌಡರ ಸದಸ್ಯತ್ವ ರದ್ದತಿಗೆ ಹೈಕೋರ್ಟ್ ತಡೆಯಾಜ್ಞೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಆರ್. ಮಂಜುನಾಥ್ ಗೌಡರ ಸದಸ್ಯತ್ವ ರದ್ದತಿಗೆ ಹೈಕೋರ್ಟ್ ತಡೆಯಾಜ್ಞೆ

ಆರ್. ಮಂಜುನಾಥ್ ಗೌಡರ ಸದಸ್ಯತ್ವ ರದ್ದತಿಗೆ ಹೈಕೋರ್ಟ್ ತಡೆಯಾಜ್ಞೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
Plant trees and protect environment

ಗಿಡ ನೆಟ್ಟು ಪರಿಸರ ರಕ್ಷಿಸಿ: ಪಿಎಸ್ಐ ನವೀನ್

June 19, 2026
Vande Bharat Express

ಜೂನ್ ಕೊನೆಯಲ್ಲಿ ಸಕಲೇಶಪುರ–ಸುಬ್ರಹ್ಮಣ್ಯ ವಂದೇ ಭಾರತ್ ಪ್ರಾಯೋಗಿಕ ಸಂಚಾರ

June 19, 2026
ವಿದ್ಯಾನಗರ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ : 8 ಮಂದಿಗೆ ಗಾಯ, 4ರ ಸ್ಥಿತಿ ಗಂಭೀರ

ವಿದ್ಯಾನಗರ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ : 8 ಮಂದಿಗೆ ಗಾಯ, 4ರ ಸ್ಥಿತಿ ಗಂಭೀರ

June 19, 2026
Medicinal Plant Garden Cleanup Program

ಅನ್ನ, ಅಕ್ಷರ ಜ್ಞಾನ ದಾನದಂತೆ ಶ್ರಮದಾನವೂ ಶ್ರೇಷ್ಠ: ವಾಮನ್ ರಾವ್ ಭಾವೆ

June 19, 2026
ಅಧಿಕ ಮಾಸ ಮಹೋತ್ಸವ | ಮೈಸೂರಿನಲ್ಲಿ 33 ದಿನಗಳ ಆಧ್ಯಾತ್ಮಿಕ ಉತ್ಸವ ಸಂಪನ್ನ

ಅಧಿಕ ಮಾಸ ಮಹೋತ್ಸವ | ಮೈಸೂರಿನಲ್ಲಿ 33 ದಿನಗಳ ಆಧ್ಯಾತ್ಮಿಕ ಉತ್ಸವ ಸಂಪನ್ನ

June 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL