ಕಲ್ಪ ಮೀಡಿಯಾ ಹೌಸ್
ಸೊರಬ: ಮಾನವನ ದೈನಂದಿನ ಚಟುವಟಿಕೆಗಳು ಸುವ್ಯವಸ್ಥಿತವಾಗಿ ನಡೆಯಲು ಕ್ರಿಯಾಶೀಲವಾದ ಚಟುವಟಿಕೆಯುಳ್ಳ ಸೃಜನಾತ್ಮಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಹಾಗೂ ಉತ್ತಮವಾದ ಆರೋಗ್ಯವನ್ನು ಹೊಂದಿ ಸೃಜನಶೀಲವಾದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಮೈಸೂರಿನ ಆಯುರ್ವೇದ ವೈದ್ಯರಾದ ಡಾ.ಜ್ಯೋತಿ ಅಭಿಪ್ರಾಯಪಟ್ಟರು.
ಪಟ್ಟಣದ ಮುರುಘಾಮಠದಲ್ಲಿ ಆಯೋಜಿಸಲಾಗಿದ್ದ ದಿನಚರ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚೀನ ವೇದಗಳಲ್ಲಿಯೇ ಆಯುರ್ವೇದದ ಬಗ್ಗೆ ಉಲ್ಲೇಖವಿದ್ದು. ಮಾನವ ತನ್ನ ಸ್ವಾಸ್ಥ್ಯರಕ್ಷಣೆಗೆ ತನ್ನ ದೇಹದಲ್ಲಿ ವಾತ, ಪಿತ್ತ, ಕಫ ಎಂಬ ಆಯುರ್ವೇದದ ವಿಭಾಗಗಳು ಸರಿಯಾಗಿರಬೇಕು. ಪುರುಷಾರ್ಥಗಳನ್ನು ಗೆಲ್ಲಬೇಕಾದರೆ ಆರೋಗ್ಯ ಮುಖ್ಯವಾಗಿದ್ದು, ಉತ್ತಮ ಜೀವನಶೈಲಿಯನ್ನು ಹೊಂದಿದವರು ರೋಗಗಳ ಬಾಧೆಯಿಂದ ದೂರವಿರಲು ಸಾಧ್ಯ. ಆಯುರ್ವೇದದಲ್ಲಿರುವ ನಿಯಮಗಳ ಪಾಲನೆಯಿಂದ ಸದೃಢ ಆರೋಗ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಉದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಮಹೇಶ್ ಮಾತನಾಡಿ, ಮಾನವನ ಋಣಾತ್ಮಕ ಚಿಂತನೆಗಳನ್ನು ಬಿಟ್ಟು ಧನಾತ್ಮಕವಾದ ಮಾನಸಿಕ ಚಿಂತನೆಗಳನ್ನು ರೂಢಿಸಿಕೊಂಡು ಚಟುವಟಿಕೆಯಿಂದ ಇದ್ದಾಗ ದೈಹಿಕ ಹಾಗೂ ಮಾನಸಿಕ ಆರೋಗ್ಯ ಗಳನ್ನ ಸಮತೋಲನದಲ್ಲಿಟ್ಟುಕೊಳ್ಳಲು ಸಾಧ್ಯವಿದೆ ಎಂದರು.
ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಮಾನವನು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡು ಪೂರಕವಾಗಿ ಯೋಗ ಮಾಡುತ್ತಿದ್ದರೆ. ಉತ್ತಮ ಆರೋಗ್ಯದಿಂದ ರೋಗವನ್ನು ತಡೆಗಟ್ಟಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಡಿ.ಶಿವಯೋಗಿ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಲೋಲಾಕ್ಷಮ್ಮ, ರೇಣುಕಮ್ಮ ಗೌಳಿ, ನಾಗರಾಜ್ ಗುತ್ತಿ, ವಿನೋದವಾಲ್ಮೀಕಿ, ನಾಗಪ್ಪ, ಚಂದ್ರಣ್ಣ ನಿಜಗುಣ ಮೊದಲಾದವರಿದ್ದರು. ಶ್ರೀಧರ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಲಕ್ಷ್ಮೀಕಾಂತ್ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post