No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Wednesday, April 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಮಾಜಸೇವೆಯ ಸಂತ ಡಾ.ಎ. ಬಸವಣ್ಣಯ್ಯನವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 25, 2019
in Special Articles
0
ಸಮಾಜಸೇವೆಯ ಸಂತ ಡಾ.ಎ. ಬಸವಣ್ಣಯ್ಯನವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಹಳ ಜನ ತಮ್ಮ ಜೀವಮಾನದಲ್ಲಿ ಖ್ಯಾತಿಗಳಿಸುತ್ತಾರೆ. ಅದು ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳೇ ಇರಬಹುದು. ಕೆಲವರ ಹಿನ್ನೆಲೆ ತಿಳಿದರೆ ಅವರು ಅರ್ಜಿ ಗುಜರಾಯಿಸಿ, ವಶೀಲಿ ಮಾಡಿ ಅಂತೂ ಹೆಣಗಾಡಿ ಅಂತೂ ಒಂದು ಪ್ರಶಸ್ತಿ ಬಂತು ಅಂತ ನಿಟ್ಟುಸಿರು ಬಿಡುತ್ತಾರೆ. ಕೆಲವರಿಗೆ ಪ್ರಶಸ್ತಿಯೇ ಹುಡುಕಿ ಕೊಂಡು ಬರುತ್ತದೆ. ಇದು ಇಂದಿನ ನಿಷ್ಠುರ ವರ್ತಮಾನ. ವ್ಯವಸ್ಥೆಯೇ ಹಾಗಿದೆ.

ಇಂತಹ ಕೆಲವೇ ಕೆಲವು ಮಹನೀಯರಲ್ಲಿ ಎರಡನೆಯ ಪಂಕ್ತಿಗೆ ಸೇರಿದವರು ಚನ್ನಗಿರಿ ಹಿರಿಯ ವೈದ್ಯ ಮತ್ತು ಸಮಾಜ ಸೇವಕರಾಗಿದ್ದ ಡಾ.ಬಸವಣ್ಣಯ್ಯನವರು. ಅವರು ಇದೇ ನವೆಂಬರ್ ಹದಿನಾಲ್ಕರಂದು ಇಹಲೋಕ ತ್ಯಜಿಸಿದರು. ತೊಂಭತ್ಮೂರು ವರ್ಷಗಳ ಚೇತನ. ಇಡೀ ತಾಲೂಕಿನ ಜನತೆಯ ಪ್ರೀತಿಯ ಆರಾಧ್ಯಮೂರ್ತಿಗಳಾಗಿದ್ದರು. ಚಿಕ್ಕಹುಲಿಕೆರೆ ಗ್ರಾಮ ಚನ್ನಗಿರಿಗೆ ಹೊಂದಿಕೊಂಡಂತೆಯೇ ಇದೆ. ಚನ್ನಗಿರಿಯ ಮೂಲ ಹೆಸರು ದೊಡ್ಡಹುಲಿಕೆರೆ. ಚಿಕ್ಕಹುಲಿಕೆರೆಯ ಚಿಕ್ಕ ಮನುಷ್ಯ ತನ್ನ ಬಹುದೊಡ್ಡ ಮಾನವ ಪ್ರೀತಿಯಿಂದ ದೊಡ್ಡ ಹುಲಿಕೆರೆಯಲ್ಲೇ ದೊಡ್ಡವ್ಯಕ್ತಿ ವಿಶೇಷವಾಗಿ ಬೆಳಗಿದರು.

ಅವರು ನಮ್ಮ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದರು. ನಮ್ಮ ತಂದೆ ಒಳ್ಳೆಯ ಮಿತ್ರರು. ಡಾ.ಬಸವಣ್ಣಯ್ಯನವರು ನಮ್ಮ ಕುಟುಂಬ ವೈದ್ಯರು ಅಂತ ಹೇಳಿ ಪರಿಚಯಿಸಿದರೆ ಸಂಕುಚಿತ ಅರ್ಥ ಬರುತ್ತದೆ. ಬದಲಿಗೆ ಅವರು ಇಡೀ ಚನ್ನಗಿರಿ ತಾಲೂಕು ಮತ್ತು ಸುತ್ತ ಬಹುಸೀಮೆಯ ಕುಟುಂಬ ವೈದ್ಯರು ಅಂತ ಕರೆದರೆ ಯಾವ ಅತಿಶಯೋಕ್ತಿಯಾಗುವುದಿಲ್ಲ.

