ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನೋವಾ ಚಾರಿಟಬಲ್ ಟ್ರಸ್ಟ್’ನಲ್ಲಿ ಸಾಮಾಜಿಕ ದನಿ ಮಹೇಂದ್ರಕುಮಾರ್ ರವರ ಜನುಮ ದಿನದ ಸ್ಮರಣೆ ಕಾರ್ಯಕ್ರಮವನ್ನು ಜೆಸಿಐ ಶಿವಮೊಗ್ಗ ಶರಾವತಿ ಘಟಕ ಏರ್ಪಡಿಸಲಾಗಿತ್ತು.
ಲ್ ಇಂಡಿಯಾ ಕೌನ್ಸಿಲಿಂಗ್ ಹ್ಯುಮನ್ ರೈಟ್ಸ್ ಲಿಬರ್ಟಿಸಿ ಅಂಡ್ ಸೋಷಿಯಲ್ ಜಸ್ಟೀಸ್ ಜಿಲ್ಲಾ ಕಾರ್ಯದರ್ಶಿ ಸಿಗ್ಬದ್ ಉಲ್ಲಾ ಮಾತನಾಡಿ, ಮನುಷ್ಯ ಕುಲ ಒಂದೇ ಆಗಿದ್ದು ಮಾನವೀಯತೆಯ ತಳಹದಿಯಲ್ಲಿ ಸೌಹಾರ್ದತೆಯಿಂದ ಸಾಗಬೇಕಿದೆ ಎಂದರು.
ಮಹೇಂದ್ರಕುಮಾರ್ ಅವರು ನಮ್ಮೊಂದಿಗೆ ಇಲ್ಲದಿದ್ದರು ಅವರು ಸಾಮಾಜಿಕ ನ್ಯಾಯದಡಿಯ ಮಾತುಗಳು ಇಂದಿಗೂ ಜನಮಾನಸದಲ್ಲಿದೆ. ಯಾವುದೇ ಧರ್ಮ-ಜಾತಿಯವರೇ ಆಗಿರಲಿ ಅವರು ಸಾಂವಿಧಾನಿಕವಾದ ಸಾಮಾಜಿಕ ನ್ಯಾಯದಿಂದ ವಂಚಿತರಾಗಬಾರದು ಎಂದು ಹೇಳುತ್ತಿದ್ದರು. ಸಾಕಷ್ಟು ಜನಪರ ಭಾಷಣಗಳು ಇಂದಿಗೂ ಯೂ-ಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿದೆ ಎಂದು ಸಿಗ್ಬದ್ ಉಲ್ಲಾರವರು ವಿವರಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post