ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಕ್ಷಣಾ ಸಚಿವಾಲಯದಂತಹ ಗುರುತರ ಹೊಣೆಯನ್ನು ಹೊತ್ತುಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ದಕ್ಷತೆಯಿಂದಲೇ ಹೆಸರಾದವರು ಹಾಗೂ ಹಲವು ಹೊಸ ಸಾಹಸಗಳಿಗೆ ಕೈ ಹಾಕಿದವರು.
ಇಂತಹ ಧೈರ್ಯವಂತ ಸಚಿವೆ, ಈಗ ಜಮ್ಮು ಕಾಶ್ಮೀರದ ಬಲಬೀರ್ ಫಾರ್ವರ್ಡ್ ಪೋಸ್ಟ್ನ 28ನೆಯ ಇನ್ಫ್ಯಾಂಟ್ರಿ ಡಿವಿಜನ್ಗೆ ಭೇಟಿ ನೀಡಿದ ಮೊಟ್ಟ ಮೊದಲ ರಕ್ಷಣಾ ಸಚಿವೆ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.
#DefenceMinIndia, Smt @nsitharaman accompanied by #COAS & #ArmyCdrNC visited forward areas in Kupwara Sector & interacted with the troops; lauded high morale & professionalism of all ranks @adgpi @PIB_India @DefenceMinIndia @SpokespersonMoD pic.twitter.com/Vjb3gu9AM7
— NorthernComd.IA (@NorthernComd_IA) September 2, 2018
ಇಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಅವರನ್ನು ಕಣಿವೆ ರಾಜ್ಯದ ರಾಜ್ಯಪಾಲ ಸತ್ಯ ಪಾಲ್ ಮಲ್ಲಿಕ್ ಸ್ವಾಗತಿಸಿದರು. ಆನಂತರ ರಾಜಭವನಕ್ಕೆ ತೆರಳಿದ ಸಚಿವೆ, ರಾಜ್ಯಪಾಲರ ಜೊತೆಯಲ್ಲಿ ಅಲ್ಲಿನ ಪರಿಸ್ಥಿತಿಗಳನ್ನು ಕುರಿತಾಗಿ ಚರ್ಚಿಸಿದರು.
ಅತ್ಯಂತ ಪ್ರಮುಖವಾಗಿ ಜಮ್ಮು ಕಾಶ್ಮೀರದ ಭದ್ರತೆ ಅಂದರೆ ಆಂತರಿಕ ಹಾಗೂ ಬಾಹ್ಯ ಭದ್ರತೆಗಳ ಕ್ರಮಗಳ ಕುರಿತಾಗಿ ಚರ್ಚೆ ನಡೆಸಿದ ಸಚಿವೆ, ಈಗಾಗಲೇ ಉಗ್ರರ ವಿರುದ್ದ ಆರಂಭವಾಗಿರುವ ಸೇನಾ ಕಾರ್ಯಾಚರಣೆಯ ಕುರಿತಾಗಿ ಸಮಗ್ರ ಮಾಹಿತಿ ಪಡೆದರು.
Discussion about this post