ನನಗೆ ತಿಳಿದಂತೆ ಅವರು ಮತ್ತು ಅಜ್ಜಿಹಳ್ಳಿ ಮರುಳಪ್ಪನವರು ಜೊತೆಗಾರರು. ಈರ್ವರೂ ಚನ್ನಗಿರಿ ತಾಲೂಕಿನ ಎರಡು ಕಣ್ಣುಗಳಾಗಿದ್ದರು ಎಂದರೆ ತಪ್ಪಲ್ಲ. ಇವತ್ತಿನ ಜನರಲ್ ಹಾಸ್ಟೆಲ್. ಜೂನಿಯರ್ ಕಾಲೇಜು. ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಡೀ ಭಾರತ ಖ್ಯಾತಿಯ ತುಮ್ಕೋಸ್. ಒಂದೇ ಎರೆಡೇ? ಇವರಿಬ್ಬರ ಶ್ರಮದಿಂದ ಎದ್ದು ನಿಂತ ಕಟ್ಟಡಗಳು ಬೃಹತ್ ಸಂಸ್ಥೆ ಇತ್ಯಾದಿ ಚನ್ನಗಿರಿಯಲ್ಲಿ ವೈದ್ಯ ವೃತ್ತಿ ಆರಂಭಿಸಿದ ಎರಡು ಮೂರು ಜನರಲ್ಲಿ ಇವರೂ ಸಮಕಾಲೀನರು.

ಡಾ.ಎ. ಬಸವಣ್ಣಯ್ಯನವರ ಜೊತೆಯಲ್ಲಿ ಡಾ.ಚನ್ನಗಿರಿ ಸುಧೀಂದ್ರ

ನಾನು ಚಿಕ್ಕಂದಿನಲ್ಲಿ ಡಾ.ಶಂಕರಪ್ಪ ಎಂಬ ಹೆಸರನ್ನೂ ಕೇಳಿದ್ದುಂಟು. ಇಡೀ ಊರಿನ ಜನಸೇವೆ ಒಂದೇ ಅಲ್ಲ ಅಭಿವೃದ್ಧಿಯ ಬಗ್ಗೆ ವಿಜಯ ಕ್ಲಿನಿಕ್ (ಡಾ.ಬಸವಣ್ಣಯ್ಯನವರ ಖಾಸಗಿ ಕ್ಲಿನಿಕ್’ನ ಹೆಸರು) ನಲ್ಲಿ ಚಿಂತನೆ ನಡೆಯುತ್ತಿತ್ತು. ಸದಾ ಅವರು ಒಬ್ಬರಲ್ಲ ಒಬ್ಬ ಅಧಿಕಾರಿಗಳ ಸಂಗಡ ಚರ್ಚೆ ಅಲ್ಲಿ ನಡೆಸುವುದು ನಾವು ನೋಡುತ್ತಿದ್ದ ಸಾಮಾನ್ಯ ದೃಶ್ಯ.

