ಕಲ್ಪ ಮೀಡಿಯಾ ಹೌಸ್
ಸೊರಬ: ಕಳೆದ ಎರಡು ತಿಂಗಳಲ್ಲಿ ಕೋವಿಡ್ ಕಾಯಿಲೆಯಿಂದ ಶೇ.2ಕ್ಕಿಂತ ಕಡಿಮೆ ಅಸುನೀಗಿದ್ದು, ಶೇ.98 ಗುಣಮುಖರಾಗಿದ್ದಾರೆ. ಆದರೆ, ಜನರಿಗೆ ಗುಣಮುಖರಾದವರ ಬಗ್ಗೆ ಗೊತ್ತಾಗುವುದಿಲ್ಲ. ಅವರು ಯಾವ ರೀತಿ ಚಿಕಿತ್ಸೆ ಪಡೆದರು. ಅದರ ವಿಶೇಷತೆ ಏನು ಎಂಬುದರ ಮಾಹಿತಿ ಜನಸಾಮಾನ್ಯರಿಗೆ ದೊರಕಬೇಕಾಗುತ್ತದೆ ಎಂದು ಪಟ್ಟಣದ ಖ್ಯಾತ ವೈದ್ಯ ಡಾ.ಎಂ.ಕೆ.ಭಟ್ ಹೇಳಿದ್ದಾರೆ.
ಕೋವಿಡ್ ಆತಂಕದ ಕುರಿತು ಕಲ್ಪಾ ಮೀಡಿಯಾ ಹೌಸ್ ಜೊತೆ ಮಾತನಾಡಿದ ಅವರು, ಜನರಲ್ಲಿ ಆತ್ಮ ವಿಶ್ವಾಸದ ಜೊತೆಗೆ ಪರಿಹಾರದ ದಾರಿ ತಿಳಿಯುವಂತಾಗಬೇಕು. ಮರಣ ಹೊಂದಿದ ಶೇ.2 ಜನರಿಗೆ ನಾನು ಶಾಂತಿ ಕೋರುತ್ತೇನೆ. ಇಂತಲ್ಲಿ ಮಹಾಮಾರಿಯ ಯುದ್ಧದಲ್ಲಿ ಸತ್ತವರ ನೋವಿನ ಕತೆಗಳನ್ನು, ಅವರ ಅಂತ್ಯಕ್ರಿಯೆಯ ಭೀಕರತೆಯನ್ನು, ಅವರನ್ನ ಅವಲಂಬಿಸಿದವರ ಗೋಳನ್ನು ಬಿತ್ತರಿಸುತ್ತ ಹೋದರೆ ಜನಸಾಮಾನ್ಯರು ಭಯದ ಕೂಪಕ್ಕೆ ಸಿಲುಕುತ್ತಾರೆ. ಹಾವು ಕಚ್ಚಿದ ಭಯದಿಂದ ಸಾಯುವವರ ಹಾಗೆ ಕೊರೋನಾ ಪಾಸಿಟಿವ್ ಆದ ಕೂಡಲೆ ಭಯದಿಂದ ಸಾಯುವವರು ಹೆಚ್ಚಾಗುತ್ತಾರೆ. ಹಾಗಾಗಿ, ಮಿಡೀಯಗಳು ಸತ್ತವರ ವಿಷಯಗಳನ್ನು ವಿಜೃಂಭಿಸುವುದಕ್ಕಿಂತ ಅವರ ಸಾವಿಗೆ ಇತರೆ ಕಾರಣಗಳಿದ್ದರೆ, ರಕ್ತದೊತ್ತಡ, ಡಯಾಬಿಟಿಸ್, ದಮ್ಮು, ವಯಸ್ಸು ಅವುಗಳ ಬಗ್ಗೆ ಮಾಹಿತಿ ಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಆರೋಗ್ಯ ಇಲಾಖೆಯ ಸಣ್ಣಪುಟ್ಟ ಲೋಪದೋಷಗಳನ್ನು, ಸರ್ಕಾರದ ಲೋಕಗಳನ್ನು ವಿಜೃಂಭಿಸದೆ ನಿಮ್ಮದೆ ಆದ ಪರಿಹಾರವನ್ನು ಸೂಚಿಸಿ. ಇಲ್ಲದೆ ಹೋದರೆ ವೈದ್ಯರ, ಸರ್ಕಾರದ, ಸರ್ಕಾರ ನೀಡುವ ಆದೇಶ ಮುಂತಾದವುಗಳ ಬಗ್ಗೆ ಜನಸಾಮಾನ್ಯರಲ್ಲಿ ವಿಶ್ವಾಸ ಕುಂದುತ್ತದೆ. ಇದು ಮುಂದೆ ರೋಗಕ್ಕಿಂತ ಭಯಾನಕ ಸಾಮಾಜಿಕ ದುರಂತವನ್ನು ತರುತ್ತದೆ ಎಂದು ಎಚ್ಚರಿಸಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post