ಕಲ್ಪ ಮೀಡಿಯಾ ಹೌಸ್ | ಸೊರಬ |
ಕೋವಿಡ್ Covid ಸಂಕಷ್ಟದಲ್ಲಿರುವ ಕಲಾವಿದರಿಗೆ ಅವರ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ವೇದಿಕೆ ನಿರ್ಮಿಸಿ ಸಹಕರಿಸುತ್ತಿರುವುದು ಸಂತಸದ ಸಂಗತಿ ಎಂದು ಹಾಸ್ಯ ಯಕ್ಷ ದಿಗ್ಗಜ ರವೀಂದ್ರ ದೇವಾಡಿಗರು ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜ್ ಆವರಣದಲ್ಲಿ ನಡೆದ ಪೆರ್ಡೂರು ಮೇಳದ ಶಿವರಂಜನಿ ಯಕ್ಷಗಾನಕ್ಕೆ Yakshagana ಪಾತ್ರದಾರಿಯಾಗಿ ಆಗಮಿಸಿದ ಅವರು ತಾಲ್ಲೂಕು ವಿಶ್ವಕರ್ಮ ಸಮಾಜ, ಯಕ್ಷರಂಗ ಮತ್ತು ಕನ್ನಡ ಸಾಂಸ್ಕೃತಿಕ ಜಗುಲಿ ಸಂಯುಕ್ತಾಶ್ರಯದಲ್ಲಿ ಕೊಡಮಾಡಿದ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಪ್ರತಿಭಾರಿ ಸಮ್ಮಾನ ಪಡೆಯಬೇಕಾದರೂ ಕಲಾವಿದನಾಗಿ ಯೋಚಿಸಬೇಕಾದುದು ನಾನಿನ್ನೂ ಬೆಳೆಯಬೇಕು, ನನ್ನ ಕಲಾ ಆರಾಧನೆಯ ಜವಾಬ್ಧಾರಿ ಇನ್ನ್ಟು ಹೆಚ್ಚಿಸಿದೆ ಎಂಬುದನ್ನು ಅರಿತು ಸನ್ಮಾನ, ಗೌರವದ ಮಾನ್ಯತೆಯ ಮೌಲ್ಯವನ್ನು ಉಳಿಸಿಕೊಳ್ಳಬೇಕು ಎಂದರು.
Also read: ಮೇರಿ ಇಮ್ಯಾಕ್ಯುಲೇಟ್ ಪರೀಕ್ಷಾ ಕೇಂದ್ರದಲ್ಲಿ ಜೇನು ದಾಳಿ: ವಿದ್ಯಾರ್ಥಿಗಳು ಸುರಕ್ಷಿತ
ಶಿವರಂಜನಿ ಹಾಸ್ಯ ಯಕ್ಷಗಾನದ ಹಿಮ್ಮೇಳದಲ್ಲಿ ರಂಗ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ್, ಶಂಕರಭಟ್ ಬ್ರಹ್ಮೂರ್, ಪ್ರಸನ್ನಭಟ್ ಬಾಳ್ಕಲ್, ಚಂದ್ರಯ್ಯ ಆಚಾರ್, ಸುನೀಲ್ ಭಂಡಾರಿ ಕಡತೋಕ, ಅಕ್ಷಯ ಆಚಾರ್ಯ ಬಿದ್ಕಲಕಟ್ಟೆ, ಹಾಲಾಡಿ ಸುಜನ ಕುಮಾರ್, ಕಾಡೂರು ರವಿ ಆಚಾರ್ಯ ಮುಮ್ಮೇಳದಲ್ಲಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಉಪ್ಪೂರು ಸುಧೀರ್, ನಾಗರಾಜ್ ಕುಂಕಿಪಾಲ್, ನಾಗರಾಜ ದೇವವಲ್ಗುಂದ, ಕಮಲಶೀಲೆ ರವೀಂದ್ರ ದೇವಾಡಿಗ, ಥಂಡಿಮನೆ ಶ್ರೀಪಾದ ಭಟ್, ಜಲವಳ್ಳಿ ವಿದ್ಯಾಧರ್, ಕಿರಾಡಿ ಪ್ರಕಾಶ್ ಮೊಗವೀರ, ಮಾಗೋಡು ಅಣ್ಣಪ್ಪ, ಚಿಟ್ಟಾಣಿ ಕಾರ್ತೀಕ್, ಬೆರೊಳ್ಳಿ ವಿನಯಭಟ್, ಸನ್ಮಯಭಟ್, ಭಾಸ್ಕರಮರಾಠೆ, ವಿನಾಯಕ ಗುಂಡುಬಾಳ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅಪಾರ ಸಂಖ್ಯೆಯ ಕಲಾರಸಿಕರನ್ನು ರಂಜಿಸಿದರು.
ಸಂಘಟನೆಯ ಪ್ರಮುಖರು ಸೇರಿದಂತೆ ಯಕ್ಷಕಲೆಯ ಪೋಷಕ, ಮಹಾಪೋಷಕರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post