ಆಗಿನ ಕಾಲಕ್ಕೆ ಸರ್ಕಾರಿ ಸೇವೆ ಸುಲಭ ಸಿಗುತ್ತಿತ್ತು. ಅವರು ವೈದ್ಯಕೀಯ ಶಿಕ್ಷಣ ಪೂರೈಸಿದ ನಂತರ ನೌಕರಿ ಸೇರಿದ್ದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಬಹುದಿತ್ತು. ಆದರೆ ಅವರು ಅದಾವುದರ ಆಕರ್ಷಣೆಗೆ ಸಿಲುಕದೇ ಸ್ವಂತ ವೃತ್ತಿಗೆ ಬಂದರು. ತಮ್ಮ ಸರಳ ಮಾತು, ಸಜ್ಜನಿಕೆ, ಹೃದಯ ಶ್ರೀಮಂತಿಕೆಯಿಂದ ಕ್ರಮೇಣ ಜನಾನುರಾಗಿಗಳಾದರು. ಅವರಿಗಿದ್ದ ಸಂಘಟನಾ ಶಕ್ತಿ ಅತ್ಯಂತ ಸಾಮರ್ಥ್ಯವುಳ್ಳದ್ದಾಗಿತ್ತು. ಸಾರ್ವಜನಿಕ ಆಸ್ಪತ್ರೆಗೆ ಒಂದು ವಿಸ್ತಾರವಾದ ನಿವೇಶನ ಬೇಕು. ಅದು ಒಬ್ಬರಿಗೆ ಸೇರಿದ ಜಮೀನು. ಹೇಗೆ ಬಿಡಿಸಿಕೊಳ್ಳುವುದು? ಅಧಿಕಾರಿಗಳಿಗೆ ಸಮಸ್ಯೆಯಾದಾಗ ಬಸವಣ್ಣಯ್ಯನವರು ಜಮೀನು ಮಾಲಿಕರನ್ನು ಮನವೊಲಿಸಿದರು. ಹೀಗೆ ಅಲ್ಲಿಗೆ ನಿಯುಕ್ತರಾಗಿ ಬರುವ ಸರ್ಕಾರಿ ಅಧಿಕಾರಿಗಳು ಡಾಕ್ಟರನ್ನು ಪರಿಚಯಿಸಿಕೊಂಡರೆ ಸಾಕು ಅವರಿಗೆ ಎಲ್ಲ ಕೆಲಸ ಸಲೀಸು ಎನ್ನುವಷ್ಟರ ಮಟ್ಟಿಗೆ ಜನಪ್ರಿಯರಾದರು. ಮತ್ತೆ ಅಂತಹ ಅಧಿಕಾರಿಗಳನ್ನು ಬಸವಣ್ಣಯ್ಯನವರು ಯಾವತ್ತಿಗೂ ತಮ್ಮ ಸ್ವಂತ ಕೆಲಸಗಳಿಗೆ ದುರ್ಬಳಕೆ ಮಾಡಿಕೊಳ್ಳಲೇ ಇಲ್ಲ. ಇದು ಎಲ್ಲರೂ ಗಮನಿಸಬೇಕಾದ ಸಂಗತಿ.

ದೇವರು ಅವರಿಗೆ ಎಲ್ಲವನ್ನೂ ಕೊಟ್ಟಿದ್ದ. ಹಾಗಾಗಿ ಜೀವಿತದಲ್ಲಿ ಯಾವುದಕ್ಕೂ ಆಸೆ ಪಡಲಿಲ್ಲ. ಪುರಜನರ ಸೇವೆಯೇ ಹರನಸೇವೆಯೆಂಬಂತೆ ದುಡಿದರು. ಅವರು ತಮ್ಮ ಜೀವಮಾನದಲ್ಲಿ ಅಂದರೆ ನಡುವಯಸ್ಸಿನಲ್ಲೇ ಪಡೆದ ಜನಪ್ರಿಯತೆಯಿಂದ ಅವರು ಎಂಎಲ್’ಎ ಅಥವಾ ಎಂಪಿ ಆಗಿ ಆಯ್ಕೆಯಾಗಲು ಸಮರ್ಥರಿದ್ದರು. ಯಾವ ಪಕ್ಷವೂ ಬೇಡ, ಸ್ವತಂತ್ರರಾಗಿಯೇ ವಿಜಯಿಯಾಗುವ ನಾಯಕತ್ವ ಪಡೆದಿದ್ದರು. ಮನಸ್ಸು ಮಾಡಿದ್ದರೆ ಅವರು ಬದುಕಿರುವ ತನಕವೂ ಜನ ಪುನರಾಯ್ಕೆ ಮಾಡುತ್ತಿದ್ದರು. ಆದರೆ ಸಾಧಾರಣ ಮನುಷ್ಯರಾಗಿಯೇ ಉಳಿದ ಕಾಯಕಜೀವಿ ಬಸವಣ್ಣಯ್ಯನವರು.

ಡಾ.ಬಸವಣ್ಣಯ್ಯ

ಚನ್ನಗಿರಿಯಲ್ಲಿ ರೋಟರಿ ಚಳುವಳಿಗೆ ನಾಂದಿ ಹಾಡಿದರು. ಸಂಸ್ಥೆಯಿಂದ ಚನ್ನೇನಹಳ್ಳಿ ದತ್ತು ಪಡೆದು ಗ್ರಾಮಾಭಿವೃದ್ಧಿಗೆ ಶ್ರಮಿಸಿದರು. ರೋಟರಿ ಅವರಿಂದಾಗಿ ಸ್ಥಳೀಯವಾಗಿ ಸೇವಾ ಕ್ಷೇತ್ರದಲ್ಲಿ ಹೆಸರು ಪಡೆಯಿತು. ಸರ್ಕಾರಿ ಕಿರಿಯ ಕಾಲೇಜಿಗೆ ಕೊಠಡಿ ಕೊರತೆಯಿತ್ತು. ದಾನಿಗಳಿಗೆ ಅವರೇ ಪತ್ರ ಬರೆದು ದೇಶ ವಿದೇಶಗಳಲ್ಲಿರುವ ತಾಲೂಕಿನ ವ್ಯಕ್ತಿಗಳಿಂದ ಧನಸಹಾಯ ಕೋರಿದರು. ಸಮಿತಿಯಲ್ಲಿ ಬಸವಣ್ಣಯ್ಯನವರಿದ್ದಾರೆ ಎಂಬ ಒಂದೇ ಕಾರಣದಿಂದ ಹಣ ಹರಿದು ಬಂತು. ಸರ್ಕಾರದ ನಿಗದಿತ ಅವಧಿಗಿಂತ ಮುನ್ನವೇ ಕಿರಿಯ ಕಾಲೇಜಿಗೆ ದಾನಿಗಳ ಕಟ್ಟಡ ನಿಂತಿತು. ಸರ್ಕಾರದವರೇ ಬಹಳ ತಡವಾಗಿ ಮಿಕ್ಕ ಕೊಠಡಿ ನಿರ್ಮಿಸಿದರು. ಹೀಗೆಯೇ ಪ್ರಥಮ ದರ್ಜೆ ಕಾಲೇಜು, ವಿಜ್ಞಾನ ಪ್ರಯೋಗಾಲಯ.. ಇತ್ಯಾದಿ.

ಪತ್ರಕರ್ತ ಸತ್ಯನಾರಾಯಣ ನಾಡಿಗ್ ಅವರು ತಮ್ಮ ಪತ್ರಿಕೆ ಗ್ರಾಮೀಣ ವಾಣಿಗೆ ಸಂದರ್ಶಿಸಲು ನನಗೆ ಹೇಳಿದರು. ಅವರಿಗೆ ಪ್ರಶ್ನಾವಳಿ ಕೊಟ್ಟೆ. ನೀವು ರೇಡಿಯೋ ಸ್ಟೇಷನ್’ನವರು. ದೊಡ್ಡ ದೊಡ್ಡ ಪ್ರಶ್ನೆ ಕೇಳ್ತೀರಿ ಅಂತ ನಂಗೆ ಆತಂಕವಿತ್ತು ಅಂತ ಹೇಳಿ ನಕ್ಕರು. ಅವರ ನಗು ಎಂಥವರನ್ನೂ ಸೆಳೆಯುವ ಮುಗ್ಧ ನಗು.

ಕುಟುಂಬ ಕಲ್ಯಾಣ ವಿಷಯದ ಬಗ್ಗೆ ಅವರಿಗೆ ಭಾಷಣ ಬರೆಯಲು ಹೇಳಿದ್ದೆ. ಆಕಾಶವಾಣಿಗೆ ಧ್ವನಿಮುದ್ರಣಕ್ಕೂ ಬಂದಿದ್ದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಆಹ್ವಾನಿಸಿದ್ದೆ. ಬಹಳ ಮನಬಿಚ್ಚಿ ಮಾತನಾಡಿದ್ದರು.

ಚನ್ನಗಿರಿ ಮಾವಿನಹೊಳೆ ಜಲಾಶಯದ ಬಗ್ಗೆ ಅವರಿಗೆ ಬಹಳ ಒಲವು. ಅದರ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿದರೆ ಬಹಳ ಕೃಷಿಕರಿಗೆ ನೆರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಹುಷಃ ಈ ಯೋಜನೆ ಕಾರ್ಯಗತವಾದರೆ ಬಸವಣ್ಣಯ್ಯ ನೀರಾವರಿ ಯೋಜನೆ ಅಂತ ಹೆಸರಿಟ್ಟರೂ ಅದು ನಾವು ಡಾಕ್ಟರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.

ಮನುಷ್ಯ ಪ್ರೀತಿಯ, ಆರೋಗ್ಯ ಕಾಳಜಿಯ ಸದಾ ಹಸನ್ಮುಖಿಯಾಗಿ ಮಾತನಾಡುವ ಅವರ ವ್ಯಕ್ತಿತ್ವ ಮರೆಯಾದರೂ ಅವರು ತಮ್ಮ ಸಾಮಾಜಿಕ ಕಾರ್ಯಗಳಿಂದ ನಮ್ಮೊಂದಿಗೆ ಸದಾ ಇದ್ದಾರೆ. ಪರಶಿವ ಆವರಿಗೆ ಕೈಲಾಸ ಕರುಣಿಸಲಿ.

ಲೇಖನ: ಡಾ.ಚನ್ನಗಿರಿ ಸುಧೀಂದ್ರ

Get in Touch With Us info@kalpa.news Whatsapp: 9481252093

Tags: ChannagiriDr Channagiri SudheendraDr. BasavannaiahKannada ArticleSocial ServicesVijaya Clinicಚನ್ನಗಿರಿಡಾ.ಚನ್ನಗಿರಿ ಸುಧೀಂದ್ರಡಾ.ಬಸವಣ್ಣಯ್ಯವಿಜಯ ಕ್ಲಿನಿಕ್ಸಮಾಜಸೇವೆ
Share307Tweet123Send
Previous Post

ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್

Next Post

ಬರಗಾಲದ ನಾಡಿನ ಭಗೀರಥ ಎನಿಸಿಕೊಂಡ ಚಳ್ಳಕೆರೆ ಶಾಸಕರ ಸಾಧನೆ ಎಂತಹುದ್ದು ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಬರಗಾಲದ ನಾಡಿನ ಭಗೀರಥ ಎನಿಸಿಕೊಂಡ ಚಳ್ಳಕೆರೆ ಶಾಸಕರ ಸಾಧನೆ ಎಂತಹುದ್ದು ಗೊತ್ತಾ?

ಬರಗಾಲದ ನಾಡಿನ ಭಗೀರಥ ಎನಿಸಿಕೊಂಡ ಚಳ್ಳಕೆರೆ ಶಾಸಕರ ಸಾಧನೆ ಎಂತಹುದ್ದು ಗೊತ್ತಾ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಭಾರತವು ವಿಶ್ವಗುರು ಸ್ಥಾನ ಅಲಂಕರಿಸಲು ಮೂಲಶಕ್ತಿ ವೇದವ್ಯಾಸರು | ವಿದ್ಯೇಶತೀರ್ಥ ಶ್ರೀಗಳ ಅಭಿಮತ

ಭಾರತವು ವಿಶ್ವಗುರು ಸ್ಥಾನ ಅಲಂಕರಿಸಲು ಮೂಲಶಕ್ತಿ ವೇದವ್ಯಾಸರು | ವಿದ್ಯೇಶತೀರ್ಥ ಶ್ರೀಗಳ ಅಭಿಮತ

April 28, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಹೇಳಿಕೆ ಖಂಡನೀಯ: ಕೆ.ಪಿ.ಶ್ರೀಪಾಲ್

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಹೇಳಿಕೆ ಖಂಡನೀಯ: ಕೆ.ಪಿ.ಶ್ರೀಪಾಲ್

April 28, 2026
ಓಪನ್ ಮೈಂಡ್ಸ್ ಶಾಲೆಯಲ್ಲಿ ಕೆ-12 ಸೂಪರ್ ಇಂಟೆಲಿಜೆನ್ಸ್ ಪಠ್ಯಕ್ರಮ: ಕಿರಣ್‍ಕುಮಾರ್

ಓಪನ್ ಮೈಂಡ್ಸ್ ಶಾಲೆಯಲ್ಲಿ ಕೆ-12 ಸೂಪರ್ ಇಂಟೆಲಿಜೆನ್ಸ್ ಪಠ್ಯಕ್ರಮ: ಕಿರಣ್‍ಕುಮಾರ್

April 28, 2026
ನಿರಂತರ ಪ್ರಯತ್ನವೇ ಯಶಸ್ಸಿನ ಸೂತ್ರ: ಡಾ. ಪಿ. ನಾರಾಯಣ

ನಿರಂತರ ಪ್ರಯತ್ನವೇ ಯಶಸ್ಸಿನ ಸೂತ್ರ: ಡಾ. ಪಿ. ನಾರಾಯಣ

April 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL